ನವದೆಹಲಿ: ‘ಜಿಹಾದ್ ತತ್ವ ಇಸ್ಲಾಂನಲ್ಲಿ ಮಾತ್ರವಲ್ಲ. ಭಗವದ್ಗೀತೆ ಮತ್ತು ಕ್ರೈಸ್ತರಲ್ಲಿಯೂ ಇದೆ’ ಎಂದು ಹೇಳಿ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಶಿವರಾಜ್ ಪಾಟಿಲ್ ಹೇಳಿಕೆ ನೀಡಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ನ ಹಿರಿಯ ನಾಯಕ ಮೊಹ್ಸಿನಾ ಕಿದ್ವಾಯಿ ಅವರ ಜೀವನ ಚರಿತ್ರೆಯ ಬಿಡುಗಡೆ ಸಂದರ್ಭದಲ್ಲಿ ವಿವಾದವನ್ನು ಶುರು ಮಾಡಿದ್ದಾರೆ. ‘ಜಿಹಾದ್ನ ಬಗ್ಗೆ ಇಸ್ಲಾಂನಲ್ಲಿ ಬಹಳ ಚರ್ಚೆ ಆಗಿದೆ. ಅದು ಕುರಾನ್ ಮಾತ್ರವಲ್ಲ, ಭಗವದ್ಗೀತೆಯ ಒಂದು ಭಾಗದಲ್ಲೂ ಬರುತ್ತದೆ. ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ನ ಬಗ್ಗೆ ಹೇಳುತ್ತಾನೆ. ಇದು ಇಸ್ಲಾಂ ಮತ್ತು ಭಗವದ್ಗೀತೆಯಲ್ಲಿ ಮಾತ್ರವಲ್ಲ, ಕ್ರೈಸ್ತ ಧರ್ಮದಲ್ಲೂ ಬರುತ್ತದೆ’ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ಆಗಿ ಬಿಜೆಪಿಯ ವಕ್ತಾರ ಶೆಹಝಾದ್ ಪೂನಾವಾಲಾ ‘ಆಪ್ನ ಗೋಪಾಲ್ ಇಟಾಲಿಯಾ ಮತ್ತು ರಾಜೇಂದ್ರ ಪಾಲ್ ಗಿಂತ ಇವರು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಹಿಂದುಳಿಯಬಾರದು ಎಂದು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಹಿಂದು ಭಯೋತ್ಪಾದಕರು ಎಂಬ ಶಬ್ದವನ್ನು ಸೃಷ್ಟಿಸಿದರು, ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು.’ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
After AAP’s Gopal Italia & Rajendra Pal, not to be outdone in Hindu hatred & votebank politics,Congress’ Shivraj Patil says Shri Krishna taught “Jihad” to Arjun!
— Shehzad Jai Hind (@Shehzad_Ind) October 20, 2022
Congress coined Hindu/Saffron terror, opposed Ram Mandir,Questioned Ram JI’s existence, said Hindutva = ISIS 1/n pic.twitter.com/Xiw7v4mgHa