ಹೈದರಾಬಾದ್: ಪಾನಮತ್ತ ಯುವಕನೊಬ್ಬ ಟ್ರಾಫಿಕ್ ಪೊಲೀಸರು ಮೇಲೆ ಕಲ್ಲು ಮತ್ತು ಇಟ್ಟಿಗೆಯಿಂದ ದಾಳಿ ಮಾಡಿರುವ ಘಟನೆ ಹೈದರಾಬಾದ್ನ ಜೀಡಿಮೆಟ್ಲಾ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಪೊಲೀಸರು ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುವಾಗ ಮಧ್ಯ ಪ್ರವೇಶಿಸಿದ ಪಾನಮತ್ತ ಯುವಕ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದೆ, ಸ್ಥಳದಲ್ಲಿ ಸಿಕ್ಕ ಕಲ್ಲು ಮತ್ತು ಇಟ್ಟಿಗೆಗಳಿಂದ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ.
ಸ್ವಲ್ಪ ಸಮಯದ ಬಳಿಕ ಕೆಲವು ಜನರ ಸಹಾಯದಿಂದ ಹೇಗೋ ಯುವಕನನ್ನು ನಿಯಂತ್ರಿಸಿದ ಪೊಲೀಸರು, ಕೈಕಾಲು ಕಟ್ಟಿಕೊಂಡು ಠಾಣೆಗೆ ಹೊತ್ತೊಯ್ದರು. ತೀವ್ರ ಪಾನಮತ್ತನಾಗಿದ್ದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. (ಏಜೆನ್ಸೀಸ್)
ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!
ನಡುರಸ್ತೆಯಲ್ಲೇ ಎಣ್ಣೆ ಕುಡಿದು ಪೊಲೀಸರಿಗೆ ಅವಾಜ್ ಹಾಕಿದವನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ!
5 ಮನೆ, ಈಜುಕೊಳ, ಥಿಯೇಟರ್, ಬಾರ್, ಲಕ್ಷುರಿ ಕಾರುಗಳು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳೇ ಶಾಕ್