ಬೆಂಗಳೂರು: ಮನೆ ಮುಂದೆ ನಾಯಿಯನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿಸುತ್ತೀಯಾ ಎಂದು ಆರೋಪಿಸಿದ ಈ ಆರೋಪಿಗಳು ಈತನೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಪರಿಣಾಮ ನಾಯಿ ಮಾಲೀಕ ಕೊಲೆಯಾಗಿ ಹೋಗಿದ್ದಾನೆ! ಅಂದ ಹಾಗೆ ಇದೇ ವಿಚಾರವಾಗಿ ಈ ಹಿಂದೆಯೂ ಈ ಎರಡೂ ಪಕ್ಷಗಳ ನಡುವೆ ಜಗಳವಾಗಿತ್ತು. ಅದು ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿತ್ತು.
ಇದನ್ನೂ ಓದಿ: ಪಕ್ಷಿಯಿಂದ ನಾಯಿಗೆ ಟ್ವಿಟರ್ ಲೋಗೋ ಬದಲಿಸಿದ ಎಲಾನ್ ಮಸ್ಕ್: ಕಾರಣ ಹೀಗಿದೆ…
ಮನೆ ಮುಂದೆ ನಾಯಿ ಕರೆದುಕೊಂಡು ಬಂದು ಗಲೀಜು ಮಾಡಿಸ್ತಿಯಾ ಎನ್ನೊ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು ಈ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮುನಿರಾಜು ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ಮತ್ತೊರ್ವ ವ್ಯಕ್ತಿ ಮುರುಳಿ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ ಕೊಲೆ ಆರೋಪಿಗಳನ್ನು ಪ್ರಮೋದ್, ರವಿಕುಮಾರ್ ಮತ್ತು ಪಲ್ಲವಿ ಎಂದು ಗುರುತಿಸಲಾಗಿದೆ.
ಯಾಕಾಯ್ತು ಈ ಕೊಲೆ
ಪ್ರಮೋದ್ ಎಂಬಾತ ಮುನಿರಾಜು ಎಂಬುವವರ ಮನೆ ಮುಂದೆ ನಿತ್ಯವೂ ನಾಯಿಯನ್ನು ಕರೆದುಕೊಂಡು ಬರ್ತಿದ್ದ. ಈ ಹಿಂದೆ ಪ್ರಮೋದ್ ಮತ್ತು ರವಿಕುಮಾರ್, ನಾಯಿ ಜತೆಗೆ ಬಂದು ಮುನಿರಾಜು ಮನೆ ಮುಂದೆ ಸಿಗರೇಟ್ ಸೇದಿ ಸಮಸ್ಯೆ ಉಂಟುಮಾಡಿದ್ದರು. ಈ ವಿಚಾರಕ್ಕೆ ಮುನಿರಾಜು, ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಪೊಲೀಸರು ಏನು ಮಾಡಿದ್ರು?
ಈ ಸಂದರ್ಭ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರಿಗು ಕರೆದು ಬೈದು ಬುದ್ದಿ ಹೇಳಿ ಮುಚ್ಚಳಿಕೆ ಬರೆಸಲಾಗಿತ್ತು. ಠಾಣೆಗೆ ಹೋಗಿ ಬಂದು ಮರುದಿನ ಮತ್ತೆ ಗಲಾಟೆಯಾಗಿದೆ. ಗಲಾಟೆ ವೇಳೆ ಮುನಿರಾಜು ಮೇಲೆ ಪ್ರಮೋದ್ ಮತ್ತು ರವಿಕುಮಾರ್ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಈ ಕೊಲೆಗೆ ಪ್ರಮೋದ್ ಪತ್ನಿ ಪಲ್ಲವಿ ಸಹ ಸಾಥ್ ನೀಡಿದ್ದಾರೆ ಎನ್ನುವ ಆರೋಪಿಸಲಾಗಿದೆ. ಈ ಘಟನೆಯಲ್ಲಿ ಮುನಿರಾಜು 68 ಸಾವು ಹಾಗು ಮುರುಳಿ ಎಂಬಾತನ ಮೇಲೂ ತೀವ್ರ ಹಲ್ಲೆ ಮಾಡಲಾಗಿದೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.