ಪಟನಾ: ಪ್ರಾಣಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪಶುವೈದ್ಯರೊಬ್ಬರನ್ನು ಊರಿಗೆ ಕರೆಸಿಕೊಂಡು, ಕಿಡ್ನಾಪ್ ಮಾಡಿ ಬಲವಂತದಿಂದ ಮದುವೆ ಮಾಡಿರುವ ಘಟನೆ ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಈ ಘಟನೆಯ ಬಗ್ಗೆ ಸಂತ್ರಸ್ತ ಪಶುವೈದ್ಯನ ಸಂಬಂಧಿಯೊಬ್ಬರು ಮಾತನಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಯನ್ನು ಪರೀಕ್ಷಿಸಲು ಮಧ್ಯಾಹ್ನ 12 ಗಂಟೆಗೆ ಪಶುವೈದ್ಯನನ್ನು ಕರೆಸಿಕೊಂಡರು. ಬಳಿಕ 3 ಮಂದಿ ಸೇರಿ ಅವನನ್ನು ಅಪಹರಿಸಿದರು. ಇದರಿಂದ ಮನೆಯಲ್ಲಿದ್ದವರೆಲ್ಲರೂ ಆತಂಕಕ್ಕೊಳಗಾದರು. ಬಳಿಕ ಎಲ್ಲರು ಸೇರಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆವು ಎಂದಿದ್ದಾರೆ.
ಪಶುವೈದ್ಯನ ತಂದೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಎಸ್ಎಚ್ಒ ಮತ್ತು ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆರೋಪ ಸಾಬೀತಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಗುಸರಯ್ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಅಂದಹಾಗೆ ವರನ ಅಪಹರಣ ಅಥವಾ ‘ಪಕದ್ವಾ ವಿವಾಹ’ ಎಂಬುದು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಸಾಕಷ್ಟು ಸಾಮಾನ್ಯವಾದ ವಿದ್ಯಮಾನವಾಗಿದೆ. ಬ್ರಹ್ಮಚಾರಿಗಳನ್ನು ಕಿಡ್ನಾಪ್ ಮಾಡಿ ಬಂದೂಕಿನಿಂದ ಹೆದರಿಸಿ ಬಲವಂತವಾಗಿ ಮದುವೆ ಮಾಡಲಾಗುತ್ತದೆ.
ಆರ್ಥಿಕವಾಗಿ ಸದೃಢವಾದ ಮತ್ತು ಸಾಮಾಜಿಕ ಭದ್ರತೆ ಹೊಂದಿರುವ ಅಥವಾ ಸರ್ಕಾರಿ ನೌಕರಿಯಲ್ಲಿರುವ ಅವಿವಾಹಿತರನ್ನು ಗುರಿಯಾಗಿಸಿ, ವಧುವಿನ ಕುಟುಂಬದ ಸದಸ್ಯರು ಕಿಡ್ನಾಪ್ ಮಾಡುತ್ತಾರೆ. ಬಳಿಕ ಅವರನ್ನು ಹೆದರಿಸುತ್ತಾರೆ ಮತ್ತು ಒಪ್ಪಿಕೊಳ್ಳುವವರೆಗೂ ಥಳಿಸಿ, ಬಲವಂತವಾಗಿ ಮದುವೆ ಮಾಡುತ್ತಾರೆ. ಈ ರೀತಿಯ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿದೆ. (ಏಜೆನ್ಸೀಸ್)
PSI ನೇಮಕಾತಿ ಅಕ್ರಮ: ಮಧ್ಯವರ್ತಿಯಾಗಿದ್ದ ಆರೋಪದಡಿ ಬ್ಯಾಡರಹಳ್ಳಿ ಠಾಣೆಯ ಪಿಎಸ್ಐ ಹರೀಶ್ ಬಂಧನ
ತಾಳಿಯೂ ಇಲ್ಲ, ಹಾರವೂ ಇಲ್ಲ: ವಧು- ವರರಿಬ್ಬರಿಗೂ ಷಟಸ್ಥಲ ಮುದ್ರೆಯ ಸರ; ಗದಗದಲ್ಲಿ ಡಿಫರೆಂಟ್ ಮದುವೆ
ರಾಷ್ಟ್ರಪತಿ ರೇಸ್ನಲ್ಲಿ ಮಾಜಿ ಪ್ರಧಾನಿ ದೇವೇಗೌಡ! ಅಪ್ಪ-ಮಗನಿಗೆ ದೀದಿ ಬುಲಾವ್: ಹೆಚ್ಚಿದೆ ಕುತೂಹಲ