ರಾಯಚೂರು: ಮದ್ಯ ಮಾರಾಟಕ್ಕೆ ಮುಂದಾದ ಸರ್ಕಾರದ ಧೋರಣೆ ಖಂಡಿಸಿ ಸಿಎಂ ಹೆಸರಿಗೆ ಹೋರಾಟಗಾರರು ಮನಿ ಆರ್ಡರ್ ಮಾಡಿದ್ದಾರೆ.
ನಗರದ ಅಂಚೆ ಕಚೇರಿಯಲ್ಲಿ ಮದ್ಯ ನಿಷೇಧ ಆಂದೋಲನದ ಪದಾಧಿಕಾರಿಗಳು ಸರದಿಯಲ್ಲಿ ನಿಂತು ಹಣ ತುಂಬಿ ಪ್ರತಿಭಟಿಸಿದರು.
ಇದನ್ನೂ ಓದಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸ್ಪರ್ಧೆ ಮಾಡ್ತಾರಾ?
ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಆದಾಯದ ನೆಪ ಹೇಳಿ ಸರ್ಕಾರ ಮದ್ಯ ಮಾರಾಟ ಮಾಡಿರುವುದನ್ನು ಸಮರ್ಥಿಸಿಕೊಳ್ಳುತ್ತಿದೆ. ಹೀಗಾಗಿ ನಾವು ಸರ್ಕಾರದ ಬೊಕ್ಕಸಕ್ಕೆ ಹಣ ಸಂದಾಯ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ ಎಂದು ಹೋರಾಟಗಾರರು ಹೇಳಿದರು.
ಹತ್ತು ಜನ ಪದಾಧಿಕಾರಿಗಳು ತಲಾ 100ರಿಂದ 200 ರೂ.ವರೆಗೆ ಮನಿ ಆರ್ಡರ್ ಮಾಡಿದರು.