ಕೊಚ್ಚಿ: ಬೇಕರಿಯಿಂದ ಕೊಂಡು ತಂದ ಹಲ್ವಾವನ್ನು ತಿನ್ನುವಾಗ ಶ್ವಾಸನಾಳಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದಲ್ಲಿ ಶುಕ್ರವಾರ ವರದಿಯಾಗಿದೆ.
ನಿಜಾರ್ (49) ಮೃತಪಟ್ಟ ವ್ಯಕ್ತಿ. ಈತ ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿಪರಂಬುವಿನ ನಿವಾಸಿ. ಹಲ್ವಾ ಶ್ವಾಸನಾಳದಲ್ಲಿ ಸಿಲುಕಿಕೊಂಡು ನಿಜಾರ್ ಮನೆಯಲ್ಲೇ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ನಿಜಾರ್ ಕಾರ್ಮಿಕನಾಗಿದ್ದ. ಬುಧವಾರ ಬೆಳಗ್ಗೆ ಆತ ಬೇಕರಿಯಲ್ಲಿ ಹಲ್ವಾ ಕೊಂಡು ತಂದು ಸೇವಿಸಿದ್ದ. ಬಳಿಕ ದೇಹದಲ್ಲಿ ಕೊಂಚ ಇರುಸುಮುರುಸು ಉಂಟಾಗಿ, ಕುಸಿದುಬಿದ್ದಿದ್ದ. ತಕ್ಷಣ ಆತನನ್ನು ಸ್ಥಳೀಯರು ಛಕಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ವೀಕ್ಷಕರನ್ನೇ ಗೊಂದಲಕ್ಕೀಡುಮಾಡಿದ ಜಯಶ್ರೀ ಆರಾಧ್ಯ: ಮಾರಿಮುತ್ತು ಮೊಮ್ಮಗಳ ವರ್ತನೆಗೆ ಅಸಮಾಧಾನ
ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಮಂಜಾಳಿ ಜುಮಾ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ಮೃತಪಟ್ಟಿದ್ದಾನೆಂದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ. ನಜಾರ್ ಅವರು ತಮ್ಮ ಪತ್ನಿ ರಮ್ಲಾ ಮತ್ತು ಮಕ್ಕಳಾದ ನಿಲೋಫರ್ ಮತ್ತು ಜೆನ್ನಿಫರ್ ಅವರನ್ನು ಅಗಲಿದ್ದಾರೆ. (ಏಜೆನ್ಸೀಸ್)
ಕಾಂಗ್ರೆಸ್ಗೆ ಗುಲಾಂ ನಬಿ ಆಜಾದ್ ಗುಡ್ ಬೈ: ಪಕ್ಷ ತೊರೆಯಲು ಕೊಟ್ಟ ಕಾರಣ ಹೀಗಿದೆ..
ಬೆಳಗಾವಿಯಲ್ಲಿ ಚಾಲಾಕಿ ಚಿರತೆ ಸೆರೆಗೆ ಹನಿಟ್ರ್ಯಾಪ್! 9 ಕಡೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ
ಪ್ರೀತಿಸುವಂತೆ ಯುವತಿಗೆ ದುಂಬಾಲು ಬಿದ್ದವನಿಗೆ ಬುದ್ಧಿವಾದ ಹೇಳಿದ ವ್ಯಕ್ತಿಯ ಕೊಲೆ: ಅಪರಾಧಿಗೆ ಆಯ್ತು ತಕ್ಕ ಶಿಕ್ಷೆ