More

    ಅಧಿಕಾರಕ್ಕೆ ಬಂದರೆ ಒಬಿಸಿಯವರಿಗೇ ಸಿಎಂ ಪಟ್ಟ: ಪ್ರಧಾನಿ ಮೋದಿ ಭರವಸೆ

    ತೆಲಂಗಾಣ: ದೇಶದಲ್ಲಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಸಲ ಜಾತಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸಿವೆ. ಹೀಗಾಗಿಯೇ ಜಾತಿಕೇಂದ್ರಿತ ಲೆಕ್ಕಚಾರಗಳು ದೊಡ್ಡಮಟ್ಟದಲ್ಲಿ ನಡೆಯತ್ತಿದ್ದು, ಇದೀಗ ಪ್ರಧಾನಿ ಮೋದಿ ಕೂಡ ಜಾತಿ ದಾಳ ಉರುಳಿಸಿದ್ದಾರೆ.

    ದೇಶದಲ್ಲಿ ಜಾತಿಗಣತಿ ದೊಡ್ಡ ಸದ್ದು ಮಾಡುತ್ತಿದ್ದು, ಎಲ್ಲ ವಿಷಯದಲ್ಲಿ ಜಾತಿಯ ವಿಚಾರಗಳು ಅನುರಣಿಸುತ್ತಿವೆ. ಅದರಲ್ಲೂ ಈ ಸಲ ‘ಇತರ ಹಿಂದುಳಿದ ವರ್ಗ'(ಒಬಿಸಿ)ದವರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್​-ಬಿಜೆಪಿ ಎರಡೂ ಗಮನ ಹರಿಸಿವೆ. ಇದೇ ಲೆಕ್ಕಾಚಾರದಲ್ಲಿ ಇಂದು ಪ್ರಧಾನಿ ಮೋದಿ ಕೂಡ ಮಾತನಾಡಿದ್ದಾರೆ.

    ಹೈದರಾಬಾದ್​ನ ಎಲ್​.ಬಿ.ಸ್ಟೇಡಿಯಮ್​ಲ್ಲಿ ಇಂದು ನಡೆದ ‘ಒಬಿಸಿ ಆತ್ಮಗೌರವ ಸಭೆ’ ಎಂಬ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2013ರಲ್ಲಿ ದೇಶದ ಮೊದಲ ಒಬಿಸಿ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಇಲ್ಲೇ ಬುನಾದಿ ಹಾಕಲಾಗಿತ್ತು ಎಂದು ಸ್ಮರಿಸಿಕೊಂಡರು.

    ಇದನ್ನೂ ಓದಿ: 12 ವರ್ಷಗಳಿಂದ ಇನ್ಶೂರೆನ್ಸ್ ಇಲ್ಲದ ವಾಹನದಲ್ಲಿ ಪೊಲೀಸರ ಡ್ಯೂಟಿ; ಸ್ಥಳೀಯ ವ್ಯಕ್ತಿ ಅಧಿಕಾರಿಯನ್ನೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ!

    ಈ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ಹಾಕಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡಲಾಗುವುದು. ಒಬಿಸಿ ವರ್ಗದವರನ್ನು ರಾಜಕೀಯವಾಗಿ ಸಬಲಗೊಳಿಸುವುದೇನಿದ್ದರೂ ಬಿಜೆಪಿ ಮಾತ್ರ ಎಂದೂ ಪ್ರಧಾನಿ ಮೋದಿ ಹೇಳಿದರು.

    ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ಪಂಚರಾಜ್ಯಗಳ ಚುನಾವಣೆ ಪೈಕಿ ಇಂದು ಮಿಜೋರಾಂ ಮತ್ತು ಛತ್ತೀಸ್​ಗಢದಲ್ಲಿ ಮತದಾನ ನಡೆಯುತ್ತಿದೆ. ಇಂದು ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೆ, ಛತ್ತೀಸ್​ಗಢದ 20 ಸೀಟುಗಳಿಗೆ ಮೊದಲ ಹಂತದ ಮತದಾನ ಜರುಗಲಿದೆ. ಛತ್ತೀಸ್​ಗಢದ ಉಳಿದ 70 ಸ್ಥಾನಗಳಿಗೆ ನ.17ರಂದು ಚುನಾವಣೆ ನಡೆಯಲಿದೆ.

    ಅದೇ ದಿನ ಮಧ್ಯಪ್ರದೇಶದ ಎಲ್ಲ 230 ಸ್ಥಾನಗಳಿಗೆ ಮತದಾನ ಆಗಲಿದೆ. 200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ನ. 23 ಮತ್ತು 119 ಕ್ಷೇತ್ರಗಳುಳ್ಳ ತೆಲಂಗಾಣದಲ್ಲಿ ನ. 30ಕ್ಕೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಇಂದು ಹೈದರಾಬಾದ್​ನಲ್ಲಿ ಜಾತಿ ದಾಳ ಉರುಳಿಸಿದ್ದಾರೆ.

    ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?

    10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​: ನೀವು ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts