ಚಿಕ್ಕಮಗಳೂರು: ಇತ್ತೀಚೆಗೆ ತುಮಕೂರಿನ ತಿಪ್ಪೂರಿನಲ್ಲಿ ರಾತ್ರೋರಾತ್ರಿ ನೂರಾರು ತೆಂಗು ಮತ್ತು ಅಡಕೆ ಮರಗಳನ್ನು ಕಡಿದ್ದಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆ ಪ್ರಕರಣದಲ್ಲಿ ಗುಬ್ಬಿ ತಹಸೀಲ್ದಾರ್ರನ್ನು ಕಂದಾಯ ಸಚಿವ ಆರ್.ಅಶೋಕ್ ಅಮಾನತು ಮಾಡಿದ್ದಾರೆ ಕೂಡ.
ಈಗ ಇಂಥದ್ದೇ ಒಂದು ಪ್ರಕರಣ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ದೇವಗೋಡು ಗ್ರಾಮದಲ್ಲಿ ನಡೆದಿದೆ. ರೈತ ದಿನೇಶ್ ಹೆಬ್ಬಾರ್ ಎಂಬುವರ ನಾಲ್ಕು ಎಕರೆ ತೋಟದಲ್ಲಿ ಹೂವು ಬಿಟ್ಟು ನಿಂತಿದ್ದ ಕಾಫಿ ಗಿಡಗಳನ್ನು ಅಧಿಕಾರಿಗಳು ಕಡಿದುರುಳಿಸಿದ ಆರೋಪ ಕೇಳಿಬಂದಿದೆ.
ಈ ತೋಟ ದೇವಗೋಡು ಗ್ರಾಮದ ಸರ್ವೇ ನಂಬರ್ 78ರಲ್ಲಿ ಇದೆ. ಅರಣ್ಯ ಒತ್ತುವರಿ ಮಾಡಿಕೊಂಡು ತೋಟ ನಿರ್ಮಿಸಿದ್ದಾರೆ ಎಂಬ ಕಾರಣಕ್ಕೆ ನಾಲ್ಕು ಎಕರೆಯಲ್ಲಿದ್ದ ಕಾಫಿ ಗಿಡಗಳನ್ನು ಅಧಿಕಾರಿಗಳು ಕತ್ತರಿಸಿದ್ದಾರೆ ಎನ್ನಲಾಗಿದೆ. ಇದರಿಂದ ರೈತ ದಿನೇಶ್ ಹೆಬ್ಬಾರ್ ಕಂಗಾಲಾಗಿದ್ದಾರೆ. (ದಿಗ್ವಿಜಯ ನ್ಯೂಸ್)
ಶಂಕಿತ ಕರೊನಾ ಸೋಂಕಿತ ಸಾಗರದ ಮಹಿಳೆಯ ವೈದ್ಯಕೀಯ ವರದಿಯಲ್ಲಿ ಬಯಲಾಯ್ತು ಈ ಸತ್ಯ…
ಇಂದು ವಿಶ್ವ ಕಿಡ್ನಿ ದಿನ: ಮಿತ ಉಪ್ಪು, ಸಕ್ಕರೆ ಸೇವನೆ ಮೂತ್ರಪಿಂಡಕ್ಕೆ ಹಿತ!
2 ಚಿತ್ರಗಳ ಸ್ಥಗಿತಗೊಳಿಸಿತು ಅಕಾಡೆಮಿ ಅಧ್ಯಕ್ಷಗಿರಿ.. ತಂದೆಗೇ ಮಗ ಹೇಳಬೇಕಿದ್ದ ಆಕ್ಷನ್ಗೇ ಕಟ್..!