More

    ಶೂದ್ರರಿಗೆ ಅರ್ಥವೇ ಆಗುವುದಿಲ್ಲ, ಅದಕ್ಕೇ ಅವರು ಸಿಟ್ಟಾಗುತ್ತಾರೆ! ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿಕೆ

    ಭೋಪಾಲ್​: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ಪರಸ್ಪರ ದೂರುಗಳು ಹೆಚ್ಚಾಗುತ್ತಲೇ ಇವೆ. ಅದರ ಬೆನ್ನಲ್ಲೇ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಟಿಎಂಸಿ ಪಕ್ಷ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ್ದಾರೆ. ಮಮತಾ ಅವರು ಹುಚ್ಚರಾಗಿದ್ದಾರೆ ಎಂದು ಸಂಸದೆ ದೂರಿದ್ದಾರೆ.

    ಇದನ್ನೂ ಓದಿ: ರೈತ ಹೋರಾಟದಲ್ಲಿ ಪಿಜ್ಜಾ! ರೈತರು ವಿಷ ಕುಡಿದರೆ ತಲೆ ಕೆಡಿಸಿಕೊಳ್ಳಲ್ಲ, ಪಿಜ್ಜಾ ತಿಂದರೆ ಪ್ರಶ್ನೆಯೇಕೆ ಎಂದ ಗಾಯಕ

    ಮುಂದಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಅಧಿಕಾರವನ್ನು ಕಳೆದುಕೊಳ್ಳುವುದು ಮಮತಾ ಅವರಿಗೆ ದೃಢವಾಗಿದೆ. ಅದೇ ಕಾರಣದಿಂದಾಗಿ ಅವರು ಹುಚ ಹುಚ್ಚರಾಗಿದ್ದಾರೆ. ಹಿಂದೂಗಳು ಭಾರತವನ್ನು ರಕ್ಷಿಸಲು ಸಿದ್ಧರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದ್ದು, ಹಿಂದೂ ರಾಜ್​ ನಿರ್ಮಾಣವಾಗಲಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಅಪ್ಪ ಪ್ರೀತಿಯಿಂದ ಕೊಡಿಸಿದ್ದ ಬೈಕ್​ನಲ್ಲಿ ಲವರ್​ ಜತೆ ಸುತ್ತಾಡಿದ ಮಗ; ಸಿಟ್ಟಿನಿಂದ ಅಪ್ಪ ಮಾಡಿದ್ದೇನು ಗೊತ್ತಾ?

    ಅದರ ಜತೆ ಧರ್ಮ ಶಾಸ್ತ್ರದ ಬಗ್ಗೆ ಮಾತನಾಡಿದ ಅವರು, ‘ಕ್ಷತ್ರಿಯರಿಗೆ ಕ್ಷತ್ರಿಯರೆಂದರೆ ಬೇಸರವಾಗುವುದಿಲ್ಲ. ಬ್ರಾಹ್ಮಣರಿಗೆ ಬ್ರಾಹ್ಮಣರೆಂದರೆ ಬೇಸರವಾಗುವುದಿಲ್ಲ. ಅದೇ ರೀತಿ ವೈಶ್ಯರಿಗೆ ವೈಶ್ಯರೆಂದರೆ ಬೇಸರವಾಗುವುದಿಲ್ಲ. ಆದರೆ ಶೂದ್ರರಿಗೆ ಶೂದ್ರರೆಂದರೆ ಅವರು ನೋವು ಮಾಡಿಕೊಳ್ಳುತ್ತಾರೆ ಏಕೆಂದರೆ ಅವರಿಗೆ ಅದು ಅರ್ಥವಾಗುವುದಿಲ್ಲ’ ಎಂದು ನುಡಿದಿದ್ದಾರೆ. (ಏಜೆನ್ಸೀಸ್​)

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts