ಚೆನ್ನೈ: ಕರ್ತವ್ಯ ನಿರತ ಮಹಿಳಾ ಸಬ್ ಇನ್ಸ್ಪೆಕ್ಟರ್ ಮೇಲೆ ವ್ಯಕ್ತಿಯೊಬ್ಬ ದಾಳಿ ಮಾಡಿರುವ ಆತಂಕಕಾರಿ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಶುಕ್ರವಾರ ರಾತ್ರಿ ಸುಥಮಲ್ಲಿ ಪಕ್ಕದ ಪಹವೂರ್ ಗ್ರಾಮದ ದೇವಸ್ಥಾನದಲ್ಲಿ ಹಬ್ಬ ನಡೆಯುತ್ತಿತ್ತು. ಈ ವೇಳೆ ಎಸ್ಐ ಮಾರ್ಗರೇಟ್ ಥೆರೆಸಾ(29) ಕರ್ತವ್ಯದಲ್ಲಿದ್ದರು. ಹಬ್ಬ ಮುಗಿದ ಬಳಿಕ ದೇವಸ್ಥಾನದ ಫ್ಲೆಕ್ಸ್ ತೆರೆವುಗೊಳಿಸುವಾಗ ಆರುಮುಗಸ್ವಾಮಿ (40) ಎಂಬ ವ್ಯಕ್ತಿ ಮಾರ್ಗರೇಟ್ ಜತೆ ವಾಗ್ವಾದಕ್ಕೆ ಇಳಿದಿದ್ದ. ಮಾತಿನ ಚಕಮಕಿ ನಡೆಯುವಾಗಲೇ ಚಾಕು ತೆಗೆದು ಮಾರ್ಗರೇಟ್ ಮುಖ ಮತ್ತು ಕುತ್ತಿಗೆಗೆ ದಾಳಿ ಮಾಡಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಎಸ್ಐ ಮಾರ್ಗರೇಟ್ ಅವರನ್ನು ತಕ್ಷಣ ತಿರುನೆಲ್ವೇಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ ಹಳೆಯ ದ್ವೇಷವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕೆ ಒಂದು ತಿಂಗಳ ಹಿಂದೆ ಆರುಮುಗಸ್ವಾಮಿ ವಿರುದ್ಧ ಮಾರ್ಗರೇಟ್ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಿಸಿದ್ದರು. ಇದರಿಂದ ಅಸಮಾಧನಗೊಂಡಿದ್ದ ಆತ ಇದೀಗ ಸಾರ್ವಜನಿಕರ ಎದುರೇ ಅವರ ಮೇಲೆ ದಾಳಿ ಮಾಡಿದ್ದಾನೆ. ಆರುಮುಗಸ್ವಾಮಿಯನ್ನು ತಿರುನೆಲ್ವೇಲಿ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ವರೆಗೂ ಮುಟ್ಟಿದೆ. ಏ. 23ರಂದು ಟ್ವೀಟ್ ಮಾಡಿರುವ ಸ್ಟಾಲಿನ್, ನಾನು ಎಸ್ಐ ಮಾರ್ಗರೇಟ್ ಜತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದೇನೆ. ಆರೋಪಿಯನ್ನು ಬಂಧಿಸಲಾಗಿದೆ. ಮಾರ್ಗರೇಟ್ ಅವರಿಗೆ ಗುಣಮಟ್ಟದ ಚಿಕಿತ್ಸೆ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಗುಳಂ: ನಯ ವಂಚಕಿ ಸೆರೆ
ಸಮಂತಾ ಯಾಕೆ ಈ ರೀತಿ ಟ್ವೀಟ್ ಮಾಡಿದ್ರು? ನೆಟ್ಟಿಗರ ತಲೆಗೆ ಹುಳ ಬಿಟ್ಟ ಸೌತ್ ಬ್ಯೂಟಿಯ ಈ ಒಂದು ಟ್ವೀಟ್!
ಪ್ರಭಾಸ್ ನಟನೆಯ ಸಲಾರ್ ಮೇಲೆ KGF-2 ಗೆಲುವಿನ ಒತ್ತಡ! ಸಾಹೋ ಅನುಭವ ಮರೆಯುವಂತಿಲ್ಲ