More

    ಕೆಂಗೇರಿಯಲ್ಲಿ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸ್ವಗ್ರಾಮದಲ್ಲಿ ಅವಕಾಶ ಕಲ್ಪಿಸದ ಪೊಲೀಸರು

    ಮಂಡ್ಯ: ಕೆಂಗೇರಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸ್ವಗ್ರಾಮದಲ್ಲಿ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಕುಟುಂಬದವರು ಶವವನ್ನು ಮತ್ತೆ ಕೆಂಗೇರಿಗೆ ಸಾಗಿಸಿದ ಘಟನೆ ಜರುಗಿದೆ.

    ಚೌಡಯ್ಯ (59) ಎಂಬುವವರು ಕೆಂಗೇರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಶವವನ್ನು ಸ್ವಗ್ರಾಮ ಮದ್ದೂರು ತಾಲೂಕಿನ ದುಂಡನಹಳ್ಳಿಗೆ ಸಾಗಿಸಿ ಅಂತ್ಯಸಂಸ್ಕಾರ ಮಾಡಲು ಕುಟುಂಬದವರು ನಿರ್ಧರಿಸಿ ಸ್ವಗ್ರಾಮಕ್ಕೆ ತೆರಳಿದ್ದರು.

    ಇದನ್ನೂ ಓದಿ   ನನಗೆ ಕರೊನಾ ಬಂದಿದೆಯಾ ಅಂತ ಕೇಳಲು ದೇವರ ಬಳಿಗೆ ಹೋದ ಸೋಂಕಿತ!

    ಕೆಂಗೇರಿಯಿಂದ ಶವ ತಂದು ಅಂತ್ಯ ಸಂಸ್ಕಾರ ಮಾಡುತ್ತಿರುವ ವಿಷಯ ತಿಳಿದ ಗ್ರಾಮಸ್ಥರು ಕೆಸ್ತೂರು ಪೊಲೀಸರಿಗೆ ದೂರು ನೀಡಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಕುಟುಂಬದ ಸದಸ್ಯರ ಜತೆ ಚರ್ಚೆ ನಡೆಸಿ ಶವವನ್ನು ಕೆಂಗೇರಿಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದರು.

    ಅನ್ಯ ಮಾರ್ಗ ಇಲ್ಲದೆ ಸಂಬಂಧಿಕರು ಶವವನ್ನು ಮತ್ತೆ ಕೆಂಗೇರಿಗೆ ಸಾಗಿಸಿದರು.

    ಕರೊನಾ ಎಫೆಕ್ಟ್ ಹಿನ್ನೆಲೆ ಹೊಸ ಶೈಕ್ಷಣಿಕ ವರ್ಷ ಹೀಗಿರುತ್ತೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts