ಮುಂಬೈ: ಎಂಬತ್ತೈದು ವರ್ಷದ ವೃದ್ಧರೊಬ್ಬರ ಆರೈಕೆಗೆಂದು ವಾರದ ಹಿಂದೆ ಬಂದಿದ್ದವ ಕೊಂದು ಪರಾರಿಯಾಗಿದ್ದಾನೆ. ಮುಂಬೈನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು, ಆರೋಪಿಗಾಗಿ ವ್ಯಾಪಕ ಶೋಧ ಆರಂಭವಾಗಿದೆ.
ಮುಂಬೈನ ಸಾಂತಾ ಕ್ರೂಜ್ನಲ್ಲಿನ 85 ವರ್ಷದ ಪುರುಷೋತ್ತಮ್ ನಾಯ್ಕ್ ಕೊಲೆಗೀಡಾದ ವ್ಯಕ್ತಿ. ಇವರು ತಮ್ಮ ಪತ್ನಿ ಹಾಗೂ 30 ವರ್ಷದ ಕೆಲಸದವನ ಜತೆ ಮನೆಯಲ್ಲಿ ನೆಲೆಸಿದ್ದರು. ಮನೆಗೆಲಸದ ವ್ಯಕ್ತಿ ಕೃಷ್ಣ ಮನ್ಬಹದ್ದೂರ್ ಪೆರಿಯಾರ್ ಎಂಬಾತ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: ಪ್ರಧಾನಿ ಮೋದಿ, ಜೆ.ಪಿ.ನಡ್ಡಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಪುರುಷೋತ್ತಮ್ ನಾಯ್ಕ್ ಅವರ ಕೈ-ಕಾಲುಗಳನ್ನು ಕಟ್ಟಿ ಹಾಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಕೊಲೆ ಮಾಡಲು ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿ ಕೃಷ್ಣ 8 ದಿನಗಳಿಂದ ನಾಯ್ಕ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.