ಬೆಂಗಳೂರು: ನಗರದ ನೂತನ ಮೆಟ್ರೋ ಮಾರ್ಗಕ್ಕೆ ಗುರುವಾರದಂದು ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ವರ್ಚುವಲ್ ವೇದಿಕೆಯಲ್ಲಿಯೇ ರೈಲು ಸಂಚಾರಕ್ಕೆ ಹಸಿರು ಬಾವುಟ ತೋರಿಸಿದರು.
ಇದನ್ನೂ ಓದಿ: ರಕ್ತನಾಳದ ತುಂಬೆಲ್ಲಾ ಬೆಳೆಯಿತು ವಿಚಿತ್ರ ‘ಮ್ಯಾಜಿಕ್’ ಅಣಬೆಗಳು! ಚಿಕಿತ್ಸೆ ನೀಡಿದ ವೈದ್ಯರೇ ಸುಸ್ತು!
ಕೋಣನಕುಂಟೆ ಮೆಟ್ರೋ ನಿಲ್ದಾಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು. ಯಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ (ಅಂಜನಾಪುರ ಟೌನ್ ಶಿಪ್) ವರೆಗಿನ 6.29 ಕಿ. ಮೀ. ಉದ್ದದ ಮಾರ್ಗದಲ್ಲಿ ಇಂದಿನಿಂದ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ಈ ಮಾರ್ಗದಲ್ಲಿ ಸಂಚಾರ ನಾಳೆಯಿಂದ ಜನಸಾಮಾನ್ಯರಿಗೆ ಮುಕ್ತವಾಗಲಿದೆ. ಹೊಸ ರೈಲು ಮಾರ್ಗದಲ್ಲಿ ಐದು ಹೊಸ ನಿಲ್ದಾಣಗಳನ್ನು ಸೇರ್ಪಡಿಸಲಾಗಿದೆ. ನಾಗಸಂದ್ರದಿಂದ ಯಲಚೇನಹಳ್ಳಿಯವರೆಗೆ ಬರುತ್ತಿದ್ದ ಹಸಿರು ಮಾರ್ಗದ ರೈಲು ಈ ಮಾರ್ಗದಲ್ಲಿ ಸಂಚರಿಸಲಿದೆ.
ಇದನ್ನೂ ಓದಿ: ವರುಣ್ ಧವನ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಶುಭ ಸುದ್ದಿ ಕೊಟ್ಟ ಜೋಡಿ
ಹೊಸ ಮೆಟ್ರೋ ನಿಲ್ದಾಣಗಳು:
1. ಕೋಣನಕುಂಟೆ ಕ್ರಾಸ್
2. ದೊಡ್ಡಕಲ್ಲಸಂದ್ರ
3. ವಾಜರಹಳ್ಳಿ
4. ತಲಘಟ್ಟಪುರ
5. ರೇಷ್ಮೆ ಸಂಸ್ಥೆ ( ಅಂಜನಾಪುರ )
ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ
ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!