ಧೋನಿ ನಿನ್ನ ಕ್ರಿಕೆಟ್ ಜೀವನವನ್ನೇ ಕೊನೆಗೊಳಿಸುತ್ತಾರೆ ಎಂದು ಶ್ರೀಶಾಂತ್ ಹೆದರಿಸಿದ್ದು ಯಾರಿಗೆ?

blank

ನವದೆಹಲಿ: ‘ಧೋನಿ ವಿರುದ್ಧ ಮತ್ತೆ ಆಡುವ ಅವಕಾಶ ಸಿಗದಿರಲಿ ಎಂದು ಪ್ರಾರ್ಥಿಸುವುದು ಉತ್ತಮ. ಇಲ್ಲದಿದ್ದರೆ ಧೋನಿ ನಿನ್ನ ವೃತ್ತಿಜೀವನವನ್ನೇ ಕೊನೆಗೊಳಿಸಬಹುದು. ಯಾಕೆಂದರೆ ಧೋನಿ ಏನನ್ನೂ ಮರೆಯುವುದಿಲ್ಲ’ ಎಂದು ಭಾರತ ತಂಡದ ಮಾಜಿ ವೇಗಿ ಎಸ್. ಶ್ರೀಶಾಂತ್ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ರನ್ನು ಹೆದರಿಸಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಧೋನಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಛಲದೊಂದಿಗೆ ಆಡಿರಲಿಲ್ಲ ಎಂದು ಬೆನ್ ಸ್ಟೋಕ್ಸ್ ತಮ್ಮ ‘ಆನ್ ಫೈರ್​’ ಪುಸ್ತಕದಲ್ಲಿ ಬರೆದುಕೊಂಡಿರುವುದೇ ಇದಕ್ಕೆ ಕಾರಣ!

blank

ಇದನ್ನೂ ಓದಿ: ಇವತ್ತಿನ ಕ್ರಿಕೆಟ್ ಯುಗದಲ್ಲಿ ನಾನು ಉಳಿಯುತ್ತಿರಲಿಲ್ಲ ಎಂದು ದ್ರಾವಿಡ್ ಹೇಳಿದ್ದು ಯಾಕೆ…!

ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯಲ್ಲಿ ಬೆನ್ ಸ್ಟೋಕ್ಸ್‌ರ ಈ ಆರೋಪದ ಬಗ್ಗೆ ಎದುರಾದ ಪ್ರಶ್ನೆಗೆ ಕೇರಳ ವೇಗಿ ಶ್ರೀಶಾಂತ್, ‘ನಾನು ಸ್ಟೋಕ್ಸ್‌ಗೆ ಶುಭ ಹಾರೈಸುತ್ತೇನೆ. ಯಾಕೆಂದರೆ ಮುಂದೆ ಐಪಿಎಲ್ ಅಥವಾ ಭಾರತ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಅವರು ಎದುರಾದರೆ ಧೋನಿ ಅವರನ್ನು ಸುಮ್ಮನೆ ಬಿಡಲಾರರು. ಧೋನಿ ಅವರ ವೃತ್ತಜೀವನವನ್ನೇ ಕೊನೆಗೊಳಿಸಬಹುದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ಸಾಕ್ಷಿ, ಮೀರಾ ಆಸೆ ಪಡಲು ಇದೇ ಕಾರಣವಿರಬಹುದೇ?

ಬರ್ಮಿಂಗ್‌ಹ್ಯಾಂನಲ್ಲಿ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್‌ಗೆ 337 ರನ್ ಪೇರಿಸಿದ್ದರೆ, ಭಾರತ ತಂಡ 5 ವಿಕೆಟ್‌ಗೆ 306 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪಂದ್ಯದಲ್ಲಿ ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದಕ್ಕೆ ಮುನ್ನ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಕೂಡ, ಭಾರತ ಆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೇಕೆಂದೇ ಸೋತಿತ್ತು ಎಂದು ಆರೋಪಿಸಿದ್ದರು.

ಟೆಸ್ಟ್‌ನಲ್ಲಿ 50 ಓವರ್ ಬಳಿಕ ಹೊಸ ಚೆಂಡು ಕೊಡಿ ಎಂದು ಸಚಿನ್ ಹೇಳಿದ್ದೇಕೆ?

Share This Article

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…

ಬೇಸಿಗೆಯಲ್ಲಿ ಪಿತ್ತಕೋಶ ಸಮಸ್ಯೆ ಹೆಚ್ಚಳ

| ಪಂಕಜ ಕೆ.ಎಂ., ಬೆಂಗಳೂರು ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು…