ಕೋಲ್ಕತ್ತ: ಕೇಂದ್ರ ಸರ್ಕಾರ ಎರಡು ದಿನಗಳ ಹಿಂದೆ ಅಂದರೆ ಸೋಮವಾರ ಸಂಜೆ ಚೀನಾದ ಟಿಕ್ಟಾಕ್ ಸೇರಿ 59 ಆ್ಯಪ್ಗಳನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಬಹುತೇಕ ಪಕ್ಷಗಳೂ ಸ್ವಾಗತಿಸಿವೆ.
ಈ ಮಧ್ಯೆ ತೃಣಮೂಲ ಕಾಂಗ್ರೆಸ್ನ ಸಂಸದೆ, ನುಸ್ರತ್ ಜಹಾನ್ ಅವರು ಚೀನಾ ಆ್ಯಪ್ಗಳ ನಿಷೇಧ ಅದರಲ್ಲೂ ಟಿಕ್ಟಾಕ್ ಬ್ಯಾನ್ ಮಾಡಿದ್ದನ್ನು, ಕೇಂದ್ರ ಸರ್ಕಾರ 2016ರಲ್ಲಿ ಘೋಷಿಸಿದ್ದ ನೋಟು ಅಮಾನ್ಯೀಕರಣಕ್ಕೆ ಹೋಲಿಸಿದ್ದಾರೆ.
ಚೀನಾ ಆ್ಯಪ್ ಟಿಕ್ಟಾಕ್ ಬ್ಯಾನ್ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂದೆ ಮುಂದೆ ಯೋಚಿಸದೆ, ಹಠಾತ್ ಆಗಿ ತೆಗೆದುಕೊಂಡಿದೆ. ಇದರಿಂದಾಗಿ ನಿರುದ್ಯೋಗಕ್ಕೀಡಾಗುವವರ ಮುಂದಿನ ಗತಿಯೇನು? 2016ರಲ್ಲಿ ರಾತ್ರೋರಾತ್ರಿ ನೋಟು ಅಮಾನ್ಯೀಕರಣವಾದಾಗ ಒಂದಷ್ಟು ಜನರು ಹೇಗೆ ಸಂಕಷ್ಟಕ್ಕೀಡಾಗಿದ್ದರೋ, ಅದೇ ರೀತಿ ಈಗಲೂ ಸಹ ಅನೇಕರು ಕಷ್ಟಪಡಲಿದ್ದಾರೆ ಎಂದು ನುಸ್ರತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ಮಾಸ್ಮಾದಿಂದಾಗಿ ಬದುಕಿದೆ: ನಾನು ಪ್ಲಾಸ್ಮಾ ದಾನಮಾಡಿರುವೆ, ನೀವೂ ಮಾಡಿ ಎಂದ ಸಚಿವ
ರಾಷ್ಟ್ರದ ಭದ್ರತೆ, ಹಿತಾಸಕ್ತಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಇದರಿಂದ ನನಗೇನೂ ಸಮಸ್ಯೆ ಇಲ್ಲ. ಆದರೆ ಅದೆಷ್ಟೋ ಜನ ಉದ್ಯೋಗ ಕಳೆದುಕೊಳ್ಳುತ್ತಾರಲ್ಲ, ಅವರ ಬಗ್ಗೆಯೂ ಯೋಚನೆ ಮಾಡಬೇಕು ಎಂದಿದ್ದಾರೆ.
ಹಾಗೇ ಚೀನಾ ಆ್ಯಪ್ಗಳ ಬ್ಯಾನ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚೀನಾದ ಆ್ಯಪ್ಗಳನ್ನು ಬ್ಯಾನ್ ಮಾಡಿದರೆ ಸಾಲದು. ಇನ್ನೂ ಖಡಕ್ ಪ್ರತಿಕ್ರಿಯೆಯನ್ನು ಆ ದೇಶಕ್ಕೆ ನೀಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)
‘ಲಕ್ಷ್ಮೀ ಬಾಂಬ್’ ಮತ್ತು ‘ಭುಜ್’, ಓಟಿಟಿಗೆ ಸೇಲ್ ಆಗಿದ್ದು ಎಷ್ಟಕ್ಕೆ ಗೊತ್ತಾ?