ಇಸ್ಲಾಮಾಬಾದ್: ಲೈಂಗಿಕತೆಗಾಗಿ ಹಾತೊರೆಯುತ್ತಿದ್ದ, ಕೊಕೈನ್ ಸೇವಿಸುತ್ತಿದ್ದ, ಲಾಭಕ್ಕಾಗಿ ಧರ್ಮ ಮಾರಿಕೊಂಡ, ಸುಳ್ಳುಗಾರ, ದುಷ್ಟ ವ್ಯಕ್ತಿ…. ಈಗಾಗಲೇ ಸಾಕಷ್ಟು ವಿವಾದಗಳಿಂದ ತುಂಬಿರುವ ಪಾಕಿಸ್ತಾನದ ಮಾಜಿ ಪ್ರಧಾನಿ, ಕ್ರಿಕೆಟ್ ಲೋಕದ ತಾರೆ ಇಮ್ರಾನ್ ಖಾನ್ ವಿರುದ್ಧ ಮತ್ತಷ್ಟುಆಘಾತಕಾರಿ ಆರೋಪಗಳು ಕೇಳಿಬಂದಿವೆ.
ಪಾಕಿಸ್ತಾನಿ ಮಾಡೆಲ್ ಮತ್ತು ನಟಿ ಹಜ್ರಾ ಖಾನ್ ಪನೆಜೈ ಅವರು ಬರೆದಿರುವ ಹೊಸ ಪುಸ್ತಕವೊಂದು ಈಗ ಬಿರುಗಾಳಿ ಎಬ್ಬಿಸಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಇಂತಹ ಅನೇಕ ಆಘಾತಕಾರಿ ಆರೋಪಗಳನ್ನು ಈ ಪುಸ್ತಕದಲ್ಲಿ ಮಾಡಿದ್ದಾರೆ.
‘ವೇರ್ ದಿ ಓಪಿಯಮ್ ಗ್ರೋಸ್: ಸರ್ವೈವಿಂಗ್ ಪಾಕಿಸ್ತಾನ್ ಆ್ಯಸ್ ಎ ವುಮನ್, ಆ್ಯನ್ ಆ್ಯಕ್ಟರೆಸ್ ಆ್ಯಂಡ್ ನೊವಿಂಗ್ ಇಮ್ರಾನ್ ಖಾನ್ (Where the Opium Grows: Surviving Pakistan as a Woman, an Actress and Knowing Imran Khan) ಎಂಬುದು ಈ ಪುಸ್ತಕದ ಹೆಸರು. ಪನೇಜೈ ಅವರ ಆತ್ಮಚರಿತ್ರೆ ಇದಾಗಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ವಿರುದ್ಧ ಲೈಂಗಿಕತೆ ಕಡೆಗೆ ಅವರ ಒಲವು ಸೇರಿ ಹಲವು ಆರೋಪಗಳನ್ನು ಇದರಲ್ಲಿ ಮಾಡಿದ್ದಾರೆ.
ಜಿಯೋ ನ್ಯೂಸ್ ವರದಿ ಪ್ರಕಾರ ಹಜ್ರಾ ಅವರು ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಅವರನ್ನು ‘ಸುಳ್ಳುಗಾರ ಮತ್ತು ದುಷ್ಟ ವ್ಯಕ್ತಿ’ ಎಂದೂ ಜರೆದಿದ್ದಾರೆ. ಅತ್ಯಂತ ವಿವಾದಾತ್ಮಕ ಪುಸ್ತಕದಲ್ಲಿ ಮಾಜಿ ಪ್ರಧಾನಿಯ ವೈಯಕ್ತಿಕ ಜೀವನದ ರಹಸ್ಯಗಳಿವೆ ಎಂದು ಹೇಳಲಾಗಿದೆ.
ಶುಕ್ರವಾರ ಪುಸ್ತಕವನ್ನು ಬಿಡುಗಡೆ ಮಾಡುವಾಗ ಬಲೂಚಿಸ್ತಾನದ ನಟಿ ಪನೇಜೈ ಅವರು, ಇಮ್ರಾನ್
ಕೊಕೇನ್ ಸೇವಿಸುತ್ತಾರೆ ಎಂದಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲಿ ಬರೆದ ಪ್ರತಿ ಪದವನ್ನು ತಾವು ಸಮರ್ಥಿಸಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
ಇಮ್ರಾನ್ ಜತೆ ಹೇಗೆ ಸಂಪರ್ಕಕ್ಕೆ ಬಂದರು ಎಂಬುದನ್ನು ವಿವರಿಸಿದ ಅವರು, ತಮ್ಮ ತಂದೆ ಪಿಟಿಐಗೆ ಸೇರಿದ ನಂತರ ಖಾನ್ ಅವರನ್ನು ಭೇಟಿಯಾದೆ ಎಂದಿದ್ದಾರೆ. “ಹೀರೋ ಮತ್ತು ಮಸಿಹಾ” ಎಂದು ಪರಿಗಣಿಲ್ಪಡುವ ಈ ವ್ಯಕ್ತಿ ತಮ್ಮ ಖಾಸಗಿ ಜೀವನದಲ್ಲಿ ಅತ್ಯಂತ ವಿಭಿನ್ನ ಎಂದು 2014ರ ವೇಳೆಗೆ ಅರಿತುಕೊಂಡಿದ್ದಾಗಿ ಹೇಳಿದ್ದಾರೆ. 21 ವರ್ಷದ ಹುಡುಗಿಯನ್ನು ಇಮ್ರಾನ್ ಗರ್ಭ ಧರಿಸುವಂತೆ ಮಾಡಿದರು ಎಂದೂ ಹೇಳಿದ್ದಾರೆ.
2014ರಲ್ಲಿ ಈ ಪುಸ್ತಕದ ಕರಡನ್ನು ಸ್ವೀಕರಿಸಿದ ಮೊದಲ ವ್ಯಕ್ತಿ ಇಮ್ರಾನ್ ಖಾನ್ ಆಗಿದ್ದಾರೆ ಎಂದೂ ಹಜ್ರಾ ಉಲ್ಲೇಖಿಸಿದ್ದಾರೆ. ಪುಸ್ತಕವನ್ನು ಪ್ರಕಟಿಸಲು ಅನುಮತಿ ಪಡೆಯಲು ಸಾಕಷ್ಟು ಹೆಣಗಾಡಬೇಕಾಯಿತು ಎಂದಿದ್ದಾರೆ.
ತನ್ನ ಒಳಿತಿಗಾಗಿ “ತನ್ನ ಧರ್ಮವನ್ನು ಮಾರಿದನು. ನಾವು ಈ ವ್ಯಕ್ತಿಯನ್ನು ನಾಯಕ ಎಂದುಕೊಂಡು ಅವನ ಪರವಾಗಿ ಜಗಳವಾಡುತ್ತಿದ್ದೇವು. ಆದರೆ ಈಗ ನಾನು ಈ ಕುರಿತು ನನ್ನ ಸ್ನೇಹಿತರಿಂದ ಕ್ಷಮೆ ಕೇಳಬೇಕಾಗಿದೆ ಎಂದು ನಟಿ ಹೇಳಿದ್ದಾರೆ.
ಕರ್ನಾಟಕದ ಎರಡು ಐತಿಹಾಸಿ ತಾಣಗಳು ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಲು ಸಜ್ಜು
ಚೀನಾದಲ್ಲಿ ನ್ಯೂಮೋನಿಯಾ, ಇನ್ಫ್ಲುಯೆಂಜಾ ಉಲ್ಬಣ; ಮುನ್ನೆಚ್ಚರಿಕೆ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ