ಹೈದರಾಬಾದ್: ಅಕ್ಟೋಬರ್ 2ರಂದು ಸಮಂತಾ-ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್ ಘೋಷಣೆ ಮಾಡಿದ ಬೆನ್ನಲ್ಲೇ ಅನೇಕ ವದಂತಿಗಳು ಹರಿದಾಡುತ್ತಿವೆ. ಎರಡು ಕುಟುಂಬಗಳ ಇತಿಹಾಸ ಕೆದಕ್ಕುತ್ತಿರುವುದಲ್ಲದೆ, ಡಿವೋರ್ಸ್ ಹಿಂದಿನ ಕಾರಣಗಳನ್ನು ತಿಳಿಯಲು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಯತ್ನಿಸಲಾಗುತ್ತಿದೆ.
ಈಗಾಗಲೇ ನಾಗಸಮಂತಾ ಕುರಿತಾದ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಯೂಟ್ಯೂಬ್ನಲ್ಲಿ ತೀರಾ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿಯೇ ಊಹಾಪೋಹಗಳನ್ನು ಸೇರಿಸಿ ಹರಿಬಿಡುತ್ತಿರುವುದು ಸಮಂತಾ ಮನಸ್ಸನ್ನು ಕದಡಿದೆ. ಹೀಗಾಗಿಯೇ ಸ್ಯಾಮ್ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ ಮಾಡಿದ್ದಾರೆ.
ಸಮಂತಾ ತಮ್ಮ ಫ್ಯಾಷನ್ ಡಿಸೈನರ್ ಪ್ರೀತಂ ಝುಕಲ್ಕರ್ ಜತೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವನ್ನು ಯೂಟ್ಯೂಬ್ನಲ್ಲಿ ಥಂಬ್ನೈಲ್ ಆಗಿ ಬಳಸಿ ಊಹಾಪೋಹಗಳನ್ನು ಹರಿಬಿಡಲಾಗುತ್ತಿದೆ. ಫೋಟೋಗೂ ಮತ್ತು ಹೇಳುವ ಸ್ಟೋರಿಗೂ ಒಂದಕ್ಕೊಂದು ಸಂಬಂಧ ಇಲ್ಲದಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಕೆಲ ಡಿಜಿಟಲ್ ಕಂಟೆಂಟ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಸಮಂತಾ ಅವರ ತಂಡ ಮುಂದಾಗಿದೆ ಎಂದು ತಿಳಿದುಬಂದಿದೆ.
ಸೆಲೆಬ್ರಿಟಿ ಬ್ರೇಕ್ಅಪ್ ಬಳಿಕ ಇಂತಹ ಸುದ್ದಿಗಳು ಸಾಮಾನ್ಯ ಆದಷ್ಟು ಮೌನವಾಗಿರಿ ಎಂದು ಉದ್ಯಮದ ಕೆಲವು ಜನರು ಸಲಹೆ ನೀಡಿದ್ದಾರೆನ್ನಲಾಗಿದೆ. ಆದರೆ, ಚಿತ್ರರಂಗದಲ್ಲಿ ಆ ಥಂಬ್ನೇಲ್ಗಳು ತನ್ನ ಭವಿಷ್ಯಕ್ಕೆ ಆಗುವ ಹಾನಿಯ ಬಗ್ಗೆ ನಟಿ ಯೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್)
ಶೂಟಿಂಗ್ ಸೆಟ್ನಲ್ಲಿ ಗಳಗಳನೇ ಅತ್ತ ಸಮಂತಾ! ಸ್ಯಾಮ್ ಕಣ್ಣೀರು ನೋಡಿ ಚಿತ್ರತಂಡ ಹೇಳಿದ್ದು ಹೀಗೆ…
ಸಮಂತಾ ಡಿವೋರ್ಸ್ ಹಿಂದಿರುವ ವ್ಯಕ್ತಿ ಈತನೇನಾ? ಅನುಮಾನ ಹುಟ್ಟುಹಾಕಿದೆ ಈ ವೈರಲ್ ಫೋಟೋ..!
ಮಗಳ ಡಿವೋರ್ಸ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಸಮಂತಾ ತಂದೆ ಜೋಸೆಫ್ ಪ್ರಭು..!