More

    ನಿನ್ನೆ ರಾತ್ರಿ ನರೇಶ್​ ಜೊತೆ ಪವಿತ್ರಾ ಲೋಕೇಶ್​ ದೂರು ದಾಖಲಿಸಿದ್ದು ಯಾರ ವಿರುದ್ಧ? ಇಲ್ಲಿದೆ ಮಾಹಿತಿ

    ಮೈಸೂರು: ನಿನ್ನೆ (ಜುಲೈ 2) ರಾತ್ರಿ ವಿವಿ ಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ, ಹೋಟೆಲ್​ ಒಂದರಲ್ಲಿ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದ ತೆಲುಗು ನಟ ನರೇಶ್​ ಮತ್ತು ನಟಿ ಪವಿತ್ರಾ ಲೋಕೇಶ್​ ಇಂದು ಬೆಳಗ್ಗೆ ರೂಮ್​ನಿಂದ ಹೊರಗಡೆ ಬರುವಾಗ ನರೇಶ್​ ಮೂರನೇ ಪತ್ನಿ ರಮ್ಯಾ ರಘುಪತಿ ಅಲ್ಲಯೇ ಕಾದು ನಿಂತಿದ್ದರು. ಈ ವೇಳೆ ಸ್ಥಳದಲ್ಲೇ ಭಾರೀ ಹೈಡ್ರಾಮ ನಡೆದ ಸಂಗತಿ ಭಾರೀ ಸುದ್ದಿಯಾಗಿದೆ.

    ಪವಿತ್ರ ಲೋಕೇಶ್​ ಮತ್ತು ನರೇಶ್​ ಯಾರ ವಿರುದ್ಧ ದೂರು ನೀಡಿದರು ಎಂಬ ವಿಚಾರ ಇದುವರೆಗೂ ಯಾರಿಗೂ ತಿಳಿದಿರಲಿಲ್ಲ. ಇದೀಗ ಆ ಸಂಗತಿ ಬಯಲಾಗಿದೆ. ಸ್ವತಃ ವಿವಿ ಪುರಂ ಠಾಣೆಯ ಪೊಲೀಸರೇ ಇಂದು ಮಾಹಿತಿ ನೀಡಿದ್ದಾರೆ.

    ಅಂದಹಾಗೆ ಪವಿತ್ರಾ ಲೋಕೇಶ್​ ಅವರು ಸದಾ ತಮ್ಮನ್ನು ಹಿಂಬಾಲಿಸುತ್ತಿರುವ ಜನರ ವಿರುದ್ಧ ದೂರು ನೀಡಿದ್ದಾರೆಂದು ತಿಳಿದುಬಂದಿದೆ. ಯಾರೋ ಹಿಂಬಾಲಿಸುತ್ತಿದ್ದು, ಜೀವ ಭಯದ ಕಾರಣ ಮುಂಜಾಗ್ರತ ಕ್ರಮವಾಗಿ ಪೊಲೀಸರಿಗೆ ದೂರು ನೀಡಿದ್ದಾರೆನ್ನಲಾಗಿದೆ.

    ಪವಿತ್ರಾ ಲೋಕೇಶ್​ ಮತ್ತು ನಟ ನರೇಶ್​ ನಡುವೆ ಅಕ್ರಮ ಸಂಬಂಧ ಇದೆ ನರೇಶ್​ ಮೂರನೇ ಪತ್ನಿ ರಮ್ಯಾ ಆರೋಪ ಮಾಡಿದ್ದಾರೆ. ಅಂದಹಾಗೆ ನರೇಶ್​ ತೆಲುಗು ಸೂಪರ್​ ಸ್ಟಾರ್​ ಕೃಷ್ಣ ಅವರ ಮಲ ಮಗ. ಕೃಷ್ಣ ಅವರು ಸೂಪರ್​ ಸ್ಟಾರ್​ ಮಹೇಶ್​ ಬಾಬು ಅವರ ತಂದೆ. ನರೇಶ್​ ಮತ್ತು ಪವಿತ್ರಾ ಇಬ್ಬರು ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ನನಗೆ ವಂಚಿಸಿದ್ದಾರೆ ಮತ್ತು ಸಾಕಷ್ಟು ಕಿರುಕುಳ ನೀಡಿದ್ದಾರೆಂದು ರಮ್ಯಾ, ನರೇಶ್​ ವಿರುದ್ಧ ಆರೋಪ ಮಾಡಿದ್ದಾರೆ.

    ಪವಿತ್ರಾ ಲೋಕೇಶ್ ನನ್ನ ಒಳ್ಳೆಯ ಸ್ನೇಹಿತೆ, ಮಾರ್ಗದರ್ಶಕಿ, ತತ್ವಜ್ಞಾನಿ ಮತ್ತು ಆಪ್ತೆ ಎಂದು ನರೇಶ್ ಸ್ಪಷ್ಟಪಡಿಸಿದ್ದಾರೆ. ಆಕೆಯ ಬೆಂಬಲದಿಂದ ನಾನು ಖಿನ್ನತೆಯ ಗುಣಮುಖನಾದೆ ಎಂದು ಹೇಳಿಕೊಂಡಿದ್ದಾರೆ. ಪವಿತ್ರಾ ಲೋಕೇಶ್​ ಕೂಡ ನಾವಿಬ್ಬರು ಒಳ್ಳೆಯ ಫ್ರೆಂಡ್ಸ್​ ಎಂದು ಹೇಳಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಕೆಲವರು ಅಪಾರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ತನ್ನ ಗೌಪ್ಯತೆ ಮತ್ತು ವೈಯಕ್ತಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಮುಂದೆ ಒತ್ತಿ ಹೇಳಿದ್ದಾರೆ. ರಮ್ಯಾ ಮತ್ತು ನರೇಶ್​ ಅವರ ವೈಯಕ್ತಿಕ ವಿಚಾರಗಳನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಆದರೆ, ನಿನ್ನೆ ವಿವಿ ಪುರಂ ಪೊಲೀಸ್​ ಠಾಣೆಯಲ್ಲಿ ದೂರು ನೀಡಿರುವ ನರೇಶ್​ ಮತ್ತು ಪವಿತ್ರಾ ಲೋಕೇಶ್​, ಇಡೀ ರಾತ್ರಿ ಮೈಸೂರಿನ ಹೋಟೆಲ್​ ಒಂದರಲ್ಲಿ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದರು. ಈ ವಿಚಾರ ರಮ್ಯಾ ಅವರಿಗೆ ಗೊತ್ತಾಗಿ ಮಧ್ಯ ರಾತ್ರಿಯೇ ಹೋಟೆಲ್​ಗೆ ಆಗಮಿಸಿ, ತಾವೂ ಒಂದು ರೂಮ್​ ಬುಕ್​ ಮಾಡಿ ಬೆಳಗ್ಗೆ ಆಗುವವರೆಗೂ ಅಲ್ಲಿಯೇ ಕಾದು, ಬೆಳಗ್ಗೆ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಹೊರಬರುತ್ತಿದ್ದಂತೆ ಜಗಳಕ್ಕೆ ಇಳಿದಿದ್ದರು. ಚಪ್ಪಲಿಯಲ್ಲಿ ಬಾರಿಸಲು ಯತ್ನಿಸಿದರು. ಅಲ್ಲದೆ, ಒಳ್ಳೆಯ ಫ್ರೆಂಡ್ಸ್​ ಅಂತಾ ಹೇಳಿಕೊಳ್ಳುತ್ತಾರೆ ಆದರೆ, ಒಂದೇ ಕೋಣೆಯಲ್ಲಿ ಇಡೀ ರಾತ್ರಿ ಇಬ್ಬರು ಒಟ್ಟಿಗೆ ಇರ್ತಾರೆ ಅಂದ್ರೆ ಏನು ಅರ್ಥ ಎಂದು ಆಕ್ರೋಶ ಹೊರಹಾಕಿದ್ದಾರೆ. ಇಂದು ಬೆಳಗ್ಗೆ ಹೋಟೆಲ್​ ಮುಂದೆ ಭಾರೀ ಹೈಡ್ರಾಮವೇ ನಡೆದಿದೆ.

    ಪವಿತ್ರಾ ಲೋಕೇಶ್​ ಅವರು ಕೆಲವು ಮಾಧ್ಯಮ ಪ್ರತಿನಿಧಿಗಳು ತನ್ನನ್ನು ಹಿಂಬಾಲಿಸಿ ಹಿಂಬಾಲಿಸುತ್ತಿದ್ದಾರೆ ಮತ್ತು ಮನಸ್ಸಿನ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುಖಾ ಸುಮ್ಮನೆ ಹಿಂಬಾಲಿಸುತ್ತಿರುವ ನನಗೆ ಅಪಾರವಾದ ಮಾನಸಿಕ ಆಘಾತ ಉಂಟು ಮಾಡಿದೆ ಎಂದು ಪವಿತ್ರಾ ಲೋಕೇಶ್ ದೂರಿದ್ದು, ಈ ಕೃತ್ಯದಲ್ಲಿ ತೊಡಗಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಪವಿತ್ರಾ ಲೋಕೇಶ್ ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳನ್ನು ರಚಿಸಲಾಗಿದೆ ಮತ್ತು ಆ ಖಾತೆಗಳಲ್ಲಿ ಮಾನಹಾನಿಕರ ಪೋಸ್ಟ್‌ಗಳು ಬಂದಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಕಲಿ ಖಾತೆಗಳನ್ನು ಸೃಷ್ಟಿಸಿದ ನಂತರ ದುಷ್ಕರ್ಮಿಗಳು ತನ್ನ ಬಗ್ಗೆ ವದಂತಿಗಳು ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ನಟಿ ಹೇಳಿದ್ದಾರೆ. ಈ ಸಂಬಂಧ ಸೈಬರ್​ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    VIDEO| ಮೊಸಳೆಯನ್ನೇ ಮದ್ವೆಯಾದ ಮೆಕ್ಸಿಕೋ ಮೇಯರ್​: ಕಾರಣ ಕೇಳಿದ್ರೆ ಹುಬ್ಬೇರೋದು ಖಂಡಿತ

    ಎಳವೆಯಲ್ಲಿಯೇ ಕನ್ನಡಿಗರ ಹೃದಯಗೆದ್ದು ಅಗಲಿದ ಪುಟಾಣಿ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ

    ಹಿಗ್ಗಾಮುಗ್ಗಾ ಬೈಯ್ತಿದ್ರೂ ನಗುತ್ತಾ, ಶಿಳ್ಳೆ ಹಾಕುತ್ತಾ, ಡ್ಯಾನ್ಸ್​ ಮಾಡ್ತಿದ್ದ ನರೇಶ್​ ಬಗ್ಗೆ ಪತ್ನಿ ರಮ್ಯಾ ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts