More

    ಆಂಧ್ರದಲ್ಲಿ ಮುಕ್ತಾಯವಾದ ಭಾರತ್​ ಜೋಡೊ ಯಾತ್ರೆ; ರಾಹುಲ್ ಹೇಳಿದ್ದೇನು?

    ಕರ್ನೂಲ್: ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ (ಅ.21) ಭಾರತ್​ ಜೋಡೊ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

    ಆಂಧ್ರದ ಜನರಿಗೆ ಬರೆದ ಪತ್ರದಲ್ಲಿ ರಾಹುಲ್​ ಗಾಂಧಿ ‘ಇಂದು ಭಾರತ್​ ಜೋಡೋ ಯಾತ್ರೆ ಆಂಧ್ರದಲ್ಲಿ ಪ್ರಯಾಣವನ್ನು ಪೂರ್ತಿಗೊಳಿಸಿದೆ. ನಾವು ಇಲ್ಲಿನ ಜನರ ಹೃದಯ ತುಂಬಿದ ಪ್ರೀತಿ, ಬೆಂಬಲಕ್ಕೆ ಮತ್ತು ಪ್ರೋತ್ಸಾಹಕ್ಕೆ ಸದಾ ಋಣಿ ಆಗಿರುತ್ತೇವೆ. ಇದೊಂದು ಅದ್ಭುತ ಹಾಗೂ ಪ್ರಿಯ ನೆನಪಾಗಿ ಉಳಿಯಲಿದೆ’ ಎಂದರು.

    ‘ಸಾರ್ವಜನಿಕರೊಂದಿಗೆ ಸಂಭಾಷಣೆ ನಡೆಸುವ ಮೂಲಕ ಜನರ ಸಮಸ್ಯೆಗಳು ಮುನ್ನೆಲೆಗೆ ಬರಲು ಸಾಧ್ಯವಾಗಿದೆ. ಕಾಂಗ್ರೆಸ್​ ಪಕ್ಷ ಅಮರಾವತಿಯನ್ನು ಒಂದು ರಾಜಧಾನಿಯಾಗಿ ಬೆಳೆಸಲು ಶ್ರಮ ಪಡಲಿದೆ’ ಎಂದು ರಾಹುಲ್ ಗಾಂಧಿ ಯಾತ್ರೆಯ ಕೊನೆಗೆ ಹೇಳಿದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts