ಮುಂಬೈ: ನಿನ್ನೆ (ಮೇ.06) ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ 7 ವಿಕೆಟ್ಗಳ ಅಂತರದಿಂದ ಮುಂಬೈ ಈ ಮ್ಯಾಚ್ ಅನ್ನು ವಶಪಡಿಸಿಕೊಂಡಿತು. ಈ ಗೆಲುವಿನ ಮೂಲಕ ಎಸ್ಆರ್ಎಚ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ಗೆ ಭಾರೀ ಮುಖಭಂಗ ಉಂಟುಮಾಡಿದ ಎಂಐ, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ.
ಇದನ್ನೂ ಓದಿ: ಗೀತಾ ಸೋಲೋದು ಖಚಿತ! ನಟ ಶಿವರಾಜ್ ಕುಮಾರ್ ಹೇಳಿಕೆಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಈ ವೇಳೆ ಆರಂಭಿಕ ಹಂತದಲ್ಲೇ ಎಡವಿದ ಓಪನಿಂಗ್ ಬ್ಯಾಟ್ಸ್ಮನ್ಗಳಾದ ಅಭಿಷೇಕ್ ಶರ್ಮಾ ಕೇವಲ 11 ರನ್ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಅವರ ಬೆನ್ನಲ್ಲೇ ಹೆನ್ರಿಕ್ ಕ್ಲಾಸೆನ್ (2) ರನ್ಗೆ ವಿಕೆಟ್ ಕಳೆದುಕೊಂಡರು. ಈ ಮೂಲಕ ಎಸ್ಆರ್ಎಚ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 173 ರನ್ ಕಲೆಹಾಕುವಲ್ಲಿ ಮಾತ್ರ ಶಕ್ತವಾಯಿತು.
ಸದ್ಯ ಎಸ್ಆರ್ಎಚ್ ತಂಡದ ಬ್ಯಾಟ್ಸ್ಮನ್ಗಳು ಅಬ್ಬರಿಸದೆ, ಬ್ಯಾಟಿಂಗ್ ಕೊಡುಗೆ ಕೊಡುವಲ್ಲಿ ವಿಫಲರಾಗಿದ್ದನ್ನು ಗಮನಿಸಿದ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್, ಕ್ರೀಸ್ಗೆ ಬಂದ ಬಳಿಕ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹೆನ್ರಿಕ್ ಕ್ಲಾಸೆನ್ ಬ್ಯಾಟ್ ಮಾಡಬೇಕಿತ್ತು. ಆದರೆ ಅವರು ಆ ಆಟವನ್ನು ಪ್ರದರ್ಶಿಸಲಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮೂವತ್ತು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1946 ಮತಗಟ್ಟೆ 17,09,244 ಮತದಾರರು
“ಕ್ಲಾಸೆನ್ಗೆ ಪರಿಸ್ಥಿತಿಗೆ ತಕ್ಕಂತೆ ಆಡಲು ಬರುವುದಿಲ್ಲ ಎಂಬುದು ಈ ಪಂದ್ಯದಿಂದಲೇ ತಿಳಿಯುತ್ತದೆ. ತಂಡಕ್ಕೆ ತಮ್ಮ ಅವಶ್ಯಕತೆ, ಸ್ಪೋಟಕ ಬ್ಯಾಟಿಂಗ್ ಅಗತ್ಯ ಎಷ್ಟಿರುತ್ತದೆ ಎಂಬುದನ್ನು ಅರಿಯಬೇಕಿತ್ತು. ಈ ರೀತಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದ್ರೆ, ಅದು ಇಡೀ ತಂಡಕ್ಕೆ ದೊಡ್ಡ ಹೊಡೆತವಾಗುತ್ತದೆ. ಅಬ್ಬರದ ಬ್ಯಾಟಿಂಗ್ ಮಾಡಿ, ಕಡೆಯ ಓವರ್ವರೆಗೂ ನಿಂತಿದ್ರೆ, ಖಂಡಿತ ಸನ್ರೈಸರ್ಸ್ 190ಕ್ಕೂ ಅಧಿಕ ರನ್ಗಳ ಟಾರ್ಗೆಟ್ ಸೆಟ್ ಮಾಡಲು ಸಾಧ್ಯವಾಗುತ್ತಿತ್ತು” ಎಂದಿದ್ದಾರೆ,(ಏಜೆನ್ಸೀಸ್).
ಈತ ಕ್ರೀಸ್ಗೆ ಬಂದ್ರೆ ಬೌಲರ್ಗಳೇ ಬೆವರುತ್ತಾರೆ! ಅಜಯ್ ಜಡೇಜಾ ಹೆಸರಿಸಿದ ಸ್ಟಾರ್ ಬ್ಯಾಟ್ಸ್ಮನ್ ಇವರೇ
ಗೀತಾ ಸೋಲೋದು ಖಚಿತ! ನಟ ಶಿವರಾಜ್ ಕುಮಾರ್ ಹೇಳಿಕೆಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ