More

    ‘ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಬೋಧನೆ ಮಾಡಿದ್ದ…’ ಎಂದ ಮಾಜಿ ಕೇಂದ್ರ ಸಚಿವ!

    ನವದೆಹಲಿ: ‘ಜಿಹಾದ್ ತತ್ವ ಇಸ್ಲಾಂನಲ್ಲಿ ಮಾತ್ರವಲ್ಲ. ಭಗವದ್ಗೀತೆ ಮತ್ತು ಕ್ರೈಸ್ತರಲ್ಲಿಯೂ ಇದೆ’ ಎಂದು ಹೇಳಿ ಕಾಂಗ್ರೆಸ್​​ನ ಹಿರಿಯ ನಾಯಕ, ಮಾಜಿ ಸಚಿವ ಶಿವರಾಜ್​ ಪಾಟಿಲ್ ಹೇಳಿಕೆ ನೀಡಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

    ಕಾಂಗ್ರೆಸ್​ನ ಹಿರಿಯ ನಾಯಕ ಮೊಹ್ಸಿನಾ ಕಿದ್ವಾಯಿ ಅವರ ಜೀವನ ಚರಿತ್ರೆಯ ಬಿಡುಗಡೆ ಸಂದರ್ಭದಲ್ಲಿ ವಿವಾದವನ್ನು ಶುರು ಮಾಡಿದ್ದಾರೆ. ‘ಜಿಹಾದ್​ನ ಬಗ್ಗೆ ಇಸ್ಲಾಂನಲ್ಲಿ ಬಹಳ ಚರ್ಚೆ ಆಗಿದೆ. ಅದು ಕುರಾನ್​ ಮಾತ್ರವಲ್ಲ, ಭಗವದ್ಗೀತೆಯ ಒಂದು ಭಾಗದಲ್ಲೂ ಬರುತ್ತದೆ. ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್​ನ ಬಗ್ಗೆ ಹೇಳುತ್ತಾನೆ. ಇದು ಇಸ್ಲಾಂ ಮತ್ತು ಭಗವದ್ಗೀತೆಯಲ್ಲಿ ಮಾತ್ರವಲ್ಲ, ಕ್ರೈಸ್ತ ಧರ್ಮದಲ್ಲೂ ಬರುತ್ತದೆ’ ಎಂದು ಹೇಳಿದರು.

    ಈ ಬಗ್ಗೆ ಪ್ರತಿಕ್ರಿಯೆ ಆಗಿ ಬಿಜೆಪಿಯ ವಕ್ತಾರ ಶೆಹಝಾದ್​ ಪೂನಾವಾಲಾ ‘ಆಪ್​ನ ಗೋಪಾಲ್ ಇಟಾಲಿಯಾ ಮತ್ತು ರಾಜೇಂದ್ರ ಪಾಲ್ ಗಿಂತ ಇವರು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಹಿಂದುಳಿಯಬಾರದು ಎಂದು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಹಿಂದು ಭಯೋತ್ಪಾದಕರು ಎಂಬ ಶಬ್ದವನ್ನು ಸೃಷ್ಟಿಸಿದರು, ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು.’ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts