More

    ಸರ್ಕಾರಿ ನೌಕರಿ ತಂದಿಟ್ಟ ಸಂಕಟ: ಪ್ರಾಣಿಗೆ ಚಿಕಿತ್ಸೆ ಕೊಡಲು ಹೋದ ಪಶುವೈದ್ಯನಿಗೆ ಕಾದಿತ್ತು ಬಿಗ್​ ಶಾಕ್​!

    ಪಟನಾ: ಪ್ರಾಣಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪಶುವೈದ್ಯರೊಬ್ಬರನ್ನು ಊರಿಗೆ ಕರೆಸಿಕೊಂಡು, ಕಿಡ್ನಾಪ್​ ಮಾಡಿ ಬಲವಂತದಿಂದ ಮದುವೆ ಮಾಡಿರುವ ಘಟನೆ ಬಿಹಾರದ ಬೆಗುಸರಾಯ್​ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

    ಈ ಘಟನೆಯ ಬಗ್ಗೆ ಸಂತ್ರಸ್ತ ಪಶುವೈದ್ಯನ ಸಂಬಂಧಿಯೊಬ್ಬರು ಮಾತನಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಯನ್ನು ಪರೀಕ್ಷಿಸಲು ಮಧ್ಯಾಹ್ನ 12 ಗಂಟೆಗೆ ಪಶುವೈದ್ಯನನ್ನು ಕರೆಸಿಕೊಂಡರು. ಬಳಿಕ 3 ಮಂದಿ ಸೇರಿ ಅವನನ್ನು ಅಪಹರಿಸಿದರು. ಇದರಿಂದ ಮನೆಯಲ್ಲಿದ್ದವರೆಲ್ಲರೂ ಆತಂಕಕ್ಕೊಳಗಾದರು. ಬಳಿಕ ಎಲ್ಲರು ಸೇರಿ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದೆವು ಎಂದಿದ್ದಾರೆ.

    ಪಶುವೈದ್ಯನ ತಂದೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಎಸ್​ಎಚ್​ಒ ಮತ್ತು ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆರೋಪ ಸಾಬೀತಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಗುಸರಯ್​ ಪೊಲೀಸ್​ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್​ ಅವರು ಮಾಹಿತಿ ನೀಡಿದ್ದಾರೆ.

    ಅಂದಹಾಗೆ ವರನ ಅಪಹರಣ ಅಥವಾ ‘ಪಕದ್ವಾ ವಿವಾಹ’ ಎಂಬುದು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಸಾಕಷ್ಟು ಸಾಮಾನ್ಯವಾದ ವಿದ್ಯಮಾನವಾಗಿದೆ. ಬ್ರಹ್ಮಚಾರಿಗಳನ್ನು ಕಿಡ್ನಾಪ್​ ಮಾಡಿ ಬಂದೂಕಿನಿಂದ ಹೆದರಿಸಿ ಬಲವಂತವಾಗಿ ಮದುವೆ ಮಾಡಲಾಗುತ್ತದೆ.

    ಆರ್ಥಿಕವಾಗಿ ಸದೃಢವಾದ ಮತ್ತು ಸಾಮಾಜಿಕ ಭದ್ರತೆ ಹೊಂದಿರುವ ಅಥವಾ ಸರ್ಕಾರಿ ನೌಕರಿಯಲ್ಲಿರುವ ಅವಿವಾಹಿತರನ್ನು ಗುರಿಯಾಗಿಸಿ, ವಧುವಿನ ಕುಟುಂಬದ ಸದಸ್ಯರು ಕಿಡ್ನಾಪ್​ ಮಾಡುತ್ತಾರೆ. ಬಳಿಕ ಅವರನ್ನು ಹೆದರಿಸುತ್ತಾರೆ ಮತ್ತು ಒಪ್ಪಿಕೊಳ್ಳುವವರೆಗೂ ಥಳಿಸಿ, ಬಲವಂತವಾಗಿ ಮದುವೆ ಮಾಡುತ್ತಾರೆ. ಈ ರೀತಿಯ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿದೆ. (ಏಜೆನ್ಸೀಸ್​)

    PSI ನೇಮಕಾತಿ ಅಕ್ರಮ: ಮಧ್ಯವರ್ತಿಯಾಗಿದ್ದ ಆರೋಪದಡಿ ಬ್ಯಾಡರಹಳ್ಳಿ ಠಾಣೆಯ ಪಿಎಸ್​ಐ ಹರೀಶ್​ ಬಂಧನ

    ತಾಳಿಯೂ ಇಲ್ಲ, ಹಾರವೂ ಇಲ್ಲ: ವಧು- ವರರಿಬ್ಬರಿಗೂ ಷಟಸ್ಥಲ ಮುದ್ರೆಯ ಸರ; ಗದಗದಲ್ಲಿ ಡಿಫರೆಂಟ್​ ಮದುವೆ

    ರಾಷ್ಟ್ರಪತಿ ರೇಸ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡ! ಅಪ್ಪ-ಮಗನಿಗೆ ದೀದಿ ಬುಲಾವ್​: ಹೆಚ್ಚಿದೆ ಕುತೂಹಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts