ಉಡುಪಿ: ಪ್ರಖ್ಯಾತ ಪುಣ್ಯಸ್ಥಳವಾಗಿರುವ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಸ್ಥಾನಕ್ಕೆ ಈಗಾಗಲೇ ನಡೆದಿರುವ ಆಯ್ಕೆ ಅಸಿಂಧುಗೊಂಡಿದೆ. ಪ್ರಸ್ತುತ ಆಯ್ಕೆಯನ್ನು ಅಸಿಂಧು ಎಂದು ಹೇಳಿ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿರುವ ಕೊಲ್ಲೂರಿನ ಧರ್ಮದರ್ಶಿ ಸ್ಥಾನದ ಕುರಿತ ಮುಂದಿನ ಬೆಳವಣಿಗೆ ಇದೀಗ ಸ್ಥಳೀಯವಾಗಿ ಭಾರಿ ಕುತೂಹಲ ಕೆರಳಿಸಿದೆ. ಚಂದ್ರಶೇಖರ್ ಶೆಟ್ಟಿ ಎಂಬವರನ್ನು ಕೊಲ್ಲೂರು ದೇವಸ್ಥಾನದ ಧರ್ಮದರ್ಶಿಯಾಗಿ ಈ ಹಿಂದೆ ಆಯ್ಕೆ ಮಾಡಲಾಗಿತ್ತು. ಆ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ ಕೆಲವರು ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ನಾಳೆ ಬೆಳ್ಳಂಬೆಳಗ್ಗೆ ‘ಊರ್ವಶಿ’ ಬಳಿ ‘ಹುಲಿಹಿಂಡು’; ಗರುಡ.. ವೃಷಭ.. ಮತ್ತು ಟೈಗರ್ ಡ್ಯಾನ್ಸ್!
ಅದರಲ್ಲೂ ಚಂದ್ರಶೇಖರ್ ಶೆಟ್ಟಿ ಅವರು ಧರ್ಮದರ್ಶಿಯಾಗಿ ಆಯ್ಕೆ ಆಗುವ ಒಂದು ತಿಂಗಳ ಮೊದಲು ದೇವಸ್ಥಾನದ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತೀರ್ಪು ಹೊರಹೊಮ್ಮಿದ್ದು, ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯೇ ಮುಳುವಾಗಿದೆ.
ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್ಸ್ಪೆಕ್ಟರ್’ ಝಾನ್ಸಿ..
ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕವೂ ಸಭೆಯಲ್ಲಿ ಚಂದ್ರಶೇಖರ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಸದಸ್ಯತ್ವ ಹೊಂದಿಲ್ಲದವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವುದು ಹೇಗೆ ಎಂದು ಪ್ರಶ್ನಿಸಿರುವ ಹೈಕೋರ್ಟ್, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿದೆ.
ಈತನ ಹುಟ್ಟೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!
ಬೆಡ್ ಕೇಳಿದ ನಟಿಗೆ ಸಿಕ್ಕಿದ್ದು ಅರ್ಧಮಂಚ; ಒಂದು ಕೊಟ್ಟು ಇನ್ನೊಂದು ಕೊಟ್ಟಿಲ್ಲ ಎಂದು ಬೇಸರ..
ಮದ್ವೆ ಆದ್ಮೇಲೆ ಫಸ್ಟ್ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್