ಮುಂಬೈ: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಚಿತ್ರರಂಗಕ್ಕೆ ಬಂದು ಹೆಚ್ಚು ಸಮಯವಾಗಿಲ್ಲ. ಹಾಗೆಯೇ ಅಭಿನಯಿಸಿದ ಚಿತ್ರಗಳ ಸಂಖ್ಯೆಯೂ ಹೆಚ್ಚೇನಿಲ್ಲ. ಇಲ್ಲಿಯವರೆಗೂ ನಟರಾಗಿದ್ದ ಆರ್ಯನ್, ಇದೀಗ ನಿರ್ಮಾಪಕರೂ ಆಗಿದ್ದಾರೆ. ಮುಂದಿನ ತಿಂಗಳು ಕಾರ್ತಿಕ್ ಅಭಿನಯದ ‘ಶೆಹಜಾದ’ ಚಿತ್ರವು ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ನಿರ್ಮಾಪಕರಲ್ಲಿ ಅವರೂ ಒಬ್ಬರು.
ಇದನ್ನೂ ಓದಿ: ‘ದಿ’ ಸಿನಿಮಾಗೆ ‘ಸಿಂಪಲ್’ ಸುನಿ ಸಾಥ್ … ಶೀರ್ಷಿಕೆ ಬಿಡುಗಡೆ
ಹೀರೋಗಳು ನಿರ್ಮಾಣ ಕ್ಷೇತ್ರಕ್ಕಿಳಿಯುವುದು, ಚಿತ್ರಗಳನ್ನು ನಿರ್ಮಿಸುವುದು ಹೊಸ ವಿಷಯವಲ್ಲ. ಈಗಾಗಲೇ ಎಲ್ಲ ಭಾಷೆಗಳಲ್ಲೂ ಸಾಕಷ್ಟು ಹೀರೋಗಳು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ತಿಕ್ ಸಹ ಈ ಪಟ್ಟಿಗೆ ಹೇಗೆ ಸೇರಿಕೊಂಡರು ಎಂಬುದಕ್ಕೆ ಒಂದು ಸಣ್ಣ ಕಥೆ ಇದೆ.
ಕಾರ್ತಿಕ್ಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಐಡಿಯಾ ಇರಲಿಲ್ಲವಂತೆ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ನಿರ್ಮಾಣಕ್ಕೆ ಇಳಿಯಬೇಕಾಯಿತಂತೆ. ಅದೇನೆಂದರೆ, ‘ಶೆಹಜಾದ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆ ಎದುರಾಯಿತಂತೆ. ಚಿತ್ರ ನಿಂತು ಹೋಗುವ ಪರಿಸ್ಥಿತಿ ಎದುರಾದಾಗ, ಕಾರ್ತಿಕ್ ಆರ್ಯನ್ ಮುಂದೆ ಬಂದು ಚಿತ್ರದ ಸಂಭಾವನೆಯನ್ನು ಬಿಟ್ಟುಬಿಡುವುದಾಗಿ ಹೇಳಿದರಂತೆ. ಹಾಗಾಗಿ, ಅವರಿಗೂ ನಿರ್ಮಾಪಕರ ಸ್ಥಾನಮಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭಟ್ಟರ ‘ಗರಡಿ’ಯಲ್ಲಿ ಕಸರತ್ತು ಮುಕ್ತಾಯ; ಮಾರ್ಚ್ನಲ್ಲಿ ಬಿಡುಗಡೆ ಸಾಧ್ಯತೆ
‘ಶೆಹಜಾದ’ ಚಿತ್ರವು ತೆಲುಗಿನ ‘ಅಲಾ ವೈಕುಂಟಪುರಂಲೋ’ ಚಿತ್ರದ ರೀಮೇಕ್ ಆಗಿದ್ದು, ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ಗೆ ನಾಯಕಿಯಾಗಿ ಕೃತಿ ಸನಾನ್ ಅಭಿನಯಿಸಿದ್ದು, ಮಿಕ್ಕಂತೆ ಮನೀಷಾ ಕೊಯಿರಾಲ, ರೊನಿತ್ ರಾಯ್, ಪರೇಶ್ ರಾವಲ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರವು ಫೆಬ್ರವರಿ 10ರಂದು ಬಿಡುಡೆಯಾಗುತ್ತಿದೆ.
ಐಎಂಡಿಬಿ 2023ರ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಒಂದೇ ಚಿತ್ರ … ಯಾವುದದು?