ಮಣಿಕರಣ್/ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಅವರ ಅಭಿಮಾನಿಗಳು ನಿತ್ಯ ಯಾವುದಾದರೂ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ. ಜಗತ್ತಿನ ಮೂಲೆಮೂಲೆಯಲ್ಲೂ ಪುನೀತ್ರ ಮರಣದಿಂದ ಮರಗಿರುವ ಹೃದಯಗಳು ಬೇರೆ ಬೇರೆ ರೀತಿ ತಮ್ಮ ಅಭಿಮಾನವನ್ನು ಸಾಬೀತುಪಡಿಸುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿಯ ಯಾತ್ರೆಯ ಬಗ್ಗೆ ನೆಟ್ಟಿಗರು ಸಿಕ್ಕಾಪಟ್ಟೆ ಮಾತಾಡಿಕೊಳ್ಳುತ್ತಿದ್ದಾರೆ.
ಹೌದು, ಅಪ್ಪು ಅಭಿಮಾನಿಯಾದ ಚಾರಣಕಾರ ಗುರುಪ್ರಕಾಶ್ ಪುನೀತ್ಗೆಂದು 3,350 ಕಿಲೋ. ಮೀಟರ್ ಸೈಕಲ್ ಯಾತ್ರೆ ಡಿ.10 ರಂದು ಆರಂಭಿಸಿ ಇಂದು ಜನವರಿ 20 ರಂದು ತಮ್ಮ ಯಾತ್ರೆ ಮುಗಿಸಿ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯನ್ನು ತಲುಪಿದ್ದಾರೆ. ಹಿಮಾಚಲ ಪ್ರದೇಶದ ಮಣಿಕರಣ್ದಿಂದ ಆರಂಭಿಸಿ ಕರ್ನಾಟಕದ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯವರೆಗೆ ‘ಮೌಂಟ್ನೇರ್ ಗುರುಪ್ರಕಾಶ್‘ರ ಅಭಿಮಾನದ ಬೈಸಿಕಲ್ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಇಂದು ಅಪ್ಪು ಸಮಾಧಿಗೆ ಭೇಟಿ ನೀಡಿದ ಗುರು ಅವರನ್ನು ಸ್ವಾಗತಿಸಿ ದೊಡ್ಮನೆ ಕುಟುಂಬ ಸನ್ಮಾನಿಸಿದೆ.
ತಮ್ಮ 3,350 ಕಿಮೀ. ಪ್ರಯಾಣದ ಬಗ್ಗೆ ಮೊದಲ ಬಾರಿಗೆ ಗುರು ಅವರು ವಿಜಯವಾಣಿ ಜತೆಗೆ ಹಂಚಿಕೊಂಡಿದ್ದಾರೆ. ಹಾಗಾದರೆ, ತಡವೇಕೆ? ಮೇಲಿರುವ ವಿಡಿಯೋವನ್ನು ಅಪ್ಪು ಅಭಿಮಾನಿಗಳು ವೀಕ್ಷಿಸಬಹುದು. ಹಲವು ಅಭಿಮಾನಿಗಳು ಈಗಾಗಲೇ ರಕ್ತದಾನ, ಅನ್ನದಾನ, ನೇತ್ರದಾನ ಹಾಗೂ ಇತರ ಸಮಾಜ ಸೇವೆ ಅಥವಾ ವಿಶೇಷ ಸ್ಮರಣೆ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರೀತಿಯನ್ನು ತಿಳಿಸುತ್ತಿದ್ದಾರೆ. ಬಹುಶಃ, ಈಗ ಅಪ್ಪು ಬದುಕಿದ್ದರೆ ಈ ಡೈ ಹಾರ್ಡ್ ಅಭಿಮಾನಿಗಳ ಪ್ರೀತಿ ಕಂಡು ಅವರ ಮನಸ್ಸು ಭಾರವಾಗುತ್ತಿತ್ತು.
ಸಿಎಂ ಜಗನ್ ಮೋಹನ್ ರೆಡ್ಡಿಗೆ ಕೊಲೆ ಬೆದರಿಕೆ! ಪವನ್ ಕಲ್ಯಾಣ್ ಅಭಿಮಾನಿಯ ಮುಂದಿನ ಗತಿ ಏನು?
ಮತ್ತೆ ಮುಖ ಮುಚ್ಚಿಕೊಂಡು ಡಿಂಪಲ್ ಕ್ವೀನ್ ರಚಿತಾ ಭೇಟಿಯಾದ ಸ್ನೇಹಿತ ಯಾರು?