ತಿರುವನಂತಪುರಂ: ಮಹಿಳೆಯೊಬ್ಬರು ಸತತ 8 ತಿಂಗಳು ಹೋರಾಡಿದರೂ ತಮ್ಮ ಮೊಬೈಲ್ ಫೋನ್ ಹಿಂಪಡೆಯುವಲ್ಲಿ ಯಶಸ್ವಿಯಾಗದೆ, ಶಾಲಾ ಹೆಡ್ ಮಾಸ್ಟರ್ನಿಂದ ಅವಮಾನಕ್ಕೆ ಒಳಗಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕಣ್ಣೂರು ಜಿಲ್ಲೆಯ ನಿವಾಸಿ ಸಮೀರಾ ಕಮಲ್ 2019 ಅಕ್ಟೋಬರ್ ತಿಂಗಳಲ್ಲಿ ತನ್ನ ಮೊಬೈಲ್ ಅನ್ನು 15 ವರ್ಷದ ಮಗಳು ಶಹ್ಜಾ ಬ್ಯಾಗ್ನಲ್ಲಿ ಇಟ್ಟಿದ್ದರು. ಅಂದು ಶಾಲಾ ಯೂತ್ ಫೆಸ್ಟಿವಲ್ ಆದ್ದರಿಂದ ಮಗಳು ಹೇಗಿದ್ದರೂ ತಡವಾಗಿ ಬರುತ್ತಾಳೆ ಎಂದು ವಿಳಂಬವಾದರೆ ಮಾಹಿತಿ ನೀಡುವಂತೆ ಮಗಳಿಗೆ ತಾಯಿ ಸಮೀರಾ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ ಮೊಬೈಲ್ ನೋಡಿದ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಅದನ್ನು ವಶಕ್ಕೆ ಪಡೆದು ಹೆಡ್ ಮಾಸ್ಟರ್ ಕೈಗೆ ನೀಡಿದ್ದರು. ಇದನ್ನೂ ಓದಿ: VIDEO| ವಿಮಾನ ಲ್ಯಾಂಡ್ ಆಗುವ ಪ್ರಯತ್ನದಲ್ಲಿದ್ದಾಗ ಒಟ್ಟಿಗೆ ಬಡಿಯಿತು 3 ಸಿಡಿಲು: ಮುಂದಾಗಿದ್ದು ಅಚ್ಚರಿ…!
ಮರುದಿನ ಸಮೀರಾ ಮೊಬೈಲ್ ಪಡೆಯಲು ಶಾಲೆಗೆ ಹೋದರು. ಆದರೆ ಹೆಡ್ ಮಾಸ್ಟರ್ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಬಳಿಕ ನೀಡುವುದಾಗಿ ಭರವಸೆ ನೀಡಿ ಕಳುಹಿಸಿದ್ದರು. ಅಲ್ಲದೇ ಇದು ನಮ್ಮ ಶಾಲೆಯ ನಿಯಮ ಹೌದು ಎಂದಿದ್ದರು. ಅದನ್ನು ಒಪ್ಪಿಕೊಂಡು ಹಿಂತಿರುಗಿದ ಸಮೀರಾ 8 ತಿಂಗಳು ಸುಮ್ಮನಿದ್ದದ್ದರು. ಪರೀಕ್ಷೆ ಮುಗಿಯುತ್ತಿದ್ದಂತೆ ಮೊಬೈಲ್ ಪಡೆಯಲು ಮರಳಿ ಶಾಲೆಗೆ ಹೋದರು. ಆದರೆ, ಮೊಬೈಲ್ ನೀಡದೆ ಅವರನ್ನು ಅವಮಾನಿಸಿ, ಏನಾದರೂ ಮಾಡಿಕೋ ಎಂದು ಸವಾಲು ಹಾಕಿ ವಾಪಸ್ ಕಳುಹಿಸಿದ್ದಾರೆ.
ಹತ್ತು ಸಾವಿರ ರೂ. ಮೊಬೈಲ್ ತಾನೇ ಹೋಗಲಿ ಬಿಡು ಎನ್ನುವುದಕ್ಕೆ ಸಮೀರಾ ಅವರು ಮತ್ತೆ ಖರೀದಿಸುವಷ್ಟು ಶಕ್ತರಾಗಿಲ್ಲ. ಟೈಲರ್ ಆಗಿ ಕೆಲಸ ಮಾಡುವ ಸಮೀರಾ ಬರುವ ಅಲ್ಪಸ್ವಲ್ಪ ಹಣವನ್ನು ಉಳಿಸಿ ಮೂವರು ಮಕ್ಕಳನ್ನು ಬೆಳಿಸಿ, ಕೂಡಿಟ್ಟಿದ್ದ ಹಣದಲ್ಲಿ ಮೊಬೈಲ್ ಕೊಂಡುಕೊಂಡಿದ್ದರು. ಇದೀಗ ಆನ್ಲೈನ್ ಕ್ಲಾಸ್ ನಡೆಯುತ್ತಿರುವುದರಿಂದ ಆಕೆಯ ಮಗನಿಗೆ ಮೊಬೈಲ್ ಅವಶ್ಯಕತೆ ಇದೆ. ಹೀಗಾಗಿ ಯಾವುದೇ ಆಯ್ಕೆಗಳಿಲ್ಲದೇ ಪೊಲೀಸರನ್ನು ಸಂಪರ್ಕಿಸಿದಾಗ ಅವರಿಂದಲೂ ಒಳ್ಳೆಯ ಸ್ಪಂದನೆ ದೊರೆಯಲಿಲ್ಲ. ಬಳಿಕ ಮಾಧ್ಯಮವೊಂದನ್ನು ಸಂಪರ್ಕಿಸಿದಾಗ ವರದಿಯಿಂದ ಎಚ್ಚೆತ್ತು ಮೊಬೈಲ್ ಮರಳಿಸುವುದಾಗಿ ಹೆಡ್ ಮಾಸ್ಟರ್ ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೇ ತಿಂಗಳಲ್ಲಿ ಜಾಗತಿಕವಾಗಿ ಹೆಚ್ಚು ಡೌನ್ಲೋಡ್ ಆದ ಆ್ಯಪ್ ಯಾವುದು? ಭಾರತವೇ ಮೊದಲು…!
ಸಮಸ್ಯೆ ಇಲ್ಲಿಗೆ ಮುಗಿಯದೇ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧವೇ ಸಾಕಷ್ಟು ಕೆಟ್ಟ ಕಮೆಂಟ್ಗಳು ಬರಲು ಆರಂಭವಾಯಿತಂತೆ. ಇದರಿಂದ ಗಾಬರಿಗೊಂಡ ಸಮೀರಾ ಇದರ ಹಿಂದೆ ಶಾಲಾ ಆಡಳಿತ ಮಂಡಳಿಯ ಕೈವಾಡ ಇರಬಹುದೆಂದು ಶಂಕಿಸಿ ಕಣ್ಣಪುರಂ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಆದರೆ, ಈವರೆಗೂ ಮೊಬೈಲ್ ಫೋನ್ ಮಾತ್ರ ಪಡೆದಿಲ್ಲ. ಕಳೆದ 8 ತಿಂಗಳ ಮೊಬೈಲ್ ಡಾಟಾವನ್ನು ಶಾಲೆ ದುರ್ಬಳಕೆ ಮಾಡಿಕೊಂಡಿರಬಹುದೆಂಬ ಶಂಕೆಯು ವ್ಯಕ್ತವಾಗಿದ್ದು, ನಿರಂತರವಾಗಿ ಶಾಲೆಗೆ ಅಲೆದರು ಮೊಬೈಲ್ ಮಾತ್ರ ಇನ್ನು ಮರಳಿಲ್ಲ ಎಂದು ನೋವು ತೊಡಿಕೊಂಡಿದ್ದಾರೆ. (ಏಜೆನ್ಸೀಸ್)
ಕೆಲಸ, ಆದಾಯವಿಲ್ಲದೇ ದೇಶದ ಅರ್ಧದಷ್ಟು ಜನ ತಿಂಗಳಿಗೂ ಹೆಚ್ಚು ಕಾಲ ಬದುಕಲಾರರು: ಸ್ಪೋಟಕ ವರದಿ ಬಹಿರಂಗ