More

    ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!

    ಗಜಪತಿ: ಒಡಿಶಾದ ಪರಲಖೆಮುಂಡಿಯ ಅರಣ್ಯ ಸಹಾಯಕ ಸಂರಕ್ಷಕ (ಎಸಿಎಫ್​) ಅಧಿಕಾರಿ ಸೌಮ್ಯ ರಂಜನ್​ ಮೊಹಪಾತ್ರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸೌಮ್ಯ ರಂಜನ್​ ತಂದೆ ಅಭಿಮನ್ಯು ಮೊಹಪಾತ್ರ ಒಡಿಶಾದ ಅಪರಾಧ ವಿಭಾಗದ ಎಡಿಜಿ ಸಂಜೀಬ್​ ಪಾಂಡಾ ಅವರನ್ನು ಭೇಟಿ ಮಾಡಿ, ಮಗನ ನಿಗೂಢ ಸಾವು ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಮಂಗಳವಾಗಿ ಕೋರಿದ್ದಾರೆ.

    ನನ್ನ ಮಗ ಸೌಮ್ಯ ರಂಜನ್​ ಮೊಹಪಾತ್ರ ನಿಗೂಢವಾಗಿ ಸಾವಿಗೀಡಾಗಿ 75 ದಿನಗಳು ಕಳೆದಿವೆ. ಆದರೆ, ನಮಗಿನ್ನೂ ನ್ಯಾಯ ದೊರೆತಿಲ್ಲ. ಎಡಿಜಿ ಅವರನ್ನು ಭೇಟಿ ಮಾಡಿ ಈ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಮನವಿ ಮಾಡಲು ನಾನಿಲ್ಲಿಗೆ ಬಂದೆ ಎಂದು ಮಾಧ್ಯಮಗಳಿಗೆ ಅಭಿಮನ್ಯು ಮೊಹಪಾತ್ರ ಹೇಳಿಕೆ ನೀಡಿದ್ದಾರೆ.

    ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!

    ಪರಲಖೆಮುಂಡಿಯ ಡಿಎಫ್​ಒ (ವಿಭಾಗೀಯ ಅರಣ್ಯಾಧಿಕಾರಿ) ಸಂಗ್ರಾಮ್​ ಕೇಸರಿ ಬೇರೆ ಎಲ್ಲಿಗಾದರೂ ವರ್ಗಾಯಿಸಬೇಕೆಂದು ನಾವು ಬಯಸಿದ್ದೇವೆ. ಈ ಪ್ರಕರಣದಲ್ಲಿ ಬಿದ್ಯಾ ಭಾರತಿ ಪಾಂಡಾ (ಮೃತ ಸೌಮ್ಯ ರಂಜನ್​ ಪತ್ನಿ) ಳನ್ನು ಏಕೆ ಇನ್ನು ಬಂಧಿಸಿಲ್ಲ? ಈ ಪ್ರಕರಣದಲ್ಲಿ ಹೊಸದಾಗಿ ತನಿಖೆಯ ಅವಶ್ಯಕತೆ ಇದೆ. ಪರಲಖೆಮುಂಡಿಯ ಎಸಿಎಫ್​ಒ ಭಾಸ್ಕರ್​ ರಾವ್​, ಅಡುಗೆ ಭಟ್ಟ ಮನ್ಮಥ್​ ಕುಭ್​, ಮಾಜಿ ಸೆಕ್ಯುರಿಟಿ ಗಾರ್ಡ್​ ಗಂಗಾ ಪ್ರಧಾನ್​, ಚಾಲಕ, ತೋಟದ ಮಾಲಿ, ತಹಸೀಲ್ದಾರ್​, ಗರಂಡಿ ಪೊಲೀಸ್​ ಠಾಣೆಯ ಒಐಸಿ ಮಮತಾ ಪಾಂಡಾ ಮತ್ತು ಪರಲಖೆಮುಂಡಿಯ ಐಐಸಿ ಬಿಬೆಕನಂದಾ ಸ್ವೈನ್​ ಇಷ್ಟೂ ಜನರನ್ನು ಮತ್ತೆ ವಿಚಾರಣೆ ನಡೆಸಬೇಕಿದೆ ಎಂದು ಅಭಿಮನ್ಯು ಮೋಹಪಾತ್ರ ಮನವಿ ಮಾಡಿಕೊಂಡಿದ್ದಾರೆ.

    ಮತ್ತೊಮ್ಮೆ ತನಿಖೆ ನಡೆಸುವುದಾಗಿ ಎಡಿಜಿ ಭರವಸೆ ನೀಡಿದ್ದಾರೆ. ಇಲ್ಲಿಯವರೆಗೂ ನಡೆದಿರುವ ತನಿಖೆಯ ಮೇಲೆ ಅನುಮಾನವಿದೆ ಎಂದು ಅಭಿಮನ್ಯು ಮೋಹಪಾತ್ರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.

    ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!

    ಸೌಮ್ಯ ರಂಜನ್​ ಕುಟುಂಬ ಬಲವಾದ ಆರೋಪ ಮಾಡಿದ್ದು, ಡಿಎಫ್​ಒ ಮತ್ತು ಬಿದ್ಯಾಭಾರತಿ ಪಾಂಡಾ ನಡುವೆ ಅನೈತಿಕ ಸಂಬಂಧ ಇತ್ತು. ಇದರಿಂದಲೇ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿತ್ತು. ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದು, ಎಫ್​ಐಆರ್​ನಲ್ಲಿ ಡಿಎಫ್​ಒ ಮತ್ತು ಬಿದ್ಯಾಭಾರತಿಯನ್ನು ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.

    ಅಂದಹಾಗೆ ಎಸಿಎಫ್​ ಸೌಮ್ಯ ರಂಜನ್ ಅವರು​ ಜುಲೈ 11ರಂದು ಪರಲಖೆಮುಂಡಿಯ ತಮ್ಮ ಕ್ವಾಟ್ರಸ್​ನಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಕೂಡ ಆಸ್ಪತ್ರೆಗೆ ದಾಖಲಿಸಿದ ದಿನದ ಬೆನ್ನಲ್ಲೇ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. (ಏಜೆನ್ಸೀಸ್​)

    ಅರಣ್ಯಾಧಿಕಾರಿ ಸಾವು ಪ್ರಕರಣ: ಪತ್ನಿಯ ಅಕ್ರಮ ಸಂಬಂಧದ ಮುಖವಾಡ ಕಳಚಲು ಪೊಲೀಸರ ಮೆಗಾ ಪ್ಲಾನ್​..!

    ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

    ನಟಿ ಕೃಷಿ ತಾಪಂಡ ಕನಸು-ನನಸು; ಬೀರು ಬ್ರ್ಯಾಂಡ್ ನೇಮ್

    ಅತ್ಯಾಚಾರ ಸಂತ್ರಸ್ತೆಯ ಜೀವ ಉಳಿಸಿದ ನಟಿ ಜ್ಯೋತಿಕಾ ಸಿನಿಮಾ: ಸಂಬಂಧಿಯ ಕರಾಳ ಮುಖ ಬಿಚ್ಚಿಟ್ಟ ಬಾಲಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts