ಹೈದರಾಬಾದ್: ತಾರಾದಂಪತಿ ಸಮಂತಾ-ನಾಗಚೈತನ್ಯ 4 ವರ್ಷಗಳ ವೈವಾಹಿಕ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇಬ್ಬರ ನಡುವಿನ ಮನಸ್ತಾಪಗಳಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಾಗಾದರೆ, ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವೇನು ಎಂಬ ಪ್ರಶ್ನೆಗೆ ಸಾಕಷ್ಟು ಊಹಾಪೋಹಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದೀಗ ಕೇಳಿಬಂದಿರುವ ಮತ್ತೊಂದು ವದಂತಿಯೆಂದರೆ, ಸಮಂತಾ ಡಿವೋರ್ಸ್ ಹಿಂದೆ ವ್ಯಕ್ತಿಯೊಬ್ಬನ ಕೈವಾಡ ಇದೆ ಎನ್ನಲಾಗಿದೆ. ಯಾರಾತ ಎಂದು ನೋಡಿದಾಗ ಆತನ ಹೆಸರು ಪ್ರೀತಂ ಝುಕಲ್ಕರ್ ಎಂದು ಕೇಳಿಬರುತ್ತಿದೆ. ಈತ ಸಮಂತಾರ ಕಾಸ್ಟ್ಯೂಮ್ ಡಿಸೈನರ್ ಆಗಿದ್ದು, ಅನೇಕ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಸದ್ಯ ಸಮಂತಾ ಮತ್ತು ಪ್ರೀತಂ ಝುಕಲ್ಕರ್ ಒಟ್ಟಿಗೆ ಇರುವ ಫೋಟೋವೊಂದು ವೈರಲ್ ಆಗಿದೆ. ಫೋಟೋದಲ್ಲಿ ಸೋಫಾದ ಮೇಲೆ ಮಲಗಿರುವ ಸಮಂತಾ ಝುಕಲ್ಕರ್ ತೊಡೆಗಳ ಮೇಲೆ ತಮ್ಮ ಕಾಲುಗಳನ್ನು ಹಾಕಿಕೊಂಡಿದ್ದಾರೆ. ಇಬ್ಬರು ತುಂಬಾ ಆತ್ಮಿಯರಾಗಿರುವಂತೆ ಕಾಣುತ್ತಿದೆ. ಇದು ಕೂಡ ನಾಗಚೈತನ್ಯಗೆ ಬೇಸರ ಉಂಟುಮಾಡಿರಬಹುದು ಎಂಬ ಮಾತುಗಳ ಕೇಳಿಬರುತ್ತಿದೆ. ಈ ಫೋಟೋವನ್ನು ಸಮಂತಾ ಹುಟ್ಟುಹಬ್ಬದ ದಿನ ಝುಕಲ್ಕರ್ ಪೋಸ್ಟ್ ಮಾಡಿ “ಐ ಲವ್ ಯು” ಎಂದು ಬರೆದುಕೊಂಡಿದ್ದ.
ಸಮಂತಾ ಡಿವೋರ್ಸ್ ಘೋಷಣೆ ಮಾಡಿದ ಬೆನ್ನಲ್ಲೇ ಆ ಪೋಸ್ಟ್ ಝುಕಲ್ಕರ್ ಅವರ ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಆಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಮಂತಾ ಎರಡನೇ ಮದುವೆ ಆಗಲಿದ್ದಾರೆ ಎಂಬ ವದಂತಿಯು ಹರಿದಾಡುತ್ತಿದೆ.
ಇನ್ನು ಸಮಂತಾ ಡಿವೋರ್ಸ್ ಬಗ್ಗೆ ಝುಕಲ್ಕರ್ ಆಡಿರುವ ಮಾತುಗಳು ಸಹ ಅನುಮಾನ ಹುಟ್ಟುಹಾಕಿದೆ. ಪುರುಷರ ಸ್ವಭಾವವನ್ನು ತಮ್ಮ ಮನೆಗಳಲ್ಲಿ ಮರೆಮಾಚುವ ಯಾವುದೇ ಕುಟುಂಬವು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿದೆ. ಇಂದಿನ ದಿನಗಳಲ್ಲಿ ಟೀಕೆ ಮತ್ತು ಟ್ರೋಲ್ ಹಿಂಸೆಯ ಪ್ರತಿರೂಪ ಆಗಿವೆ ಎಂದು ಝುಕಲ್ಕರ್ ಸಮಂತಾ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ, ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದಂತೆ ಅವುಗಳನ್ನು ಡಿಲೀಟ್ ಮಾಡಿರುವುದನ್ನು ಅವಲೋಕಿಸಿದರೆ, ಯಾವುದೋ ಅಪರಿಚಿತ ಶಕ್ತಿ ನಾಗಸಮಂತಾರನ್ನು ಬೇರ್ಪಡಿಸಿದೆ ಎಂದು ತಿಳಿಯುತ್ತದೆ.
ಅ.2ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡುವ ಮೂಲಕ ಡಿವೋರ್ಸ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್ ಆನ್ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ವಿಘ್ನೇಶ್ ಶಿವನ್ ರೌಡಿ ಪಿಕ್ಚರ್ಸ್ ಸಹಯೋಗದೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋದಿಂದ ಬಂಡವಾಳ ಹೂಡುತ್ತಿರುವ ತಮಿಳು ಸಿನಿಮಾ ಕಾತು ವಾಕುಲಾ ರಂಡು ಕಾದಲ್ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಬಣ್ಣ ಹಚ್ಚಿದ್ದು, ಶಾಕುಂತಲಂ ಚಿತ್ರದ ಚಿತ್ರೀಕರಣವನ್ನು ಸಮಂತಾ ಸಂಪೂರ್ಣ ಮುಗಿಸಿದ್ದಾರೆ. (ಏಜೆನ್ಸೀಸ್)
ಒಂದು ವರ್ಷದ ಹಿಂದೆ ಇದೇ ದಿನ ಸಮಂತಾ ಆಡಿದ್ದ ಮಾತು ಇಷ್ಟು ಬೇಗ ಸುಳ್ಳಾಗಿ ಹೋಯಿತಾ..?!
ಮಗಳ ಡಿವೋರ್ಸ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಸಮಂತಾ ತಂದೆ ಜೋಸೆಫ್ ಪ್ರಭು..!
ಮದುವೆಗೂ ಮುನ್ನವೇ ಒಪ್ಪಂದವೊಂದಕ್ಕೆ ಸಹಿ ಹಾಕಿ ತನ್ನ ಹಕ್ಕನ್ನು ಕಳೆದುಕೊಂಡರಾ ನಟಿ ಸಮಂತಾ?