ಹೈದರಾಬಾದ್: ತಾಯಿ ಮೃತಪಟ್ಟಳೆಂಬ ಸುದ್ದಿ ಕೇಳಿ ಮಗನು ಕೂಡ ಸಾವಿನ ಹಾದಿ ಹಿಡಿದಿರುವ ಘಟನೆ ಹೈದರಾಬಾದ್ನ ಕಟೇದನ್ ಏರಿಯಾದಲ್ಲಿ ಶನಿವಾರ ನಡೆದಿದೆ.
ಗಿಲ್ಲ ಶ್ರೀಹರಿ (22) ಮೃತ ಮಗ. ಮೈಲಾರ್ದೇವ್ಪಲ್ಲಿ ವಿಭಾಗದ ಮಧುಬನ ಕಾಲನಿಯ ನಿವಾಸಿಯಾದ ಶ್ರೀಹರಿ, ಇಂಜಿನಿಯರಿಂಗ್ ಓದುತ್ತಿದ್ದ. ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ತಂದೆ ನಿವೃತ್ತಿ ಹೊಂದಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿರುವ ತಂದೆ ಹಾಸಿಗೆ ಹಿಡಿದಿದ್ದಾರೆ.
ಶ್ರೀಹರಿ ವಿದ್ಯಾಭ್ಯಾಸದ ಜತೆಗೆ ಸಣ್ಣ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದ. ಏಪ್ರಿಲ್ 22ರಂದು ತಾಯಿ ರುಕ್ಮಿಣಿಗೆ ಕರೊನಾ ಸೋಂಕು ತಗುಲಿತ್ತು. 37 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಹರಿ ತಾಯಿ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾರೆ.
ಇತ್ತ ತಾಯಿ ಮೃತಪಟ್ಟಳು ಎಂಬ ಸುದ್ದಿಯನ್ನು ಕೇಳಿ ನೋವು ಸಹಿಸದೇ ಸ್ನೇಹಿತನ ಬೈಕ್ನಲ್ಲಿ ತೆರಳಿ ಹುಂಡಾಸಾಗರ್ ಪ್ರದೇಶದಲ್ಲಿ ಪಾರ್ಕ್ ಮಾಡಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಆತ್ಮಹತ್ಯೆಗು ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ತಂದೆಯ ಬಳಿ ಕ್ಷಮೆಯಾಚಿಸಿದ್ದಾನೆ. (ಏಜೆನ್ಸೀಸ್)
ಧೋನಿಯೊಂದಿಗಿನ ಬಾಂಧವ್ಯವನ್ನು ಎರಡೇ ಪದದಲ್ಲಿ ವಿವರಿಸಿದ ಕೊಹ್ಲಿಗೆ ನೆಟ್ಟಿಗರ ಮೆಚ್ಚುಗೆ!
ರಾಜ್ಯಕ್ಕೆ ಬಾಂಗ್ಲಿಗರ ಕಂಟಕ: ಬೆಂಗ್ಳೂರು, ಹೊರವಲಯದಲ್ಲಿ 85 ಸಾವಿರ ಮಂದಿ ಅಕ್ರಮ ವಾಸ