ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಭವಿಷ್ಯ ನುಡಿದಿದ್ದು, ಉಗ್ರರ ಆಳ್ವಿಕೆ ಶೀಘ್ರವೇ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ತಮ್ಮ ಫೇಸ್ಬುಕ್ನಲ್ಲಿ ಆಫ್ಘಾನ್ಗೆ ಕವಿದಿರುವ ಕಾರ್ಮೋಡದ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಹೀಗೆ ಬರೆದುಕೊಂಡಿದ್ದಾರೆ… ಕುಜ ದೃಷ್ಟಿ ಕೇತುವಿಗಿರಬೇಕು, ರವಿಯಿಂದ ಕೇತುವು 80°( ಉತ್ಪಾತ ಲಗ್ನವಾಗುತ್ತದೆ) ದೂರದಲ್ಲಿ ಇರಬೇಕು. ಕುಜನು ಈ ಉತ್ಪಾತ ಲಗ್ನಕ್ಕೆ ಬೆಂಬಲವಾಗಿ ತನ್ನ ನಾಲ್ಕನೆಯ ದೃಷ್ಟಿಯಲ್ಲಿ ಇರಬೇಕು. ಚಂದ್ರ, ಶುಕ್ರ, ಬುಧ ಹಾಗೂ ಗುರು ಸಂಪರ್ಕ ಈ ಸ್ಥಿತಿಗೆ ಇರಬಾರದು. ಹೀಗಿದ್ದಾಗ ಇದೊಂದು ಭೀಕರ ಕಾಳಗವೋ, ಭೂ ಕಂಪನವೋ,ಅಥವಾ ಭೂಮಿ ಕಂಪಿಸುವ ವಾತಾವರಣವೋ,ಅಗ್ನಿ ಅನಾಹುತವೋ ಆಗಲು ಸಾಧ್ಯ ಇರುವ ದಿನವಾಗುತ್ತದೆ.
ಸಾಮಾನ್ಯವಾಗಿ ಈಗ ನಾವು ನೋಡುತ್ತಿರುವ ಅಪಘಾನಿಸ್ಥಾನದ ವಿದ್ಯಾಮಾನಗಳೇ ಉಲ್ಭಣಾವಸ್ಥೆಗೆ ತಲುಪಬಹುದು. ಸೆ. 1 ರಿಂದ 5 ರ ವರೆಗೆ ಈ ಸ್ಥಿತಿ ಕಾಣುತ್ತದೆ. ವಿಪರೀತ ನರಮೇಧ, ಬಾಂಬು ಸ್ಫೋಟಗಳಾಗಿ ಮರೆಯಲಾಗದ ಒಂದು ಸನ್ನಿವೇಶ ಉಂಟಾಗಲಿದೆ ಎಂದು ಪ್ರಕಾಶ್ ಅಮ್ಮಣ್ಣಾಯ ಅವರು ಬರೆದುಕೊಂಡಿದ್ದಾರೆ.
ಆಗಷ್ಟ್ 15ರಂದು ತಾಲಿಬಾನಿಗಳು ಆಫ್ಘಾನ್ ರಾಜಧಾನಿ ಕಾಬುಲ್ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಇಡೀ ಆಫ್ಘಾನ್ ತಾಲಿಬಾನಿಗಳ ವಶವಾಗಿದೆ. ಶಾಂತಿ ನೆಲೆಸಿದ್ದ ಆಫ್ಘಾನ್ ನೆಲದಲ್ಲಿ ಸದ್ಯ ಮದ್ದು ಗುಂಡುಗಳ ಆರ್ಭಟ ಜೋರಾಗಿದ್ದು, ಅಲ್ಲಿನ ಜನರು ನಿರಂತರವಾಗಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಸಾಕಷ್ಟು ಮಂದಿ ತಾಲಿಬಾನ್ ಆಡಳಿತಕ್ಕೆ ಹೆದರಿ ದೇಶ ತೊರೆಯಲು ಹವಣಿಸುತ್ತಿದ್ದು, ಕಾಬುಲ್ ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಕಳೆದ ಗುರುವಾರವಷ್ಟೇ ಕಾಬುಲ್ ಏರ್ಪೋರ್ಟ್ನಲ್ಲಿ ಅಮೆರಿಕ ಸೇನಾ ಪಡೆಗಳನ್ನು ಗುರಿಯಾಗಿಸಿ ಐಎಸ್-ಕೆ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 13 ಯೋಧರು ಸೇರಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಆಫ್ಘಾನ್ನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.
ಬೆಕ್ಕನ್ನು ನೋಡಿದ್ರೆ ದುರಾದೃಷ್ಟ ಅಂದುಕೊಳ್ಳುವವರು ಈ ಸ್ಟೋರಿನಾ ಓದಲೇ ಬೇಕು: 10 ಲಕ್ಷ ಬಂಪರ್ ಬಹುಮಾನ!
ಬಸ್ ಟಿಕೆಟ್ನಿಂದ ಸಿಕ್ಕಿಬಿದ್ದರು!; ಮೈಸೂರಲ್ಲಿ ಯುವತಿ ಗ್ಯಾಂಗ್ರೇಪ್ ಕೇಸ್, ತಮಿಳುನಾಡಿನಲ್ಲಿ ಐವರ ಸೆರೆ
ವಿದ್ಯಾರ್ಥಿಗಳಿಗೆ ಎನ್ಇಪಿ ಸ್ವಾತಂತ್ರ್ಯ; ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತ ಪಿ. ಪ್ರದೀಪ್ ಮಾತು