More

    ಸೆಪ್ಟೆಂಬರ್​ 1 ರಿಂದ 5… ಆಫ್ಘಾನ್​ ಬೆಳವಣಿಗೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!

    ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಭವಿಷ್ಯ ನುಡಿದಿದ್ದು, ಉಗ್ರರ ಆಳ್ವಿಕೆ ಶೀಘ್ರವೇ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ತಮ್ಮ ಫೇಸ್​ಬುಕ್​ನಲ್ಲಿ ಆಫ್ಘಾನ್​ಗೆ ಕವಿದಿರುವ ಕಾರ್ಮೋಡದ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಹೀಗೆ ಬರೆದುಕೊಂಡಿದ್ದಾರೆ… ಕುಜ ದೃಷ್ಟಿ ಕೇತುವಿಗಿರಬೇಕು, ರವಿಯಿಂದ ಕೇತುವು 80°( ಉತ್ಪಾತ ಲಗ್ನವಾಗುತ್ತದೆ) ದೂರದಲ್ಲಿ ಇರಬೇಕು. ಕುಜನು ಈ ಉತ್ಪಾತ ಲಗ್ನಕ್ಕೆ ಬೆಂಬಲವಾಗಿ ತನ್ನ ನಾಲ್ಕನೆಯ ದೃಷ್ಟಿಯಲ್ಲಿ ಇರಬೇಕು. ಚಂದ್ರ, ಶುಕ್ರ, ಬುಧ ಹಾಗೂ ಗುರು ಸಂಪರ್ಕ ಈ ಸ್ಥಿತಿಗೆ ಇರಬಾರದು. ಹೀಗಿದ್ದಾಗ ಇದೊಂದು ಭೀಕರ ಕಾಳಗವೋ, ಭೂ ಕಂಪನವೋ,ಅಥವಾ ಭೂಮಿ ಕಂಪಿಸುವ ವಾತಾವರಣವೋ,ಅಗ್ನಿ ಅನಾಹುತವೋ ಆಗಲು ಸಾಧ್ಯ ಇರುವ ದಿನವಾಗುತ್ತದೆ.

    ಸೆಪ್ಟೆಂಬರ್​ 1 ರಿಂದ 5... ಆಫ್ಘಾನ್​ ಬೆಳವಣಿಗೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!ಸಾಮಾನ್ಯವಾಗಿ ಈಗ ನಾವು ನೋಡುತ್ತಿರುವ ಅಪಘಾನಿಸ್ಥಾನದ ವಿದ್ಯಾಮಾನಗಳೇ ಉಲ್ಭಣಾವಸ್ಥೆಗೆ ತಲುಪಬಹುದು. ಸೆ. 1 ರಿಂದ 5 ರ ವರೆಗೆ ಈ ಸ್ಥಿತಿ ಕಾಣುತ್ತದೆ. ವಿಪರೀತ ನರಮೇಧ, ಬಾಂಬು ಸ್ಫೋಟಗಳಾಗಿ ಮರೆಯಲಾಗದ ಒಂದು ಸನ್ನಿವೇಶ ಉಂಟಾಗಲಿದೆ ಎಂದು ಪ್ರಕಾಶ್ ಅಮ್ಮಣ್ಣಾಯ ಅವರು ಬರೆದುಕೊಂಡಿದ್ದಾರೆ.

    ಆಗಷ್ಟ್​ 15ರಂದು ತಾಲಿಬಾನಿಗಳು ಆಫ್ಘಾನ್​ ರಾಜಧಾನಿ ಕಾಬುಲ್​ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಇಡೀ ಆಫ್ಘಾನ್​ ತಾಲಿಬಾನಿಗಳ ವಶವಾಗಿದೆ. ಶಾಂತಿ ನೆಲೆಸಿದ್ದ ಆಫ್ಘಾನ್​ ನೆಲದಲ್ಲಿ ಸದ್ಯ ಮದ್ದು ಗುಂಡುಗಳ ಆರ್ಭಟ ಜೋರಾಗಿದ್ದು, ಅಲ್ಲಿನ ಜನರು ನಿರಂತರವಾಗಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಸಾಕಷ್ಟು ಮಂದಿ ತಾಲಿಬಾನ್​ ಆಡಳಿತಕ್ಕೆ ಹೆದರಿ ದೇಶ ತೊರೆಯಲು ಹವಣಿಸುತ್ತಿದ್ದು, ಕಾಬುಲ್​ ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಕಳೆದ ಗುರುವಾರವಷ್ಟೇ ಕಾಬುಲ್​ ಏರ್​ಪೋರ್ಟ್​ನಲ್ಲಿ ಅಮೆರಿಕ ಸೇನಾ ಪಡೆಗಳನ್ನು ಗುರಿಯಾಗಿಸಿ ಐಎಸ್​-ಕೆ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 13 ಯೋಧರು ಸೇರಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಆಫ್ಘಾನ್​ನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

    ಬೆಕ್ಕನ್ನು ನೋಡಿದ್ರೆ ದುರಾದೃಷ್ಟ ಅಂದುಕೊಳ್ಳುವವರು ಈ ಸ್ಟೋರಿನಾ ಓದಲೇ ಬೇಕು: 10 ಲಕ್ಷ ಬಂಪರ್​ ಬಹುಮಾನ!

    ಬಸ್ ಟಿಕೆಟ್​ನಿಂದ ಸಿಕ್ಕಿಬಿದ್ದರು!; ಮೈಸೂರಲ್ಲಿ ಯುವತಿ ಗ್ಯಾಂಗ್​ರೇಪ್ ಕೇಸ್, ತಮಿಳುನಾಡಿನಲ್ಲಿ ಐವರ ಸೆರೆ

    ವಿದ್ಯಾರ್ಥಿಗಳಿಗೆ ಎನ್​ಇಪಿ ಸ್ವಾತಂತ್ರ್ಯ; ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತ ಪಿ. ಪ್ರದೀಪ್ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts