ಲಖನೌ: ಉತ್ತರಪ್ರದೇಶದಲ್ಲಿ 2017ರಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್ ರಚನೆಯಾಗಿದ್ದು ಹಳೇ ವಿಷಯ. ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು, ಮಹಿಳೆಯರ ಸುರಕ್ಷತೆಗಾಗಿ ಸಿಎಂ ಯೋಗಿ ನೇತೃತ್ವದ ಸರ್ಕಾರ ಈ ಸ್ಕ್ವಾಡ್ ರಚನೆ ಮಾಡಿತ್ತು.
ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇನ್ನೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಸೆಕ್ಸ್ ಸಂಬಂಧಿತ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ‘ಆಪರೇಶನ್ ದುರಾಚಾರಿ’ ಎಂಬ ಕಾರ್ಯಾಚರಣೆ ಶುರುವಾಗಿದೆ. ಇದನ್ನೂ ಓದಿ: ಕಂಗನಾಗ್ಯಾಕೆ ಇನ್ನೂ ಸಮನ್ಸ್ ಕೊಟ್ಟಿಲ್ಲ? ನಗ್ಮಾ ಪ್ರಶ್ನೆ
ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ‘ಆಪರೇಶನ್ ದುರಾಚಾರಿ’ ಪ್ರಾರಂಭ ಮಾಡಲಾಗಿದೆ. ಯಾರಾದರೂ ಲೈಂಗಿಕ ಸಂಬಂಧ ಅಪರಾಧಗಳನ್ನು ಮಾಡಿದರೆ, ಸೆಕ್ಸ್ ಕ್ರೈಂಗಳಲ್ಲಿ ಸಿಕ್ಕಿಬಿದ್ದರೆ ಅವರ ಫೋಟೊ, ಮಾಡಿದ ಅಪರಾಧದ ಉಲ್ಲೇಖ ಇರುವ ದೊಡ್ಡ ಪೋಸ್ಟರ್ಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಕಲಾಗುವುದು. ಈ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಲು ಸಿಎಂ ಯೋಗಿ ಅವರೇ ನಿರ್ದೇಶನ ನೀಡಿದ್ದಾಗಿ ಸರ್ಕಾರದ ವಕ್ತಾರ ತಿಳಿಸಿದ್ದಾರೆ. ಇದನ್ನೂ ಓದಿ: ಮಗುವಾಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮೇಘನಾ ರಾಜ್ ಮನವಿ
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸುವವರ ಹೆಸರು ಹೇಳಿ ಮಾನ ಕಳೆಯುವುದು, ತನ್ಮೂಲಕ ಅವರಿಗೆ ಪಾಠ ಕಲಿಸುವುದೇ ಈ ಕಾರ್ಯಾಚರಣೆಯ ಉದ್ದೇಶ ಎಂದಿದ್ದಾರೆ. (ಏಜೆನ್ಸೀಸ್)