ಕೋಲಾರ/ಗದಗ: ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದ್ದನ್ನು ಖಂಡಿಸಿ ನಾಳೆ ಕೋಲಾರ ಬಂದ್ಗೆ ಕರೆ ನೀಡಲಾಗಿದೆ. ಈ ಬಂದ್ನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭಾಗವಹಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅವರಿಗೆ ಜಿಲ್ಲೆಯನ್ನು ಪ್ರವೇಶಿಸದಂತೆ ನಿಷೇಧ ಹೇರಿ ಕೋಲಾರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಮುನ್ನ ಮುತಾಲಿಕ್ ಅವರು ಕೋಮು ಸಾಮರಸ್ಯ ಕದಡುವಂಥ ಪ್ರಚೋದನಾ ಭಾಷಣ ಮಾಡಿರುವ ಉದಾಹರಣೆ ಇದೆ, ಅವರ ಮೇಲೆ ಈ ಕುರಿತಾಗಿ ಸುಮಾರು 30 ಪ್ರಕರಣಗಳೂ ದಾಖಲಾಗಿದ್ದವು. ಆದ್ದರಿಂದ ಜಿಲ್ಲೆಯಲ್ಲಿ ಶಾಂತಿ ಸಂರಕ್ಷಿಸುವ ನಿಟ್ಟಿನಲ್ಲಿ ಮುತಾಲಿಕ್ ಅವರು ನವೆಂಬರ್ 18 ರಿಂದ ನ. 24 ರವರೆಗಿನ 7 ದಿನಗಳು ಕೋಲಾರ ಜಿಲ್ಲೆಗೆ ಭೇಟಿ ನೀಡುವುದಾಗಲಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಥವಾ ಇನ್ಯಾವುದೇ ಆಡಿಯೋ-ವಿಡಿಯೋ ಮಾಧ್ಯಮದ ಮುಖಾಂತರ ಭಾಷಣ ಮಾಡುವುದಾಗಲೀ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಇಂದು(ನ.17) ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಲಿಯಾಂಡರ್ ಪೇಸ್ ಸ್ಪರ್ಧೆ, ಸಿಎಂ ಅಭ್ಯರ್ಥಿ ಆಗ್ತಾರಾ ಟೆನಿಸ್ ದಿಗ್ಗಜ?
ಮುತಾಲಿಕ್ ಆಕ್ರೋಶ: ಕೋಲಾರ ಜಿಲ್ಲಾಡಳಿತದ ಈ ಆದೇಶದ ವಿರುದ್ಧ ಗದಗದಲ್ಲಿ ಪ್ರತಿಕ್ರಿಯಿಸಿರುವ ಪ್ರಮೋದ್ ಮುತಾಲಿಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ಪೊಲೀಸರು ನನಗೆ ನಿಷೇಧ ಆದೇಶ ತಲುಪಿಸಿದ್ದಾರೆ. ಸುಳ್ಳು ಕೇಸ್ ನಮೂದಿಸಿ ಪ್ರವೇಶ ನಿಷೇಧ ಮಾಡಿದ್ದಾರೆ. ತಕ್ಷಣ ಬೆಂಗಳೂರಿಗೆ ಹೋಗಿ ಈ ಆದೇಶಕ್ಕೆ ತಡೆ ತಗೊಂಡು ನಾಳೆ ಕೋಲಾರಕ್ಕೆ ಹೋಗ್ತೀನಿ ಎಂದಿದ್ದಾರೆ.
“ನಾನು ಕಾನೂನ ಬಾಹಿರ ಭಾಷಣ ಮಾಡಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಬಿಜೆಪಿ ಸರ್ಕಾರ ತಕ್ಷಣ ಜಿಲ್ಲಾಡಳಿತಕ್ಕೆ ನಿಷೇಧ ಆದೇಶ ವಾಪಸ್ ಪಡೆಯುವಂತೆ ಸೂಚಿಸಬೇಕು. ತಾಲಿಬಾನ್ ರೀತಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಆರ್.ಎಸ್.ಎಸ್., ವಿಎಚ್.ಪಿ., ಬಿಜೆಪಿ ಸೇರಿ ಹಿಂದೂ ಸಂಘಟನೆಗಳು ನಾಳಿನ ಬಂದ್ಗೆ ಬೆಂಬಲ ನೀಡಿವೆ” ಎಂದು ಮುತಾಲಿಕ್ ಹೇಳಿದ್ದಾರೆ.
ರೈತರ ವಿರುದ್ಧದ ಎಲ್ಲಾ ಕೇಸುಗಳು ರದ್ದು! ಚುನಾವಣೆ ಸಮಯಕ್ಕೆ ಮಹತ್ವದ ನಿರ್ಧಾರ!
ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ