ಮುಂಬೈ: ಸುಶಾಂತ್ ಕೊಲೆಯಾಗಿಲ್ಲ, ಅವರದ್ದು ಆತ್ಮಹತ್ಯೆ ಎಂದು ಏಮ್ಸ್ನ ವೈದ್ಯರು ಸಿಬಿಐಗೆ ವರದಿ ನೀಡಿದೆ. ಈ ನಿಟ್ಟಿನಲ್ಲಿ ಮಾತನಾಡಿರುವ ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್, ಈ ವಿಷಯ ತಮಗೆ ಮೊದಲೇ ಗೊತ್ತಿತ್ತು ಮತ್ತು ತಮಗೆ ಗೊತ್ತಿರುವ ವಿಷಯವನ್ನೇ ವೈದ್ಯರು ಖಚಿತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅವ್ರು ಹಾಗಂತಾರೆ, ಇವ್ರು ಹೀಗಂತಾರೆ … ನಿಜ ಯಾವುದು?
ಸುಶಾಂತ್ ಸಿಂಗ್ ರಜಪೂತ್ ಅವರ ಅಸಹಜ ಸಾವಿನ ಕುರಿತಾಗಿ ಸಾಕಷ್ಟು ಊಹಾಪೋಹಗಳು ಎದ್ದಿತ್ತು. ಈ ಹಿನ್ನೆಲೆಯಲ್ಲಿ, ಅವರ ಪೋಸ್ಟ್ ಮಾರ್ಟಂ ವರದಿಯನ್ನು ಪರಿಶೀಲಿಸಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್)ನ ವೈದ್ಯರು, ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಹೇಳಿದ್ದರು. ಇನ್ನು ಸಿಬಿಐ ಸಹ ಸಾಕಷ್ಟು ತನಿಖೆಯ ನಂತರ, ಸುಶಾಂತ್ ಅವರ ಕೊಲೆಯಾಗಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿತ್ತು.
ಈ ಕುರಿತು ಖಾಸಗೀ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಪರಂಬೀರ್ ಸಿಂಗ್, ‘ನಾವು ಮೊದಲಿನಿಂದಲೂ ಇದೊಂದು ಆತ್ಮಹತ್ಯೆ ಎಂದೇ ಹೇಳಿಕೊಂಡು ಬಂದಿದ್ದೆವು. ಆದರೆ, ಕುಟುಂಬದವರು ಸೇರಿದಂತೆ ಎಲ್ಲರೂ ಇದೊಂದು ಕೊಲೆ ಎಂದು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರು. ಈಗ ವೈದ್ಯರೇ ನಮ್ಮ ಮಾತನ್ನು ಪುಷ್ಠೀಕರಿಸಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅತ್ಯಂತ ಹಿತವಾದ ಜಾಗ ಯಾವುದು ಗೊತ್ತಾ? ಕಂಗನಾ ಹೇಳ್ತಾರೆ ಕೇಳಿ …
ಈ ಕುರಿತು ಮತ್ತಷ್ಟು ಮಾತನಾಡಿರುವ ಅವರು, ‘ನಮ್ಮದು ಮೊದಲಿನಿಂದಲೂ ವೃತ್ತಿಪರ ತನಿಖೆಯಾಗಿತ್ತು. ಸುಶಾಂತ್ ಅವರ ಪೋಸ್ಟ್ಮಾರ್ಟಂ ಸಹ ಬಹಳ ವೃತ್ತಿಪರವಾಗಿ ನಡೆಸಲಾಗಿತ್ತು. ಸುಪ್ರೀಂ ಕೋರ್ಟ್ ನಮಗೆ ವರದಿ ಸಲ್ಲಿಸುವುದಕ್ಕೆ ಹೇಳಿದಾಗ, ನಾವು ಪ್ರಾಮಾಣಿಕವಾದ ವರದಿಯನ್ನು ಕೊಟ್ಟಿದ್ದೆವು. ನ್ಯಾಯಾಲಯಕ್ಕೆ ನಮ್ಮ ವರದಿಯಲ್ಲಿ ಯಾವ ಲೋಪ-ದೋಷಗಳು ಕಂಡುಬಂದಿರಲಿಲ್ಲ. ಆದರೆ, ಸುದ್ದಿವಾಹಿನಿಗಳು ಮಾತ್ರ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸಾಬೀತು ಮಾಡುವುದಕ್ಕೆ ಮುಂದಾದವು. ಇದೀಗ ವೈದ್ಯರ ತಂಡವೇ, ಇದು ಆತ್ಮಹತ್ಯೆ ಎಂದು ಹೇಳುವ ಮೂಲಕ ನ್ಯಾಯವನ್ನು ಎತ್ತಿಹಿಡಿದಿದೆ’ ಎಂದು ಹೇಳಿದ್ದಾರೆ.
ನನ್ನ ಚಿತ್ರದಲ್ಲಿನ ಸೆಕ್ಸ್ ದೃಶ್ಯಗಳಿಂದ ರೇಪ್ಗಳಾಗುತ್ತಿಲ್ಲ; ನೆಟ್ಟಿಗನಿಗೆ ಸ್ವರಾ ತರಾಟೆ