More

    ಅತ್ಯಂತ ಹಿತವಾದ ಜಾಗ ಯಾವುದು ಗೊತ್ತಾ? ಕಂಗನಾ ಹೇಳ್ತಾರೆ ಕೇಳಿ …

    ಚೆನ್ನೈ: ಲಾಕ್​ಡೌನ್​ ಸಮಯದಲ್ಲಿ ಕಳೆದ ಆರೂವರೆ ತಿಂಗಳುಗಳ ಕಾಲ ಹಲವು ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​, ಇದೀಗ ‘ತಲೈವಿ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದು ಗೊತ್ತೇ ಇದೆ. ಈ ವಿಷಯವಾಗಿ ಅವರೇ ಕೆಲವು ದಿನಗಳ ಹಿಂದೆ ಟ್ವೀಟ್​ ಮಾಡಿದ್ದರು. ಚಿತ್ರೀಕರಣಕ್ಕೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದರು.

    ಇದನ್ನೂ ನೋಡಿ: ಮತ್ತೆ ಶುರುವಾಯ್ತು ‘ಆರ್​ಆರ್​ಆರ್​’ ಶೂಟಿಂಗ್​ … ಹಾಗಂತ ಖುಷಿಪಡಬೇಡಿ

    ಇದೀಗ ಅವರು ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ನಲ್ಲಿ ‘ತಲೈವಿ’ ಚಿತ್ರದ ಚಿತ್ರೀಕರಣದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಕಂಗನಾಗೆ ನಿರ್ದೇಶಕ ಎ.ಎಲ್​. ವಿಜಯ್​ ಮಾಹಿತಿ ನೀಡುತ್ತಿರುವುದನ್ನು ನೋಡಬಹುದಾಗಿದೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ನಮ್ಮ ಚಿತ್ರದ ಪ್ರತಿಭಾವಂತ ನಿರ್ದೇಶಕರಾದ ಎ.ಎಲ್​. ವಿಜಯ್​ ಅವರ ಜತೆಗಿನ ಕೆಲವು ತುಣುಕುಗಳು. ಜಗತ್ತಿನಲ್ಲಿ ಬಹಳ ಅದ್ಭುತವಾದ ಹಲವು ಜಾಗಗಳಿವೆ. ನನಗೆ ಮಾತ್ರ ಜಗತ್ತಿನಲ್ಲಿ ಅತ್ಯಂತ ಹಿತವಾದ ಮತ್ತು ಆಪ್ಯಾಯಮಾನವಾದ ಜಾಗವೆಂದರೆ ಅದು ಫಿಲ್ಮ್​ ಸೆಟ್​’ ಎಂದು ಅವರು ಬರೆದುಕೊಂಡಿದ್ದಾರೆ.

    ಇದನ್ನೂ ನೋಡಿ: ಸಂಭಾವನೆ ಕಡಿಮೆ ಮಾಡಿಕೊಂಡ ಶಾಹೀದ್​ … ಹೊಸ ಸಂಭಾವನೆ ಎಷ್ಟು?

    ‘ಥಲೈವಿ’ ಚಿತ್ರವು ನಟಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕುರಿತಾದ ಬಯೋಪಿಕ್​ ಆಗಿದ್ದು, ಅವರ ಪಾತ್ರವನ್ನು ಕಂಗನಾ ನಿರ್ವಹಿಸುತ್ತಿದ್ದಾರೆ. ಇನ್ನು ನಟ ಅರವಿಂದ್​ ಸ್ವಾಮಿ ಅವರು ಎಂ.ಜಿ. ರಾಮಚಂದ್ರನ್​ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಮೀಟೂ ಅಭಿಯಾನವೇ ಫೇಕ್​ … ಹೊಸ ಬಾಂಬ್​ ಸಿಡಿಸಿದ ಪಾಯಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts