More

    12 ವರ್ಷವಾದರೂ ನೀರಿನ‌ ಹಾಹಾಕಾರಕ್ಕೆ ಸಿಕ್ಕಿಲ್ಲ ಮುಕ್ತಿ! ಮೂರು ದಿನಕ್ಕೆ ಒಮ್ಮೆ ಮಾತ್ರ ಇಲ್ಲಿ ನೀರು

    ಬಾಗಲಕೋಟೆ: ನೀರಿನ‌ ಹಾಹಾಕಾರಕ್ಕೆ 12 ವರ್ಷವಾದರೂ ಸಿಗದ ಮುಕ್ತಿಗೆ ಜನಸಾಮಾನ್ಯರು ತೀವ್ರ ಕಂಗೆಟ್ಟಿದ್ದು, ಪಟ್ಟಣಕ್ಕೆ ಹೊಂದಿಕೊಂಡಿದ್ರು, ಅಲ್ಲಿನ ನಿವಾಸಿಗಳ ನೀರಿನ ಪರದಾಟ ಮಾತ್ರ ಬಗೆಹರಿಯದ ಸಮಸ್ಯೆಯಾಗಿ ಕಾಡುತ್ತಿದೆ. ಗುಳೇದಗುಡ್ಡ ತಾಂಡದ ಜನರಿಗೆ ಜೀವಜಲದ ತೊಂದರೆ ಹೆಚ್ಚಾಗಿದ್ದು, ಇಲ್ಲಿ ಮೂರು ದಿನಕ್ಕೆ ಒಮ್ಮೆ ಮಾತ್ರ ನೀರು ಬರುತ್ತದೆ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ.

    ಇದನ್ನೂ ಓದಿ: ಶಿಕ್ಷಣ ನಿರ್ಲಕ್ಷಿಸಿದರೆ ದೇಶದ ಭವಿಷ್ಯ ಗಂಡಾಂತರಕ್ಕೆ ತಳ್ಳುವ ನೀಚ ಪ್ರವೃತ್ತಿ: ವಿಜಯೇಂದ್ರ ತೀಕ್ಷ್ಣ ವಿಮರ್ಶೆ

    ತಾಂಡಾ ನಿವಾಸಿಗಳಿಗೆ ನೀರಿನ ದಾಹ ತೀರಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಏರ್ ವಾಲ್ ಸಂಪ್​ಗೆ ಇಳಿದು ನೀರು ತುಂಬುವ ಜನರು, ಅಂದಾಜು 60 ಕುಟುಂಬಗಳು ವಾಸ ಮಾಡುವ ಈ ಸ್ಥಳದಲ್ಲಿ ಕನಿಷ್ಟ ಒಂದು ಕೈ ಬೋರ್ ಸಹ ಇಲ್ಲ ಎಂದು ಆರೋಪಿಸಿದ್ದಾರೆ. ನಾವು ನೀರಿಗಾಗಿ ಪರದಾಡೋದು ತಪ್ಪಿಲ್ಲ, ಪಟ್ಟಣಕ್ಕೆ ಹೊಂದಿಕೊಂಡಿದ್ರು ಸಹ ಕುಡಿಯೋ ನೀರಿಗೆ ಊರೂರು ಅಲೆಯುವಂತೆ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ವರ್ಷ ಪೂರ್ತಿಯೂ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡೋದು ಮಾತ್ರ ತಪ್ಪಿಲ್ಲ. ನೀರಿನ‌ ಸಮಸ್ಯೆ ಬಗೆಹರಿಸಿ ಎನ್ನುವ ಜನರ ಕೂಗಿಗೆ ಇಲ್ಲಿ ಸ್ಪಂದನೆಯೇ ಇಲ್ಲ. ತಮ್ಮ ಕಷ್ಟಕ್ಕೆ ಸ್ಪಂದಿಸದ ಗುಳೇದಗುಡ್ಡ ಪುರಸಭೆ ಆಡಳಿತಕ್ಕೆ ನಿವಾಸಿಗಳು ಛೀಮಾರಿ ಹಾಕಿದ್ದು, ನೀರಿನ ಸಮಸ್ಯೆಯಿಂದ ಮುಕ್ತಿ ದೊರಕುವಂತೆ ಮಾಡಿ ಎಂದು ಒತ್ತಾಯಿಸಿದ್ದಾರೆ.

    ‘ಆತನದು ಸ್ಟಾಪ್-ಸ್ಟಾರ್ಟ್ ಕರಿಯರ್’​! ವಿರಾಟ್​ ಕೊಹ್ಲಿ ವಿರುದ್ಧ ಮತ್ತೆ ಕಿಡಿಕಾರಿದ ಸುನಿಲ್ ಗವಾಸ್ಕರ್​, ಇದೆಲ್ಲಾ ನಿಮಗೆ…

    ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts