More

    ಗೆಳೆಯನ ಮೀನು ತಿನ್ನುವ ಆಸೆ ತೀರಿಸಲು ಹೋಗಿ ತಾನೇ ತೀರಿಹೋದ!

    ಚಿಕ್ಕಬಳ್ಳಾಪುರ: ಗೆಳೆಯರ ನಡುವೆ ಏನೇನೋ ಆಸೆಗಳಿರುತ್ತವೆ. ಒಬ್ಬನ ಆಸೆಯನ್ನು ಇನ್ನೊಬ್ಬ ತೀರಿಸುವುದು, ತೀರಿಸಲು ಪ್ರಯತ್ನಿಸುವುದು ಸರ್ವೇಸಾಮಾನ್ಯ. ಹೀಗೆ ಗೆಳೆಯನೊಬ್ಬನ ಆಸೆಯನ್ನು ಮತ್ತೊಬ್ಬ ತೀರಿಸಲು ಹೋಗಿ ತಾನೇ ತೀರಿಹೋಗಿದ್ದಾನೆ.

    ಚಿಕ್ಕಬಳ್ಳಾಪುರ ಜಿಲ್ಲೆ ಕಂದವಾರ ನಿವಾಸಿಗಳಾದ ಬಾಬು ಹಾಗೂ ಶಾಂತಾರಾಮ್​ ಎಂಬಿಬ್ಬರು ಗೆಳೆಯರ ಪೈಕಿ ಶಾಂತಾರಾಮ್​ ಪ್ರಾಣ ಕಳೆದುಕೊಂಡಿದ್ದಾನೆ. ಮದ್ಯಪಾನ ಮಾಡಿ ಮತ್ತೇರಿದ್ದ ಇಬ್ಬರೂ ಇಂದು ಕಂದವಾರ ಕೆರೆ ಏರಿ ಬಳಿ ವಾಕಿಂಗ್ ಮಾಡುತ್ತಿದ್ದರು.

    ಇದನ್ನೂ ಓದಿ: ನಗರದಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿಯಿಂದ ವಂಚನೆ; ಸಂಸ್ಥೆಯ ಉದ್ಯೋಗಿ ಅಡವಿಟ್ಟ ಚಿನ್ನವನ್ನೂ ಕೊಡದೆ ಮೋಸಗೈದ ಸಂಸ್ಥೆ

    ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಮೀನುಗಳು ಓಡಾಡುತ್ತಿರುವುದನ್ನು ಗಮನಿಸಿದ ಅವುಗಳನ್ನು ತಿನ್ನುವ ಆಸೆ ವ್ಯಕ್ತಪಡಿಸಿದ್ದಾನೆ. ಅದಕ್ಕೇನು, ಹೋಗಿ ತರುತ್ತೇನೆ ಎಂದು ಅಮಲಿನಲ್ಲಿ ನೀರಿಗಳಿದ ಶಾಂತಾರಾಮ್ ನೀರಲ್ಲಿ ಮುಳುಗಿ ಹೋಗಿದ್ದಾನೆ.

    ಇದನ್ನೂ ಓದಿ: ಪತಿಯನ್ನು ಬಿಟ್ಟು ಹೊರಟಿದ್ದ ಪತ್ನಿಯನ್ನು ಮತ್ತೆ ಮನೆಗೆ ಸೇರಿಸಿದ ಚಾರ್ಜರ್; ಮನೆ ಬಿಡುವಂತೆ ಮಾಡಿದ್ದು ಗಂಡನ ಫೋನಲ್ಲಿದ್ದ ಆ ಆಟ!

    ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಬಾಬು, ರಕ್ಷಣೆಗಾಗಿ ಕೂಗಿ ಕೊಂಡಿದ್ದಾನೆ. ಆಗ ಹತ್ತಿರದಲ್ಲಿದ್ದ ಮೀನುಗಾರರು ಧಾವಿಸಿ ರಕ್ಷಣೆ ಮಾಡುವಷ್ಟರಲ್ಲಿ ಶಾಂತಾರಾಮ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಳಿಕ ಸ್ಥಳೀಯರು ನೀರಿನಿಂದ ಶವ ಹೊರತೆಗೆದಿದ್ದಾರೆ.

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಆಟ ಆಡುತ್ತಲೇ ಪ್ರಾಣ ಕಳೆದುಕೊಂಡ ಬಾಲಕ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಡಿದ್ದೇ ಮುಳುವಾಯ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts