More

    ಪ್ರಿಯಕರ ಜತೆ ಸೇರಿ ಪತಿ ಕೊಂದ ಬಳಿಕ ಇಬ್ಬರು ಆತ್ಮಹತ್ಯೆಗೆ ಶರಣಾಗಲು ಕಾರಣವೇನಿರಬಹುದು?

    ಲಾತೂರ್​: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿ ಪೊಲೀಸರ ವಿಚಾರಣೆಗೆ ಹೆದರಿ ಮಹಿಳೆ ಹಾಗೂ ಆಕೆಯ ಪ್ರಿಯಕರ ಆತ್ಮಹತ್ಯೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಲಾತೂರ್​ನಲ್ಲಿ ನಡೆದಿದೆ.

    ಲಾತೂರ್​ ಜಿಲ್ಲೆಯ ರೇನಾಪುರ ತಾಲೂಕಿನ ಖರೋಲಾ ಏರಿಯಾದಲ್ಲಿ ಘಟನೆ ನಡೆದಿದೆ. ಮೊದಲು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ಮುಂದೆ ನಡೆಯಬಹುದಾದ ಪೊಲೀಸ್​ ವಿಚಾರಣೆಗೆ ಹೆದರಿ ಮಹಿಳೆ ಸಾವಿಗೆ ಶರಣಾಗಿದ್ದಾಳೆ. ಈ ವಿಚಾರ ತಿಳಿದ ಬೆನ್ನಲ್ಲೇ ಪ್ರಿಯಕರನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತಿಯ ಮೃತದೇಹ ಪತ್ತೆಯಾದ ಬಳಿಕ ಇಡೀ ಪ್ರಕರಣದ ಎಳೆ ಬಿಚ್ಚಿಕೊಂಡಿದೆ. ಇದನ್ನೂ ಓದಿ: ನದಿಗೆ ಹಾರಿದ ಯುವಕನ ಶವ ಹುಡುಕುತ್ತಿದ್ದ ಪೊಲೀಸರಿಗೆ ಕಾದಿತ್ತು ಅಚ್ಚರಿ!

    ಮೃತ ಪತಿಯನ್ನು ಲಖನ್​ ರೌತ್ರಾವ್​ ಎಂದು ಗುರುತಿಸಲಾಗಿದ್ದು, ಮೃತದೇಹ ಖರೋಲಾ ಏರಿಯಾದ ನೀರಿಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಸೀರೆಯಲ್ಲಿ ಕೈಕಾಲುಗಳನ್ನು ಕಟ್ಟಿ ಗೋಣಿ ಚೀಲದೊಳಗೆ ಇಟ್ಟು ಸಮಾಧಿ ಮಾಡಲಾಗಿತ್ತು. ಇತ್ತ ಪತಿಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಆರೋಪಿ ಪತ್ನಿ ಮನಿಶಾ ರೌತ್ರಾವ್ ಮತ್ತು ಆಕೆಯ ಪ್ರಿಯಕರ ವಿಜಯ್​ ಛಪ್ಪರೆ ಸಹ ಆತ್ಮಹತ್ಯಗೆ ಶರಣಾಗಿದ್ದಾರೆ.

    ವಿಜಯ್​ ಮತ್ತು ಮನಿಶಾ ನಡುವೆ ಸಂಬಂಧ ಇತ್ತು. ಆದರೆ, ಮನಿಶಾ ಪತಿ ಲಖನ್​ ಇದಕ್ಕೆ ಅಡ್ಡಗೋಡೆಯಾಗಿದ್ದ. ಇಬ್ಬರು ಸೇರಿ ಸಂಚು ರೂಪಿಸಿ ಕೊಂದಿದ್ದಾರೆ. ಇತ್ತ ಪತಿ ಕೊಲೆ ಹಾಗೂ ಪೊಲೀಸ್​ ವಿಚಾರಣೆಗೆ ಹೆದರಿ ಮನಿಶಾ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇದಾದ ಬೆನ್ನಲ್ಲೇ ವಿಚಾರಣೆಗೆ ಬರುವಂತೆ ವಿಜಯ್​ಗೆ ಪೊಲೀಸರು ತಿಳಿಸಿದ್ದಾರೆ. ಎಲ್ಲೇ ಹೋದರು ಹಿಮ್ಮೆಟ್ಟಿ ಬಂದೇ ಬರುತ್ತಾರೆ ಎಂಬ ಭಯದಲ್ಲಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂವರ ಸಾವಿನ ಬಳಿಕ ಕತೆಯ ಅಸಲಿ ರೂಪ ಹೊರಬಿದ್ದಿದೆ. (ಏಜೆನ್ಸೀಸ್​) ಇದನ್ನೂ ಓದಿ: ಕೆಲಸ, ಆದಾಯವಿಲ್ಲದೇ ದೇಶದ ಅರ್ಧದಷ್ಟು ಜನ ತಿಂಗಳಿಗೂ ಹೆಚ್ಚು ಕಾಲ ಬದುಕಲಾರರು: ಸ್ಪೋಟಕ ವರದಿ ಬಹಿರಂಗ

    ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ಮಗಳ ಮೊಬೈಲ್ ಪಡೆಯಲು ಹೋದ ಮಹಿಳೆಗೆ ಹೆಡ್​ ಮಾಸ್ಟರ್​ನಿಂದ ಶಾಕ್!​ ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts