ಭುವನೇಶ್ವರ: ಕರೊನಾ ಸೋಂಕಿನಿಂದಾಗಿ ಅನೇಕರು ಆಸ್ಪತ್ರೆ ಸೇರಿದ್ದಾರೆ. ಹಲವು ಜನರು ಭಯದಿಂದ ಬದುಕಲಾರಂಭಿಸಿದ್ದಾರೆ. ಆದರೆ ಈ ಒಬ್ಬ ವ್ಯಕ್ತಿ ಮಾತ್ರ ಕರೊನಾಗೆ ಹೆದರದೆ ಆಸ್ಪತ್ರೆಯಲ್ಲೂ ತನ್ನ ಕನಸಿನ ಬೆನ್ನಟ್ಟಿದ್ದಾನೆ. ಆಸ್ಪತ್ರೆಯ ಬೆಡ್ ಮೇಲೆ ಕುಳಿತುಕೊಂಡು, ಸಿಎ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ವ್ಯಕ್ತಿಯ ಫೋಟೋ ಇದೀಗ ಸಕತ್ ವೈರಲ್ ಆಗಿದೆ.
ಒಡಿಶಾದ ಗಂಜಾಮ್ ಜಿಲ್ಲೆಯ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ವಿಜಯ್ ಕುಲಾಂಗೆ ಅವರು ಇತ್ತೀಚೆಗೆ ಕೋವಿಡ್ ಕೇರ್ ಸೆಂಟರ್ ಒಂದಕ್ಕೆ ತೆರಳಿದ್ದರು. ಆ ವೇಳೆ ಅವರು ಒಬ್ಬ ವ್ಯಕ್ತಿ ಬೆಡ್ ಮೇಲೆ ಕುಳಿತುಕೊಂಡು ಓದುತ್ತಿದ್ದದ್ದನ್ನು ಕಂಡಿದ್ದಾರೆ. ಆತನ ಬೆಡ್ ಬಳಿ ಹೋಗಿ ಮಾತನಾಡಿಸಿಕೊಂಡು ಬಂದಿದ್ದಾರೆ. ಆತ ಸಿಎ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದುದ್ದಾಗಿ ಹೇಳಲಾಗಿದೆ.
ಆ ಸೋಂಕಿತನ ಫೋಟೋವನ್ನು ವಿಜಯ್ ಕುಲಾಂಗೆ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. “ಯಶಸ್ಸು ಕಾಕತಾಳೀಯವಲ್ಲ. ಅದಕ್ಕೆ ಸಮರ್ಪಣೆ ಬೇಕು. ನಾನು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಮಯದಲ್ಲಿ ಈ ವ್ಯಕ್ತಿ ಸಿಎ ಪರೀಕ್ಷೆಯ ಅಧ್ಯಯನ ಮಾಡುತ್ತಿರುವುದನ್ನು ನೋಡಿದೆ. ನಿಮ್ಮ ಸಮರ್ಪಣೆ ನಿಮ್ಮ ನೋವನ್ನು ಮರೆಯುವಂತೆ ಮಾಡುತ್ತದೆ. ಅದರ ನಂತರ ಯಶಸ್ಸು ಔಪಚಾರಿಕತೆ ಮಾತ್ರ.” ಎಂದು ಬರೆದುಕೊಂಡಿದ್ದಾರೆ.
ಸೋಂಕಿನಿಂದ ಬಳಲುತ್ತಿರುವ ಸಮಯದಲ್ಲಿ ಭಯ ಪಡೆದೆಯೇ, ಮುಂದಿನ ಜೀವನಕ್ಕಾಗಿ ಕಷ್ಟಪಟ್ಟು ಅಧ್ಯಯನ ಮಾಡುತ್ತಿರುವ ಈ ಸೋಂಕಿತನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್)
ಕರೊನಾ ಎಂದು ಆಸ್ಪತ್ರೆ ಸೇರಿದ ವೃದ್ಧನ ಸಂಶಯಾಸ್ಪದ ಸಾವು; ಶವದ ತಲೆಯಿಂದ ಒಸರಿದ ರಕ್ತ ನೋಡಿ ಕುಟುಂಬ ಕಂಗಾಲು
ನಾದಿನಿ ಜತೆ ಭಾವನ ಅಕ್ರಮ ಸಂಬಂಧ! ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿದ್ದ ಹೆಂಡತಿಯನ್ನೇ ಕೊಂದ ಗಂಡ!