ಬೆಂಗಳೂರು: ಬಿಗ್ಬಾಸ್ ಕನ್ನಡದ ಒಟಿಟಿ ಎರಡು ವಾರ ಪೂರ್ಣಗೊಳಿಸಿ ಮೂರನೇ ವಾರಾಂತ್ಯಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್ ಯೋಗೇಶ್ವರ್ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇದೀಗ ಮೂರನೇ ವಾರದಲ್ಲಿ ಯಾರು ದೊಡ್ಮನೆ ತೊರೆಯಲ್ಲಿದ್ದಾರೆ ಎಂಬ ಊಹೆಗಳು ನಡೆಯುತ್ತಿದೆ. ಇದರ ನಡುವೆಯೇ ಬಹುತೇಕರು ಈ ಬಾರಿ ಜಯಶ್ರೀ ಆರಾಧ್ಯ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಗೆಸ್ ಮಾಡುತ್ತಿದ್ದಾರೆ.
ಜಯಶ್ರೀ ಆರಾಧ್ಯರ ಬದಲಾದ ನಡವಳಿಕೆಯಿಂದ ವೀಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೆ ಜಗಳವಾಡುತ್ತಾರಂತೆ. ತಮ್ಮ ಜಗಳದಿಂದಲೇ ಮನೆಯ ಇತರೆ ಸ್ಪರ್ಧಿಗಳನ್ನು ತೀವ್ರವಾಗಿ ಕಾಡುತ್ತಿದ್ದಾರೆ. ನಿನ್ನೆಯ ಎಪಿಸೋಡ್ನಲ್ಲಿ ಸೋಮಣ ಮಾಚಿಮಾಡ ಮತ್ತು ನಂದು ಜೊತೆಗಿನ ವಿವೇಚನಾರಹಿತ ವಾಗ್ವಾದದಿಂದ ವೀಕ್ಷಕರಿಗೆ ಕಿರಿಕಿರಿ ಉಂಟು ಮಾಡಿದರು. ತುಂಬಾ ವಿವಾದಗಳನ್ನು ಜಯಶ್ರೀ ಸೃಷ್ಟಿ ಮಾಡುತ್ತಿದ್ದು, ವಿವಾದಾತ್ಮಕ ಸ್ಪರ್ಧಿಯಾಗಿರುವುದರಿಂದ ಜಯಶ್ರೀ ಅವರನ್ನು ಬಿಗ್ಬಾಸ್ ಉಳಿಸಿಕೊಳ್ಳುತ್ತಿದೆ ಎಂದು ಒಂದು ವರ್ಗದ ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ. ಆದರೆ, ಟಾಸ್ಕ್ನಲ್ಲಿ ಜಯಶ್ರೀ ಪ್ರದರ್ಶನ ಕಳಪೆಯಾಗಿದೆ. ಅಲ್ಲದೆ, ಅವರ ವರ್ತೆಯು ಸಹ ವೀಕ್ಷಕರಿಗೆ ಬೇಸರ ಉಂಟು ಮಾಡಿರುವುದರಿಂದ ಈ ಬಾರಿ ಬಿಗ್ಬಾಸ್ ಮನೆಯಿಂದ ಜಯಶ್ರೀ ಹೊರ ಹೋಗಲಿದ್ದಾರೆ ಎಂದು ಹೇಳುತ್ತಿದ್ದಾರೆ.
ಅಂದಹಾಗೆ ಮೂರನೇ ವಾರದ ಎಲಿಮಿನೇಷನ್ನಲ್ಲಿ ಜ್ಯೋತಿಷಿ ಆರ್ಯವರ್ಧನ್, ರೂಪೇಶ್ ಶೆಟ್ಟಿ, ಅಕ್ಷತಾ ಕುಕಿ, ಚೈತ್ರಾ, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ಮತ್ತು ಉದಯ್ ಸೂರ್ಯ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಟಿ ಮಾನ್ವಿತಾ ತಾಯಿಯ ಚಿಕಿತ್ಸೆಗೂ ನೆರವಾದ್ರು ಬಾಲಿವುಡ್ ನಟ ಸೋನು ಸೂದ್
ಇತ್ತೀಚೆಗೆ ನಡೆದ ಟಾಸ್ಕ್ನಲ್ಲಿ ನಂದು ಮತ್ತು ಅಕ್ಷತಾ ಕುಕ್ಕಿ ಉತ್ತಮ ಪ್ರದರ್ಶನ ನೀಡಿದ್ದರು. ಅಕ್ಷತಾ ಕುಕ್ಕಿ ತನ್ನ ಆಟದಿಂದ ನೋಡುಗರ ಮನಸೂರೆಗೊಂಡಿದ್ದಾರೆ. ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಕನ್ನಡ OTT ತಯಾರಕರು ಯಾರನ್ನು ಮನೆಯಿಂದ ಹೊರಗಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
ಆ ಒಂದು ಕೆಟ್ಟ ಬೈಗುಳ: 5 ವರ್ಷದ ಬಳಿಕ ವಿಜಯ್ ದೇವರಕೊಂಡ ವಿರುದ್ಧ ಸೇಡು ತೀರಿಸಿಕೊಂಡ ಅನಸೂಯ!
ಲಾಡ್ಜ್ಗೆ ಕರೆಸಿಕೊಂಡು ಯುವಕನ ಬಳಿ ಸುಲಿಗೆ: ಬಂಧಿತ ಲೇಡಿಯ ಮೊಬೈಲ್ನಲ್ಲಿದ್ದ ಸ್ಫೋಟಕ ರಹಸ್ಯ ಬಯಲು!