More

    ನೇರವಾಗಿ ಬಡವರ ಕೈಗೆ ಹಣ ನೀಡುವಂತೆ ರಾಹುಲ್​ ಗಾಂಧಿ ಆಗ್ರಹ

    ನವದೆಹಲಿ: ಕರೊನಾ ವೈರಸ್​ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಹಾಗೂ ರೈತರ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಮೀನು ಹಿಡಿಯುವಾಗ ನದಿಗೆ ಜಾರಿದ್ದ ಮೊಬೈಲ್ 8 ತಿಂಗಳ ಬಳಿಕ ಪತ್ತೆ: ಮಾಲೀಕನಿಗೆ ಕಾದಿತ್ತೊಂದು ಸರ್ಪ್ರೈಸ್​​!​

    ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರವು ಕಾರ್ಮಿಕರು, ರೈತರು ಹಾಗೂ ಸಂಕಷ್ಟದಲ್ಲಿರುವ ಇತರರಿಗೆ ನೇರವಾಗಿ ಅವರ ಖಾತೆಗಳಿಗೆ ಹಣವನ್ನು ಜಮೆ ಮಾಡಬೇಕು. ಇಂತಹ ಸಮಯದಲ್ಲಿ ಬಡವರ ಕೈಗೆ ನೇರವಾಗಿ ಹಣ ನೀಡುವುದು ತುಂಬಾ ಅವಶ್ಯಕವೆಂದರು.

    ಬಡವರಿಗೆ ಸಹಾಯ ಮಾಡದೇ ದೇಶದ ಆರ್ಥಿಕತೆ ಆರಂಭವಾಗದು. ಈ ಕ್ಷಣವೇ ವಲಸೆ ಕಾರ್ಮಿಕರಿಗೆ ನೆರವು ನೀಡುವುದು ತುಂಬಾ ಮುಖ್ಯ. ತಕ್ಷಣವೇ ಕೇಂದ್ರ ಸರ್ಕಾರ ನೇರವಾಗಿ ಹಣ ಒದಗಿಸದೇ ಇದ್ದರೆ, ಸರ್ಕಾರದ ಮಹಾದುರಂತಕ್ಕೆ ಸಾಕ್ಷಿಯಾಗಲಿದೆ ಎಂದು ಎಚ್ಚರಿಸಿದರು.

    ಇದನ್ನೂ ಓದಿ: ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್​ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?

    ಲಕ್ಷಾಂತರ ವಲಸೆ ಕಾರ್ಮಿಕರು ಆಹಾರ ಮತ್ತು ಹಣವಿಲ್ಲದೇ ಹೆದ್ದಾರಿಗಳಲ್ಲಿ ಸಾಗುತ್ತಿರುವುದನ್ನು ನೋಡಿದರೆ ಹೃದಯ ಬಿರಿಯುತ್ತದೆ ಎಂದರು. (ಏಜೆನ್ಸೀಸ್​)

    ಚೊಚ್ಚಲ ಚಿತ್ರ ಬಿಡುಗಡೆಗೂ ಮುನ್ನವೇ ಬೈಕ್​ ಅಪಘಾತದಲ್ಲಿ ದುರಂತ ಸಾವಿಗೀಡಾದ ಯುವ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts