More

    ಮದ್ವೆಗೆ ಹೋಗಿದ್ದ ಇಬ್ಬರು ಬಸ್ಸಲ್ಲೇ ಸುಟ್ಟು ಸಾವು; ಲಾರಿ-ಬಸ್​ ಡಿಕ್ಕಿ, ಧಗಧಗಿಸಿ ಉರಿದ ಬಸ್​…

    ಬಾಗಲಕೋಟೆ: ಲಾರಿ ಮತ್ತು ಬಸ್​ ನಡುವೆ ನಡೆದ ಡಿಕ್ಕಿಯಲ್ಲಿ ಬಸ್​ಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಮಹಿಳೆಯರಿಬ್ಬರು ಬೆಂಕಿ ತಗುಲಿ ಸುಟ್ಟು ಹೋಗಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಯಾದವಾಡ ಗ್ರಾಮದ ಈರವ್ವ ಗಾಣಿಗೇರ (70), ಅಣ್ಣವ್ವ ಗಾಣಿಗೇರ (58) ಸಾವಿಗೀಡಾದ ದುರ್ದೈವಿಗಳು.

    ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಉತ್ತೂರು ಬಳಿ ಈ ಅಪಘಾತ ಸಂಭವಿಸಿದೆ. ಮುಧೋಳ-ಯಾದವಾಡ ರಸ್ತೆಯಲ್ಲಿನ ಉತ್ತೂರು ಫ್ಯಾಕ್ಟರಿ ಬಳಿ ಲಾರಿ ಹಾಗೂ ಮದುವೆಗೆ ಹೋಗಿದ್ದವರಿದ್ದ ಲಕ್ಸುರಿ ಬಸ್​ ಡಿಕ್ಕಿಯಾಗಿವೆ. ಬಸ್​ನಲ್ಲಿದ್ದವರು ಅಥಣಿ ತಾಲೂಕಿನ ಚಮಕೇರಿ ಗ್ರಾಮದ ಮದುವೆಗೆ ಹೋಗಿದ್ದರು. ಚಮಕೇರಿಯಿಂದ ಯಾದವಾಡ ಗ್ರಾಮಕ್ಕೆ ಅವರು ಮರಳುತ್ತಿದ್ದಾಗ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

    ಓವರ್​ಟೇಕ್ ವೇಳೆ ಲಾರಿ-ಬಸ್​ ಡಿಕ್ಕಿಯಾಗಿದ್ದು, ಅದರ ರಭಸಕ್ಕೆ ನಿಯಂತ್ರಣ ತಪ್ಪಿದ ಲಕ್ಸುರಿ ಬಸ್ ಪಕ್ಕದಲ್ಲಿನ ಹೊಲಕ್ಕೆ ಇಳಿದಿದೆ. ಅಲ್ಲದೆ ಪಲ್ಟಿಯಾಗಿ ಟ್ರಾನ್ಸ್​ಫಾರ್ಮರ್ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆಗ ವಿದ್ಯುತ್​ ತಂತಿ ತುಂಡಾಗಿ ಬಸ್​ ಮೇಲೆ ಬಿದ್ದು ಶಾರ್ಟ್ ಸರ್ಕ್ಯೂಟ್​ ಆಗಿ ಬಸ್​ಗೆ ಬೆಂಕಿ ತಗುಲಿ ಹೊತ್ತಿಕೊಂಡು ಉರಿದಿದೆ. ಬಸ್​ನಲ್ಲಿದ್ದ ಹಲವರು ತಕ್ಷಣ ಜಿಗಿದು, ಹೊರಗೋಡಿ ಬಂದರೂ ಇಬ್ಬರು ಮಹಿಳೆಯರು ತಪ್ಪಿಸಿಕೊಳ್ಳಲಾಗದೆ ಅಗ್ನಿಜ್ವಾಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್​ಪಿ ಲೋಕೇಶ್​ ಜಗಲಾಸರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಆ್ಯಸಿಡ್ ದಾಳಿಯಿಂದಾಗಿ ಕಣ್ಣು ಕಳೆದುಕೊಂಡಳು, ರೂಪ ಕಳೆದುಕೊಂಡಳು; ಆದ್ರೂ ಮದುವೆ ಆಗಲು ಹುಡುಗ ಸಿಕ್ಕಿದ…

    ಹೃದಯವೇ ಬಾಯಿಗೆ ಬಂದಂತಾಗಿತ್ತು; ನಟಿ ಪಾರುಲ್ ಯಾದವ್​ಗೆ ಅಷ್ಟು ಭಯವಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts