ಮುಂಬೈ: ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪ್ರೀಮಿಯರ್ ಲೀಗ್ (ಪಿಎಸ್ಎಲ್) ಅನ್ನು ಅರ್ಧಕ್ಕೆ ಬಿಟ್ಟು ಬಂದ ವೆಸ್ಟ್ ಇಂಡೀಸ್ ಮಾಜಿ ನಾಯಕ ಕೈರಾನ್ ಪೊಲ್ಲಾರ್ಡ್ ಪಾಕ್ನಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಪಿಎಸ್ಎಲ್ನಲ್ಲಿ ಕರಾಚಿ ಕಿಂಗ್ಸ್ ತಂಡದ ಭಾಗವಾಗಿದ್ದ ಪೊಲ್ಲಾರ್ಡ್ ಅನಂತ್ ಅಂಬಾನಿ-ರಾಧಿಕಾರ ಮರ್ಚೆಂಟ್ ಪ್ರೀ ವೆಡ್ಡಿಂಗ್ನಲ್ಲಿ ಪಾಲ್ಗೊಳ್ಳಲು ಮಾರ್ಚ್ 1ರಂದು ಗುಜರಾತಿನ ಜಾಮ್ನಗರಕ್ಕೆ ಬಂದಿಳಿದರು.
ಒಂದೆಡೆ ಪೊಲ್ಲಾರ್ಡ್ ಜಾಮ್ನಗರಕ್ಕೆ ಆಗಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೆ, ಮತ್ತೊಂದೆಡೆ ಅದೇ ವಿಡಿಯೋ ಪಾಕ್ನಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ಬಾಬರ್ ಅಜಾಮ್ ನೇತೃತ್ವದ ಪೇಶಾವರ್ ಝಲ್ಮಿ ವಿರುದ್ಧ ಫೆ.21ರಂದು ನಡೆದ ಪಿಎಸ್ಎಲ್ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಪೊಲ್ಲಾರ್ಡ್ ಕೇವಲ 21 ಎಸೆತಗಳಲ್ಲಿ 49 ರನ್ ಬಾರಿಸುವ ಮೂಲಕ ಕರಾಚಿ ಕಿಂಗ್ಸ್ ತಂಡದ ಗೆಲುವಿಗೆ ಕಾರಣರಾದರು. ಒಳ್ಳೆಯ ಫಾರ್ಮ್ನಲ್ಲಿ ಇರುವಾಗಲೇ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ನಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿರುವುದು ಪಾಕ್ನಲ್ಲಿನ ಕೆಲವರ ಆಕ್ರೋಶಕ್ಕೆ ಗುರಿಯಾಗಿದೆ.
ಐಷಾರಾಮಿ ಕಾರ್ಯಕ್ರಮವನ್ನು ಸುಲಭವಾಗಿ ಆಯ್ಕೆ ಮಾಡಿಕೊಂಡ ಪೊಲ್ಲಾರ್ಡ್ ಅವರ ಸಮರ್ಪಣಾ ಮನೋಭಾವದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲ್ಲಾರ್ಡ್ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಫ್ರಾಂಚೈಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅದರಲ್ಲೂ ಭಾರತಕ್ಕೆ ಬಂದಿರುವುದರಿಂದ ಪಾಕ್ನಲ್ಲಿರುವ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಇದೇ ಸಂದರ್ಭದಲ್ಲಿ ಕೆಲ ಭಾರತೀಯರು ಮೀಮ್ಸ್ಗಳನ್ನು ಹರಿಬಿಡುವ ಮೂಲಕ ಪಾಕಿಸ್ತಾನ ಸೂಪರ್ ಲೀಗ್ನ ಸ್ಥಾನಮಾನ ನೋಡಿ ನಗುತ್ತಿದ್ದಾರೆ. ಅಂದಹಾಗೆ ಪೊಲ್ಲಾರ್ಡ್ ಅವರು ಐಪಿಎಲ್ನಲ್ಲಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಒಡೆತನದ ಐಪಿಎಲ್ ಟೀಮ್ ಮುಂಬೈ ಇಂಡಿಯನ್ಸ್ ಭಾಗವಾಗಿದ್ದರು. ಇದಿಷ್ಟೇ ಅಲ್ಲದೆ, ರಿಲಯನ್ಸ್ ಒಡೆತನ ಎಸ್ಎ20 ಮತ್ತು ಐಎಲ್ಟಿ20 ತಂಡ ಭಾಗವಾಗಿದ್ದಾರೆ.
ಭಾರಿ ಟ್ರೋಲ್ಗಳ ನಡುವೆ. ಪೊಲ್ಲಾರ್ಡ್ ಈಗ ಪಾಕಿಸ್ತಾನಕ್ಕೆ ಮರಳಿದ್ದು, ಇಂದು ಮುಲ್ತಾನ್ ಸುಲ್ತಾನ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡಲಿದ್ದಾರೆ. (ಏಜೆನ್ಸೀಸ್)
ಏಕಕಾಲದಲ್ಲಿ 5 ಸರ್ಕಾರಿ ಕೆಲಸ ಗಿಟ್ಟಿಸಿದ ಯುವತಿ! ಆಯ್ದುಕೊಂಡ ಹುದ್ದೆ, ಕಾರಣ ತಿಳಿದ್ರೆ ಮೆಚ್ಚಿಕೊಳ್ತೀರಾ
ಗ್ಯಾರಂಟಿ ಯೋಜನೆಯ ಪ್ರಯೋಜನ ತೆರೆದಿಟ್ಟ ವೃದ್ಧೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ಕೆ ಮೆಚ್ಚುಗೆ
ಕಡು ಬಡತನದಿಂದಾಗಿ ಕನಸಾಗೇ ಉಳಿದಿದ್ದ ತಾಯಿಯ ಆಸೆಯನ್ನು ಈಡೇರಿಸಿದ ಮಕ್ಕಳು! ಮನಕಲಕುತ್ತೆ ಈ ಸ್ಟೋರಿ