More

    ಟಿ20 ವಿಶ್ವಕಪ್​ಗೆ ಆಯ್ಕೆಯನ್ನು ಟೀಕಿಸುತ್ತಿದ್ದವರಿಗೆ ದಿಟ್ಟ ಉತ್ತರ ನೀಡಿದ ಮೊಹಮದ್​ ಸಿರಾಜ್​!

    ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾವನ್ನು ಪ್ರಕಟಿಸಿದ ಬಳಿಕ ತಂಡದಲ್ಲಿ ಸ್ಥಾನದಲ್ಲಿ ಪಡೆದಿರುವ ಕೆಲ ಪ್ರಮುಖ ಆಟಗಾರರು ಐಪಿಎಲ್​ನಲ್ಲಿ ನೀರಸ ನಿರ್ವಹಣೆ ತೋರಿಸಿದ್ದಾರೆ. ಇದರ ನಡುವೆ, ಐಪಿಎಲ್​ನಲ್ಲಿ ಕಳೆದ ಕೆಲ ಪಂದ್ಯಗಳಲ್ಲಿ ನೀರಸ ನಿರ್ವಹಣೆ ತೋರಿರುವ ನಡುವೆಯೂ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿರುವ ವೇಗಿ ಮೊಹಮದ್​ ಸಿರಾಜ್​, ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಪರ ಅಮೋಘ ಬೌಲಿಂಗ್​ ನಿರ್ವಹಣೆ ತೋರುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು.

    ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿರುವುದನ್ನು ಪ್ರಶ್ನಿಸುತ್ತಿದ್ದವರಿಗೆ ದಿಟ್ಟ ಉತ್ತರವನ್ನೂ ನೀಡಿದರು. 4 ಓವರ್​ಗಳ ದಾಳಿಯಲ್ಲಿ 29 ರನ್​ಗಳಿಗೆ 2 ವಿಕೆಟ್​ ಪಡೆದ ಸಿರಾಜ್​, ಪ್ರಮುಖವಾಗಿ ಪವರ್​ಪ್ಲೇನಲ್ಲೇ ಗುಜರಾತ್​ ತಂಡದ ಸದ್ದಡಗಿಸಿದರು. ಇದಕ್ಕೆ ಅರ್ಹವಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts