More

    ಸಿಎಂ ಜಗನ್ ಮೋಹನ್ ರೆಡ್ಡಿಗೆ ಕೊಲೆ ಬೆದರಿಕೆ! ಪವನ್ ಕಲ್ಯಾಣ್ ಅಭಿಮಾನಿಯ ಮುಂದಿನ ಗತಿ ಏನು?

    ತೆಲುಗು ಚಿತ್ರರಂಗ ಹಾಗೂ ಆಂಧ್ರ ಪ್ರದೇಶ ಸರ್ಕಾರದ ನಡುವಿನ ಟಿಕೆಟ್ ಬೆಲೆಯ ಕಡಿತದ ಬಗೆಗಿನ ತಿಕ್ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ, ನಟ ಚಿರಂಜೀವಿ ಮಧ್ಯ ಪ್ರವೇಶಸಿದ ಮತ್ತು ಅವರು ಸಿಎಂ ಜಗನ್ ಅವರನ್ನು ಭೇಟಿ ಮಾಡಿದ ನಂತರ ಈ ತಿಕ್ಕಾಟ ತುಸು ಕಡಿಮೆ ಆಗಿದೆ ಎನ್ನಬಹುದು. ಹೀಗಿದ್ದರೂ, ಟಾಲಿವುಡ್ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಅಭಿಮಾನಿಗಳು ಮಾತ್ರ ಸಿಎಂ ಜಗನ್ ಮೋಹನ್ ರೆಡ್ಡಿಯ ವಿರುದ್ಧ ಕೀಡಿಕಾರುವುದು ಇನ್ನೂ ಬಿಟ್ಟಿಲ್ಲ. ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳ ನಡುವಿನ ವೈಷಮ್ಯ ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಸದ್ಯ ಪವನ್ ಕಲ್ಯಾಣ್ ಅವರ ಅಭಿಮಾನಿಯೊಬ್ಬ ಜಗನ್ ಅವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
    ಹೌದು, ರಾಜೀವ್ ಗಾಂಧಿ ಅವರನ್ನು ಕೊಂದ ಮಾದರಿಯಲ್ಲಿ ಮಾನವ ಬಾಂಬ್ ಆಗಿ ಜಗನ್ ಅವರನ್ನು ಕೊಲ್ಲುತ್ತೇನೆ ಎಂದು ನಟ ಪವನ್ ಕಲ್ಯಾಣ್ ಅಭಿಮಾನಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರಂತೆ. ಹೀಗಾಗಿ, ಆ ಅಭಿಮಾನಿಯ ವಿರುದ್ಧ ತಿರುಪತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ, ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಸಹ ಹಲವು ನಗರಗಳಲ್ಲಿ ಪವನ್ ಅಭಿಮಾನಿ ವಿರುದ್ಧ ದೂರು ದಾಖಲಿಸಿದ್ದಾರೆ. ಅಂದಹಾಗೆ, ಸಿಎಂ ಜಗನ್ ಅನ್ನು ಅವಾಚ್ಯ ಶಬ್ದಗಳಿಂದ ಬೈದಿರುವ ನಟ ಪವನ್ ಕಲ್ಯಾಣ್ ಅಭಿಮಾನಿ, ನಟನಿಗಾಗಿ ನಾನು ಸೂಸೈಡ್ ಬಾಂಬರ್ ಆಗಿ ಸಿಎಂ ಜಗನ್ ಅನ್ನು ಕೊಲ್ಲುತ್ತೇನೆ ಎಂದಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್ ಹಾಗೂ ಜಗನ್ ನಡುವೆ ತೀವ್ರ ವಾಗ್ದಾಳಿಗಳು ನಡೆದಿದ್ದವು. ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್‌ಸಿನಿಮಾಕ್ಕೆ ಜಗನ್ ಸರ್ಕಾರ ಸಮಸ್ಯೆ ನೀಡಿತ್ತು ಎಂಬ ಆರೋಪಗಳು ಕೇಳಿಬಂದಿವೆ.
    ಬಳಿಕ, ಪವನ್ ಸಹ ತಮ್ಮ ಕುಟುಂಬದ ನಟ ಸಾಯಿ ಧರಮ್ ತೇಜ್ ನಟನೆಯ ರಿಪಬ್ಲಿಕ್ಸಿನಿಮಾದ ರಿಲೀಸ್ ಕಾರ್ಯಕ್ರಮದಲ್ಲಿ ಜಗನ್ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ಇದರಿಂದ ಸಿಎಂ ಜಗನ್ ಹಾಗೂ ಪವನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವೈಷಮ್ಯ ಆರಂಭವಾಯಿತು. ನಟ ಪವನ್ ಕಲ್ಯಾಣ್, ಜಗನ್ ಅನ್ನು ಏಕ ವಚನದಲ್ಲಿ ನಿಂದಿಸಿದ ಬಳಿಕವೇ ಜಗನ್ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರ ಇಳಿಸಿತು ಎನ್ನಲಾಗಿದೆ. ಇದಕ್ಕೂ ಮುನ್ನ ಸಿಎಂ ಜಗನ್ ಅವರ ಅಭಿಮಾನಿ ಒಬ್ಬ ಪವನ್ ಕಲ್ಯಾಣ್​ಗೆ ಕೊಲ್ಲುವ ಬೆದರಿಕೆ ಹಾಕಿದ್ದರು. ಆಗ ಆ ಅಭಿಮಾನಿಯನ್ನು ಪೊಲೀಸರು ಬಂದಿಸಿದರು. ಪವನ್ ಮತ್ತು ಜಗನ್ ಅಭಿಮಾನಿಗಳ ನಡುವಿನ ಈ ವೈಷಮ್ಯ ಯಾವಾಗ ಕೊನೆಯಾಗುತ್ತೆಂದು ಕಾದು ನೋಡಬೇಕಿದೆ

    ಮತ್ತೆ ಮುಖ ಮುಚ್ಚಿಕೊಂಡು ಡಿಂಪಲ್ ಕ್ವೀನ್ ರಚಿತಾ ಭೇಟಿಯಾದ ಸ್ನೇಹಿತ ಯಾರು?

    ಅಳಿಯ ಹೀರೋ ಆಗುವುದು ಚಿರಂಜೀವಿಗೆ ಇಷ್ಟವಿಲ್ಲ? ಮೆಗಾ ಸ್ಟಾರ್ ಪುತ್ರಿ ಶ್ರೀಜಾ ವಿಚ್ಛೇದನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts