ಬಾಗಲಕೋಟೆ: ಲಾರಿ ಮತ್ತು ಬಸ್ ನಡುವೆ ನಡೆದ ಡಿಕ್ಕಿಯಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಮಹಿಳೆಯರಿಬ್ಬರು ಬೆಂಕಿ ತಗುಲಿ ಸುಟ್ಟು ಹೋಗಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಯಾದವಾಡ ಗ್ರಾಮದ ಈರವ್ವ ಗಾಣಿಗೇರ (70), ಅಣ್ಣವ್ವ ಗಾಣಿಗೇರ (58) ಸಾವಿಗೀಡಾದ ದುರ್ದೈವಿಗಳು.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಉತ್ತೂರು ಬಳಿ ಈ ಅಪಘಾತ ಸಂಭವಿಸಿದೆ. ಮುಧೋಳ-ಯಾದವಾಡ ರಸ್ತೆಯಲ್ಲಿನ ಉತ್ತೂರು ಫ್ಯಾಕ್ಟರಿ ಬಳಿ ಲಾರಿ ಹಾಗೂ ಮದುವೆಗೆ ಹೋಗಿದ್ದವರಿದ್ದ ಲಕ್ಸುರಿ ಬಸ್ ಡಿಕ್ಕಿಯಾಗಿವೆ. ಬಸ್ನಲ್ಲಿದ್ದವರು ಅಥಣಿ ತಾಲೂಕಿನ ಚಮಕೇರಿ ಗ್ರಾಮದ ಮದುವೆಗೆ ಹೋಗಿದ್ದರು. ಚಮಕೇರಿಯಿಂದ ಯಾದವಾಡ ಗ್ರಾಮಕ್ಕೆ ಅವರು ಮರಳುತ್ತಿದ್ದಾಗ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಲಾರಿ-ಬಸ್ ಡಿಕ್ಕಿ; ಹೊತ್ತಿ ಉರಿದ ಬಸ್, ಬೆಂಕಿ ತಗುಲಿ ಇಬ್ಬರು ಸಾವು..
ವಿವರಗಳಿಗೆ https://t.co/YaFZZbZDD9 ನೋಡಿ.. pic.twitter.com/4PHMLZpnBp— Vijayavani (@VVani4U) March 3, 2021
ಓವರ್ಟೇಕ್ ವೇಳೆ ಲಾರಿ-ಬಸ್ ಡಿಕ್ಕಿಯಾಗಿದ್ದು, ಅದರ ರಭಸಕ್ಕೆ ನಿಯಂತ್ರಣ ತಪ್ಪಿದ ಲಕ್ಸುರಿ ಬಸ್ ಪಕ್ಕದಲ್ಲಿನ ಹೊಲಕ್ಕೆ ಇಳಿದಿದೆ. ಅಲ್ಲದೆ ಪಲ್ಟಿಯಾಗಿ ಟ್ರಾನ್ಸ್ಫಾರ್ಮರ್ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆಗ ವಿದ್ಯುತ್ ತಂತಿ ತುಂಡಾಗಿ ಬಸ್ ಮೇಲೆ ಬಿದ್ದು ಶಾರ್ಟ್ ಸರ್ಕ್ಯೂಟ್ ಆಗಿ ಬಸ್ಗೆ ಬೆಂಕಿ ತಗುಲಿ ಹೊತ್ತಿಕೊಂಡು ಉರಿದಿದೆ. ಬಸ್ನಲ್ಲಿದ್ದ ಹಲವರು ತಕ್ಷಣ ಜಿಗಿದು, ಹೊರಗೋಡಿ ಬಂದರೂ ಇಬ್ಬರು ಮಹಿಳೆಯರು ತಪ್ಪಿಸಿಕೊಳ್ಳಲಾಗದೆ ಅಗ್ನಿಜ್ವಾಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಆ್ಯಸಿಡ್ ದಾಳಿಯಿಂದಾಗಿ ಕಣ್ಣು ಕಳೆದುಕೊಂಡಳು, ರೂಪ ಕಳೆದುಕೊಂಡಳು; ಆದ್ರೂ ಮದುವೆ ಆಗಲು ಹುಡುಗ ಸಿಕ್ಕಿದ…
ಹೃದಯವೇ ಬಾಯಿಗೆ ಬಂದಂತಾಗಿತ್ತು; ನಟಿ ಪಾರುಲ್ ಯಾದವ್ಗೆ ಅಷ್ಟು ಭಯವಾಗಿದ್ದೇಕೆ?