ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ ಬಳಿಕ ತಂಡದಲ್ಲಿ ಸ್ಥಾನದಲ್ಲಿ ಪಡೆದಿರುವ ಕೆಲ ಪ್ರಮುಖ ಆಟಗಾರರು ಐಪಿಎಲ್ನಲ್ಲಿ ನೀರಸ ನಿರ್ವಹಣೆ ತೋರಿಸಿದ್ದಾರೆ. ಇದರ ನಡುವೆ, ಐಪಿಎಲ್ನಲ್ಲಿ ಕಳೆದ ಕೆಲ ಪಂದ್ಯಗಳಲ್ಲಿ ನೀರಸ ನಿರ್ವಹಣೆ ತೋರಿರುವ ನಡುವೆಯೂ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ವೇಗಿ ಮೊಹಮದ್ ಸಿರಾಜ್, ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪರ ಅಮೋಘ ಬೌಲಿಂಗ್ ನಿರ್ವಹಣೆ ತೋರುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವುದನ್ನು ಪ್ರಶ್ನಿಸುತ್ತಿದ್ದವರಿಗೆ ದಿಟ್ಟ ಉತ್ತರವನ್ನೂ ನೀಡಿದರು. 4 ಓವರ್ಗಳ ದಾಳಿಯಲ್ಲಿ 29 ರನ್ಗಳಿಗೆ 2 ವಿಕೆಟ್ ಪಡೆದ ಸಿರಾಜ್, ಪ್ರಮುಖವಾಗಿ ಪವರ್ಪ್ಲೇನಲ್ಲೇ ಗುಜರಾತ್ ತಂಡದ ಸದ್ದಡಗಿಸಿದರು. ಇದಕ್ಕೆ ಅರ್ಹವಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದುಬಂದಿತು.