ತೆಲಂಗಾಣ: ದೇಶದಲ್ಲಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಸಲ ಜಾತಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸಿವೆ. ಹೀಗಾಗಿಯೇ ಜಾತಿಕೇಂದ್ರಿತ ಲೆಕ್ಕಚಾರಗಳು ದೊಡ್ಡಮಟ್ಟದಲ್ಲಿ ನಡೆಯತ್ತಿದ್ದು, ಇದೀಗ ಪ್ರಧಾನಿ ಮೋದಿ ಕೂಡ ಜಾತಿ ದಾಳ ಉರುಳಿಸಿದ್ದಾರೆ.
ದೇಶದಲ್ಲಿ ಜಾತಿಗಣತಿ ದೊಡ್ಡ ಸದ್ದು ಮಾಡುತ್ತಿದ್ದು, ಎಲ್ಲ ವಿಷಯದಲ್ಲಿ ಜಾತಿಯ ವಿಚಾರಗಳು ಅನುರಣಿಸುತ್ತಿವೆ. ಅದರಲ್ಲೂ ಈ ಸಲ ‘ಇತರ ಹಿಂದುಳಿದ ವರ್ಗ'(ಒಬಿಸಿ)ದವರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ಗಮನ ಹರಿಸಿವೆ. ಇದೇ ಲೆಕ್ಕಾಚಾರದಲ್ಲಿ ಇಂದು ಪ್ರಧಾನಿ ಮೋದಿ ಕೂಡ ಮಾತನಾಡಿದ್ದಾರೆ.
ಹೈದರಾಬಾದ್ನ ಎಲ್.ಬಿ.ಸ್ಟೇಡಿಯಮ್ಲ್ಲಿ ಇಂದು ನಡೆದ ‘ಒಬಿಸಿ ಆತ್ಮಗೌರವ ಸಭೆ’ ಎಂಬ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2013ರಲ್ಲಿ ದೇಶದ ಮೊದಲ ಒಬಿಸಿ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಇಲ್ಲೇ ಬುನಾದಿ ಹಾಕಲಾಗಿತ್ತು ಎಂದು ಸ್ಮರಿಸಿಕೊಂಡರು.
ಈ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ಹಾಕಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡಲಾಗುವುದು. ಒಬಿಸಿ ವರ್ಗದವರನ್ನು ರಾಜಕೀಯವಾಗಿ ಸಬಲಗೊಳಿಸುವುದೇನಿದ್ದರೂ ಬಿಜೆಪಿ ಮಾತ್ರ ಎಂದೂ ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…
ಪಂಚರಾಜ್ಯಗಳ ಚುನಾವಣೆ ಪೈಕಿ ಇಂದು ಮಿಜೋರಾಂ ಮತ್ತು ಛತ್ತೀಸ್ಗಢದಲ್ಲಿ ಮತದಾನ ನಡೆಯುತ್ತಿದೆ. ಇಂದು ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೆ, ಛತ್ತೀಸ್ಗಢದ 20 ಸೀಟುಗಳಿಗೆ ಮೊದಲ ಹಂತದ ಮತದಾನ ಜರುಗಲಿದೆ. ಛತ್ತೀಸ್ಗಢದ ಉಳಿದ 70 ಸ್ಥಾನಗಳಿಗೆ ನ.17ರಂದು ಚುನಾವಣೆ ನಡೆಯಲಿದೆ.
ಅದೇ ದಿನ ಮಧ್ಯಪ್ರದೇಶದ ಎಲ್ಲ 230 ಸ್ಥಾನಗಳಿಗೆ ಮತದಾನ ಆಗಲಿದೆ. 200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ನ. 23 ಮತ್ತು 119 ಕ್ಷೇತ್ರಗಳುಳ್ಳ ತೆಲಂಗಾಣದಲ್ಲಿ ನ. 30ಕ್ಕೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಇಂದು ಹೈದರಾಬಾದ್ನಲ್ಲಿ ಜಾತಿ ದಾಳ ಉರುಳಿಸಿದ್ದಾರೆ.
ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?
10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್ಸ್ಕ್ರಿಪ್ಷನ್: ನೀವು ಮಾಡಬೇಕಾದ್ದೇನು?