More

    ಬಂಧಿಸುವ ಮುನ್ನ ಆರೋಪಿಗಳ ಸ್ನಾನ ಕಡ್ಡಾಯ: ಪೊಲೀಸರಿಗೆ ಕಮಿಷನರ್ ಕಟ್ಟಪ್ಪಣೆ

    ಬೆಂಗಳೂರು: ಕರೊನಾ ವೈರಸ್​ ಭೀತಿಯಿಂದ ಯಾರೂ ಹೊರತಾಗಿಲ್ಲ. ಎಲ್ಲಿ, ಯಾವಾಗ, ಹೇಗೆ ಬೇಕಾದರೂ ಈ ವೈರಸ್​ ದೇಹದೊಳಕ್ಕೆ ಪ್ರವೇಶಿಸಿಬಿಡುತ್ತದೆ.

    ಇದಾಗಲೇ ಹಲವಾರು ಪೊಲೀಸರು ಕೂಡ ಕರೊನಾ ಸೋಂಕಿಗೆ ಒಳಗಾಗಿದ್ದು, ಇದಾಗಲೇ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರನ್ನು ಬಂಧಿಸುವ ಸಮಯದಲ್ಲಿ ಆರೋಪಿಗಳಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚು.

    ಇದೇ ಕಾರಣಕ್ಕೆ, ಪೊಲೀಸ್​ ಕಮಿಷನರ್​ ಕಟ್ಟಪ್ಪಣೆ ಹೊರಡಿಸಿದ್ದಾರೆ. ಅದೇನೆಂದರೆ ಯಾವುದೇ ಆರೋಪಿಯನ್ನು ಬಂಧಿಸುವ ಮುನ್ನ ಇನ್ನುಮುಂದೆ ಅವರು ಸ್ನಾನ ಮಾಡುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲದೇ ಆರೋಪಿಗಳನ್ನು ಬಂಧಿಸುವ ಮುನ್ನ ಅವರು ಬಟ್ಟೆಗಳನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಪೊಲೀಸರು ಖಚಿತಪಡಿಸಿಕೊಳ್ಳಬೇಕು ಎಂದು ಪೊಲೀಸ್​ ಕಮಿಷನರ್​ ಭಾಸ್ಕರ್​ ರಾವ್​ ಆದೇಶಿಸಿದ್ದಾರೆ.
    ಬಂಧಿತ ಆರೋಪಿಗಳನ್ನು ಪೊಲೀಸ್ ಠಾಣೆ ಅಥವಾ ಕೋರ್ಟ್​ಗೆ ಹಾಜರು ಪಡಿಸುವ ಮುನ್ನ ಅವರು ಕಡ್ಡಾಯವಾಗಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

    ಇದನ್ನೂ ಓದಿ: ತಿಂಗಳಿಂದ ಶವಾಗಾರದಲ್ಲಿದ್ದ ಸೋಂಕಿತ: ಅಡ್ಮಿಟ್ಟೇ ಆಗಿಲ್ಲ ಎಂದ್ರು ಆಸ್ಪತ್ರೆ ಸಿಬ್ಬಂದಿ!

    ಎಲ್ಲಾ ಸಂದರ್ಭಗಳಲ್ಲಿ ಆರೋಪಿಗಳನ್ನು ಸ್ನಾನ ಮಾಡಿಸಿ ಠಾಣೆಗೆ ಕರೆತರುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಒಂದು ವೇಳೆ ಮನೆಯಲ್ಲಿ ಬಂಧಿಸಿದ್ದರೆ, ಅಲ್ಲಿಯೇ ಅವರಿಗೆ ಸ್ನಾನ ಮಾಡಿ ಬಟ್ಟೆ ಬದಲಾಯಿಸಲು ಹೇಳಬೇಕು. ಸಾಧ್ಯವಾದರೆ ಹತ್ತಿರದಲ್ಲಿಯೇ ಇರುವ ಪಬ್ಲಿಕ್​ ಬಾತ್​ರೂಂಗೆ ಕರೆದುಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಠಾಣೆಗೆ ಅವರನ್ನು ಒಯ್ಯುವ ಮುನ್ನ ಇವು ಆಗಲೇಬೇಕು ಎಂದು ಹೇಳಿದ್ದಾರೆ.
    ಇದರ ಜತೆಗೆ, ಆರೋಪಿಗಳ ಕರೊನಾ ಪರೀಕ್ಷೆ ಮಾಡಿಸಬೇಕು ಹಾಗೂ ಅವರನ್ನು ಸಂಪೂರ್ಣವಾಗಿ ಸ್ಯಾನಿಟೈಸರ್​ ಮಾಡಿದ ಬಳಿಕ ಠಾಣೆಗೆ ಕರೆದುಕೊಂಡು ಹೋಗಬೇಕು ಎಂದು ಅವರು ಸೂಚಿಸಿದ್ದಾರೆ.

    ಬೆಂಗಳೂರಿನಲ್ಲಿ ಸುಮಾರು 16 ಸಾವಿರ ಮಂದಿ ಪೊಲೀಸ್​ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 38 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕಿತರ ಸಂಖ್ಯೆ ಏರುತ್ತಲೇ ಇರುವ ಕಾರಣದಿಂದ ಇಂಥದ್ದೊಂದು ಕಟ್ಟುನಿಟ್ಟನ ಆದೇಶವನ್ನು ಹೊರಡಿಸಲಾಗಿದೆ.
    ಇಬ್ಬರು ಪೊಲೀಸರು ಸೋಂಕಿನಿಂದ ಮೃಪಟ್ಟಿದ್ದಾರೆ. ಇವರ ಸಂಪರ್ಕಕ್ಕೆ ಬಂದಿರುವ 350 ಮಂದಿ ಪೊಲೀಸ್​ ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಇಂಥದ್ದೊಂದು ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದೆ.

    ಸಚಿವೆಗೆ ‘ಕೋವಿಡ್​ ರಾಣಿ’ ಎಂದರೆ ತಪ್ಪೇನಿದೆ- ಕಾಂಗ್ರೆಸ್​ ಮುಖಂಡನ ಪ್ರಶ್ನೆ!

    d

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts