ಕಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 46ನೇ ಐಪಿಎಲ್ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಶ್ರೇಯಸ್ ಅಯ್ಯರ್ ನಾಯಕತ್ವದ ಕಲ್ಕತ್ತಾ ನೈಟ್ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಕಲ್ಕತ್ತಾ ಬೌಲರ್ಗಳು ಎದುರಾಳಿ ತಂಡವನ್ನು 20 ಓವರ್ಗಳಲ್ಲಿ 153 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 154 ರನ್ಗಳ ಗುರಿ ಬೆನ್ನತ್ತಿದ್ದ ಕಲ್ಕತ್ತಾ ನೈಟ್ರೈಡರ್ಸ್ ತಂಡವು ಫಿಲ್ ಸಾಲ್ಟ್ (68 ರನ್, 33 ಎಸೆತ, 7 ಬೌಂಡರಿ, 5 ಸಿಕ್ಸರ್) ಅರ್ಧಶತಕದ ಫಲವಾಗಿ 16.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಕಾಲ್ಸೆಂಟರ್ ಬಂದ್; ಲಕ್ಷಾಂತರ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳಲಿದೆ AI
ಇನ್ನು ಪಂದ್ಯದ ಬಳಿಕ ಕೆಕೆಆರ್ ಪ್ರದರ್ಶನದ ಕುರಿತು ಮಾತನಾಡಿದ ಮಾಜಿ ಆಟಗಾರ ಸುನೀಲ್ ಗಾವಸ್ಕರ್, ವೇಗಿ ವೈಭವ್ ಅರೋರಾ ಪ್ರದರ್ಶನದ ಕುರಿತು ಕಿಡಿಕಾರಿದ್ದಾರೆ. 18ನೇ ಓವರ್ನಲ್ಲಿ ಕುಲ್ದೀಪ್ ಯಾದವ್ ಬ್ಯಾಟಿಂಗ್ ಮಾಡುವ ವೇಳೆ ವೇಗಿ ವೈಭವ್ ಅರೋರಾ ಎಸೆದ ಚೆಂಡು ಬ್ಯಾಟ್ಸ್ಮನ್ ಪ್ಯಾಡಿಗೆ ತಗುಲಿತ್ತು. ಈ ವೇಳೆ ಅಂಪೈರ್ಗೆ ಮನವಿ ಮಾಡಲಾಯಿತು. ಅದನ್ನು ನೋಡುವುದಾದರೆ ಚೆಂಡು ಸ್ಪಷ್ಟವಾಗಿ ವಿಕೆಟ್ಸ್ಗೆ ತಾಗದೆ ಕಾಲಿನ ಕೆಳಗೆ ಹೋಗುತ್ತಿರುವುದನ್ನು ನೋಡಬಹುದಾಗಿದೆ.
ಈ ವೇಳೆ ವೈಭವ್ ಅರೋರಾ ನಾಯಕ ಶ್ರೇಯಸ್ ಅಯ್ಯರ್ಗೆ ಒತ್ತಾಯಪೂರ್ವಕವಾಗಿ ಡಿಆರ್ಎಸ್ ತೆಗೆದುಕೊಳ್ಳುವಂತೆ ಮಾಡುತ್ತಾರೆ. ಬಳಿಕ ರಿವೀವ್ ವೇಸ್ಟ್ ಆಗುತ್ತದೆ. ನನ್ನ ಪ್ರಕಾರ ವೇಗಿ ವೈಭವ್ ಅರೋರಾ ತಾವೆಸೆದ ಚೆಂಡನ್ನು ಅಂದಾಜಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಈ ವಿಚಾರ ನನಗೆ ಆಘಾತಕಾರಿ ಎನ್ನಿಸಿದೆ. ಅವರ ನಿರ್ಧಾರದಿಂದ ಕೆಕೆಆರ್ ಬಳಿ ಉಳಿದುಕೊಂಡಿದ್ದ ಡಿಆರ್ಎಸ್ ವ್ಯರ್ಥವಾಯಿತು. ವೇಗಿ ವೈಭವ್ ಅರೋರಾ ತೆಗೆದುಕೊಂಡ ತಪ್ಪು ನಿರ್ಧಾರದಿಂದ ತಂಡ ಬೆಲೆ ತೆರಬಾಕಾಯಿತು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಕಿಡಿಕಾರಿದ್ದಾರೆ.