More

    ರಜಿನಿಗೆ ವಿಜಯ ಠಕ್ಕರ್-ತಲೈವಾ ಫ್ಯಾನ್ ವಾರ್​ಗೆ ಬೀಳುತ್ತಾ ಬ್ರೇಕ್?

    ಚೆನ್ನೈ: ಕಾಲಿವುಡ್​ನಲ್ಲಿ ಪ್ರತಿಯೊಬ್ಬ ನಟನು ತಮ್ಮದೇ ಆದ ಅಭಿಮಾನಿ ಬಳವನ್ನು ಹೊಂದಿದ್ದಾರೆ. ಈ ಪೈಕಿ ನೋಡುವುದಾದರೆ ಸೂಪರ್​ಸ್ಟಾರ್​ ರಜನಿಕಾಂತ್​, ದಳಪತಿ ವಿಜಯ್​ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಅಭಿಮಾನಿಗಳ ನಡುವೆ ಸ್ಟಾರ್​ವಾರ್​ ನಡೆಯುತ್ತಿರುತ್ತದೆ.

    ತಮ್ಮ ಐಶ್ವರ್ಯ ನಿರ್ದೇಶನದ ಲಾಲ್​ ಸಲಾಂ ಚಿತ್ರದ ಆಡಿಯೋ ಲಾಂಚ್​ನಲ್ಲಿ ಸ್ಟಾರ್​ವಾರ್​ ಕುರಿತು ಮಾತನಾಡಿರುವ ರಜನಿಕಾಂತ್​, ನಾನು ಈ ಹಿಂದೆ ಹೇಳಿದ ಕಾಗೆ ಹಾಗೂ ಹೆದ್ದಿನ ಕಥೆಯನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಇದು ನನಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ರಜನಿ ಹೇಳಿದ್ದಾರೆ.

    ರಜಿನಿಗೆ ವಿಜಯ ಠಕ್ಕರ್-ತಲೈವಾ ಫ್ಯಾನ್ ವಾರ್​ಗೆ ಬೀಳುತ್ತಾ ಬ್ರೇಕ್?

    ಇದನ್ನೂ ಓದಿ: ಲೋಕಸಭೆ ಚುನಾವಣೆ; ಕುತೂಹಲ ಮೂಡಿಸಿದ ಡಿ.ಕೆ. ಶಿವಕುಮಾರ್​-ಸೂರಜ್​ ರೇವಣ್ಣ ಭೇಟಿ

    ನಾನು ಜೈಲರ್​ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಲಾದ ಕಾಗೆ ಹಾಗೂ ಹದ್ದಿನ ಕಥೆಯನ್ನು ಬೇರೊಂದು ರೀತಿಯಲ್ಲಿ ಅರ್ಥೈಸಲಾಗಿದ್ದು, ಇದು ನನಗೆ ತುಂಬಾ ನೋವುಂಟು ಮಾಡಿದೆ. ವಿಜಯ್​ ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ಧರ್ಮತಿನ್​ ತಲೈವನ್​ ಚಿತ್ರದ ಚಿತ್ರೀಕರಣ ವೇಳೆ ಆತನಿಗೆ 13 ವರ್ಷ ಶೂಟಿಂಗ್​ ಮುಗಿದ ಬಳಿಕ ಎಸ್​.ಎ. ಚಂದ್ರಶೇಖರ್​ ಆತನನ್ನು ನನಗೆ ಪರಿಚಯಿಸಿದ್ದರು. ವಿಜಯ್​ ನನಗೆ ನಟನೆ ಕಡೆ ಒಲವಿರುವುದಾಗಿ ಹೇಳಿದ್ದರು. ಆದರೆ, ನಾನು ಮೊದಲು ವಿಧ್ಯಾಭ್ಯಾಸ ಮುಗಿಸಿಕೊಳ್ಳಿ ಎಂದುಇ ಸಲಹೆ ನೀಡಿದ್ದೆ.

    ಆ ಬಳಿಕ ವಿಜಯ್​ ನಟನಾಗಿ ಬೆಳೆದು ಇಂದು ಉನ್ನತ ಸ್ಥಾನದಲ್ಲಿದ್ದಾನೆ. ಆತನ ಶಿಸ್ತು, ಪರಿಶ್ರಮ, ಪ್ರತಿಭೆಯೆ ಮುಖ್ಯ ಕಾರಣ. ಆತ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರುತ್ತಾನೆಂದು ಹೇಳುತ್ತಾರೆ. ನನ್ನ ಮತ್ತು ಅವನ ನಡುವೆ ಪೈಪೋಟಿ ಇದೆ ಎಂದು ಮಾತನಾಡುತ್ತಾರೆ. ಆದರೆ, ವಿಜಯ್​ ಹಾಗೂ ನನ್ನ ಪ್ರಕಾರ ನಮಗೆ ನಾವೇ ಸ್ಫರ್ಧಿಗಳು ನಮಗೆ ಯಾರು ಪ್ರತಿಸ್ಫರ್ಧಿಗಳಿಲ್ಲ. ನಾನು ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ ದಯವಿಟ್ಟು ನಮ್ಮ ನಡುವ ಹೋಲಿಕೆ ಮಾಡಬೇಡಿ ಎಂದು ಸೂಪರ್​ಸ್ಟಾರ್​ ರಜಿನಿಕಾಂತ್​ ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts