More

    ಪ್ರಶಾಂತ್​ ನೀಲ್​ ತಪ್ಪು ಮಾಡಿದ್ರಾ? KGF-2 ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ಎದುರಾಯ್ತು ಹೊಸ ಸಂಕಷ್ಟ!

    ಬೆಂಗಳೂರು: ನಟ ಯಶ್​​ ಅಭಿನಯದ ಹಾಗೂ ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದು, ಬಾಕ್ಸ್​ ಆಫೀಸ್​ನಲ್ಲಿ ಆರ್ಭಟ ಮುಂದುವರಿಸಿದೆ. ಕೆಜಿಎಫ್​ 1 ಮತ್ತು 2 ಎರಡು ಚಾಪ್ಟರ್​ಗಳು ಯಶಸ್ಸು ಕಂಡಿದ್ದು, ಚಿತ್ರತಂಡ ಇದರ ಖುಷಿಯಲ್ಲಿರುವಾಗಲೇ ಹೊಸ ತಲೆನೋವೊಂದು ಎದುರಾಗಿದೆ.

    ರಾಕಿಭಾಯ್​ ಪಾತ್ರವನ್ನು ನಿಜ ಜೀವನದ ಪಾತ್ರವೊಂದರಿಂದ ಪ್ರಭಾವಿತರಾಗಿ ತೆಗೆದುಕೊಂಡಿದ್ದು ಎಂದು ಈ ಹಿಂದೆ ಪ್ರಶಾಂತ್​ ನೀಲ್​ ಹೇಳಿದ್ದರು. ಇದೀಗ ರಿಯಲ್​ ಜೀವನದ ಅದೇ ರಾಕಿಭಾಯ್​ನಿಂದಲೇ ಚಿತ್ರಕ್ಕೆ ತಲೆನೋವೊಂದು ಎದುರಾಗಿದೆ. ಕೆಜಿಎಫ್​ ಚಿತ್ರ ತಂಗಂ ಹೆಸರಿನ ರೌಡಿಯನ್ನು ಆಧರಿಸಿದ ಕತೆ ಎಂಬ ಮಾಹಿತಿ ಇದೆ. ತಂಗಂ ಕೋಲಾರ ಚಿನ್ನದ ಗಣಿಯಲ್ಲಿ ಕೆಲಸ ಮಾಡುವಾಗ ಅಲ್ಲಿ ಗ್ಯಾಂಗ್​ ಒಂದನ್ನು ಕಟ್ಟಿಕೊಂಡು ಗ್ಯಾಂಗ್​ ಸಹಾಯದಿಂದ ಕೆಜಿಎಫ್​ನಲ್ಲಿ ಸಾಕಷ್ಟು ಚಿನ್ನವನ್ನೇ ಎಗರಿಸಿದ್ದ. ಇದರಿಂದಾಗ ಆತಿ ಜೂನಿಯರ್​ ವೀರಪ್ಪನ್​ ಎಂಬ ಹೆಸರನ್ನು ಪಡೆದುಕೊಂಡಿದ್ದಾನೆ. ಅಲ್ಲದೆ, ತಾನು ಲೂಟಿ ಮಾಡಿದ ಚಿನ್ನವನ್ನು ಆತ ಜನರಿಗೂ ಹಂಚುತ್ತಿದ್ದ ಎಂದು ಹೇಳಲಾಗಿದೆ.

    1997ರಲ್ಲಿ ನಡೆದ ಪೊಲೀಸ್​ ಎನ್​ಕೌಂಟರ್​ನಲ್ಲಿ ತಂಗಂ ಮೃತಪಟ್ಟಿದ್ದಾನೆ. ಇದೀಗ ಅವರ ತಾಯಿ ಕೆಜಿಎಫ್​ ಚಿತ್ರತಂಡದ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಕೆಜಿಎಫ್​ನಲ್ಲಿ ನನ್ನ ಮಗನ ಕತೆಯನ್ನು ತೋರಿಸಲಾಗಿದೆ. ನಮಗೆ ಒಂದು ಮಾತು ಹೇಳದೆ ಕೆಜಿಎಫ್​ ಚಿತ್ರವನ್ನು ಬರೆಯಲಾಗಿದೆ. ಇದರ ವಿರುದ್ಧ ಕಾನೂನು ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.

    ಇದೇ ವಿಚಾರ ಇದೀಗ ಕೆಜಿಎಫ್​ ಚಿತ್ರತಂಡಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಇನ್ನೊಂದೆಡೆ ಕೆಜಿಎಫ್​ 2 ಚಿತ್ರ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಅಲ್ಲದೆ, ಚಿತ್ರದಲ್ಲಿ ಕ್ರೌರ್ಯವನ್ನು ತೋರಿಸಲಾಗಿದೆ. ಯಾವುದೇ ಸಾಮಾಜಿಕ ಸಂದೇಶವಿಲ್ಲ. ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಚಿತ್ರ ಎಂಬ ಟೀಕೆಗಳು ಕೇಳಿಬರುತ್ತಿವೆ. (ಏಜೆನ್ಸೀಸ್​)

    ಬಗೆದಷ್ಟು ಹೊರ ಬರ್ತಿದೆ PSI ಪರೀಕ್ಷಾ ಅಕ್ರಮ: ಮುನ್ನಾಭಾಯಿ MBBS ಸ್ಟೈಲ್​ನಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು

    ಲವರ್​ ಜತೆ ತಂಗಿ ಬೈಕ್​ನಲ್ಲಿ ಹೋಗುವುದನ್ನು ನೋಡಿದ ಅಣ್ಣ: ಮುಂದಾಗಿದ್ದೇನು? ಇಲ್ಲಿದೆ ಭಯಾನಕ ದೃಶ್ಯ

    ಕಾಡುತ್ತಿದೆ ಕಲ್ಲಿದ್ದಲು ಕೊರತೆ, ವಿದ್ಯುತ್ ಅಭಾವ ಭೀತಿ; 81 ಸ್ಥಾವರಗಳಲ್ಲಿ ನಿಶ್ಚಿತ ದಾಸ್ತಾನಿಲ್ಲ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts