ಚೆನ್ನೈ: ಕಾಲಿವುಡ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ವಿವಾದಾತ್ಮಕ ನಟ ಎಂದು ಹೆಸರು ಮಾಡಿದವರೆಂದರೆ ಅದು ವಿಶಾಲ್. ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ವಿಶಾಲ್ಗೆ ಮದರಾಸ್ ಹೈಕೋರ್ಟ್ ಇನ್ನೊಂದು ಶಾಕ್ ನಿಡಿದೆ. ಟ್ರೈಡೆಂಟ್ ಆರ್ಟ್ಸ್ ಎಂಬ ನಿರ್ಮಾಣ ಸಂಸ್ಥೆಗೆ ಆಗಿರುವ ನಷ್ಟವನ್ನು ಭರಿಸಿಕೊಡುವಂತೆ ಆದೇಶ ನೀಡಿದೆ.
ಟ್ರೈಡೆಂಟ್ ಆರ್ಟ್ಸ್ ಸಂಸ್ಥೆ ನಿರ್ಮಿಸಿದ ‘ಆಕ್ಷನ್’ ಎಂಬ ಚಿತ್ರದಲ್ಲಿ ವಿಶಾಲ್ ನಟಿಸಿದ್ದರು. ಲಾಕ್ಡೌನ್ಗಿಂತ ಮುನ್ನ ಬಿಡುಗಡೆಯಾದ ಈ ಚಿತ್ರ 20 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿತ್ತು. ಈ ನಷ್ಟಕ್ಕೆ ಕಾರಣರಾದ ವಿಶಾಲ್, ನಷ್ಟ ಭರಿಸಿಕೊಡಬೇಕು ಎಂದು ನಿರ್ಮಾಣ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ತೀರ್ಪು ನೀಡಿರುವ ಕೋರ್ಟ್, ನಷ್ಟ ಭರಿಸಿಕೊಡಬೇಕೆಂದು ವಿಶಾಲ್ಗೆ ಆದೇಶಿಸಿದೆ.
ಇದನ್ನೂ ಓದಿ: Photos: ಮಾಲ್ಡೀವ್ಸ್ನಲ್ಲಿ ತಾಪ್ಸಿ ಏನ್ಮಾಡ್ತಿದ್ದಾರೆ? ನೀವೇ ನೋಡಿ …
ಇಷ್ಟಕ್ಕೂ ಆಗಿದ್ದೇನೆಂದರೆ, ‘ಆಕ್ಷನ್’ ಚಿತ್ರವನ್ನು ಕಡಿಮೆ ಬಜೆಟ್ನಲ್ಲಿ ನಿರ್ಮಿಸಬೇಕು ಎಂಬುದು ನಿರ್ಮಾಣ ಸಂಸ್ಥೆಯ ಉದ್ದೇಶವಾಗಿತ್ತು. ಆದರೆ, ಚಿತ್ರದ ಬಜೆಟ್ ಹೆಚ್ಚಿಸಿದರೆ, ಆಗ ಲಾಭವೂ ಹೆಚ್ಚಾಗುತ್ತದೆ ಎಂದು ಹೇಳಿ ಬಜೆಟ್ ಹೆಚ್ಚುವಂತೆ ಮಾಡಿದ್ದರು.
ಒಂದು ಪಕ್ಷ, ಚಿತ್ರ ಸೋತರೆ ನಷ್ಟ ಭರಿಸಿಕೊಡುವುದಾಗಿ ಹೇಳಿದ್ದರಂತೆ ವಿಶಾಲ್. ಯಾವಾಗ ಅವರೇ ಈ ಮಾತು ಹೇಳಿದರೋ, ಅದನ್ನು ನಂಬಿ ನಿರ್ಮಾಣ ಸಂಸ್ಥೆಯು ಚಿತ್ರಕ್ಕೆ 44 ಕೋಟಿಯಷ್ಟು ಹಣವನ್ನು ಚಿತ್ರತಂಡ ಖರ್ಚು ಮಾಡಿತ್ತು. ಆದರೆ, 20 ಕೋಟಿ ಕಲೆಕ್ಷನ್ ಸಹ ಆಗದಿದ್ದರಿಂದ, ನಿರ್ಮಾಣ ಸಂಸ್ಥೆಗೆ 20ಕ್ಕೂ ಹೆಚ್ಚು ಕೋಟಿ ರೂಪಾಯಿಗಳ ನಷ್ಟವಾಗಿತ್ತು.
ಇದನ್ನೂ ಓದಿ: VIDEOS| ಹರಿಪ್ರಿಯಾ ಹೊಸ ಹೊಸ ಅವತಾರಗಳು…
ಕೊನೆಗೆ ನಷ್ಟ ಭರಿಸಿಕೊಡುವ ನಿಟ್ಟಿನಲ್ಲಿ, ‘ಚಕ್ರ’ ಎಂಬ ಇನ್ನೊಂದು ಚಿತ್ರ ಮಾಡಿಕೊಡುವುದಾಗಿ ವಿಶಾಲ್ ಪ್ರಾಮಿಸ್ ಮಾಡಿದ್ದರಂತೆ. ಆದರೆ, ಆ ಚಿತ್ರವನ್ನು ಇದೀಗ ತಮ್ಮದೇ ನಿರ್ಮಾಣ ಸಂಸ್ಥೆಯಡಿ ಅವರು ನಿರ್ಮಿಸಿದ್ದಾರೆ. ಈ ನಿಟ್ಟಿನಲ್ಲಿ, ತಮಗಾಗಿರುವ ನಷ್ಟವನ್ನು ಭರಿಸಿ ಕೊಡುವುದರ ಜತೆಗೆ, ಓಟಿಟಿಯಲ್ಲಿ ಚಕ್ರ ಬಿಡುಗಡೆಯಾಗದಂತೆ ತಡೆಯಬೇಕು ಎಂದು ನಿರ್ಮಾಣ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು.
ಅದರಂತೆ, ಮದ್ರಾಸ್ ಹೈ ಕೋರ್ಟ್, ವಿಶಾಲ್ಗೆ ಚಿತ್ರದಿಂದ ಆಗಿರುವ ನಷ್ಟವನ್ನು ತುಂಬಿ ಕೊಡುವಂತೆ ಆದೇಶಿಸಿದೆ.
ನಾಲ್ಕನೇ ಮದುವೆಯಾದ್ರಾ ಖ್ಯಾತ ಗಾಯಕ ಅನೂಪ್ ಜಲೋಟ?