ಬೆಂಗಳೂರು: ಖ್ಯಾತ ಪತ್ರಕರ್ತ, ಕಾದಂಬರಿಕಾರ ರವಿ ಬೆಳಗೆರೆ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈಗಾಗಲೇ ಅಕ್ಷರ ಮಾಂತ್ರಿಕನ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿನಿಮಾ ಮಂದಿ ಸಹ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಉಪ್ಪಿ ರಿಟರ್ನ್ಸ್ – 50ನೇ ಚಿತ್ರದ ಮೂಲಕ ನಿರ್ದೇಶನಕ್ಕೆ
ಕಳೆದ ವರ್ಷ ಪ್ರಸಾರವಾದ ‘ಬಿಗ್ ಬಾಸ್’ ಸಂದರ್ಭದಲ್ಲಿನ ಒಂದು ಫೋಟೋ ಶೇರ್ ಮಾಡಿರುವ ನಟ ಸುದೀಪ್, ‘ವೇದಿಕೆ ಮೇಲೆ ತೆಗೆದಂತಹ ಈ ಚಿತ್ರವು ಕೊನೆಯ ತನಕ ನನ್ನ ಜತೆಗಿರುತ್ತದೆ. ರವಿ ಬೆಳಗೆರೆ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಹಿರಿಯ ನಟ ಜಗ್ಗೇಶ್, ‘ಯಾರಿಗೂ ಅರ್ಥವಾಗದ ಮನುಷ್ಯ. ಒಮ್ಮೆ ಈತನ ಮಾತು ಸರಿ ಅನಿಸುತ್ತದೆ. ಕೆಲವೊಮ್ಮೆ ಬೇಕಿತ್ತಾ ಈ ಮಾತು ಅನಿಸುತ್ತದೆ. 30 ವರ್ಷದಿಂದ ಬಲ್ಲೆ. ಆದರೂ ನನಗೆ ಅರ್ಥವಾಗದ ಮನುಷ್ಯ. ಸಾಮಾನ್ಯ ಅಸಮಾನ್ಯ ಆದದ್ದು ಮಾತ್ರ ಅನುಸರಣೀಯ. ರವಿ ಅವರ ಖಾಸ್ಬಾತ್ ಬರವಣಿಗೆ ನನ್ನ ಅಚ್ಚುಮೆಚ್ಚು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ.
ನಿರ್ದೇಶಕ ಶಶಾಂಕ್ ಸಹ ರವಿ ಬೆಳಗೆರೆ ಅವರನ್ನು ನೆನಪಿಸಿಕೊಂಡಿದ್ದು, ‘ದೃಶ್ಯ ಮಾಧ್ಯಮದ ದಾಂಗುಡಿಯ ನಡುವೆ, ಒಂದು ತಲೆಮಾರನ್ನೇ ಓದುವ ಹವ್ಯಾಸಕ್ಕೆ ಒಗ್ಗಿಸಿದ ಅದ್ಭುತ ಲೇಖಕ ನೀವು. ನಿಮ್ಮ ಬರವಣಿಗೆ ಸದಾ ಅಮರ. ಹೋಗಿ ಬನ್ನಿ ಬೆಳಗೆರೆ ಸರ್…’ ಎಂದು ಅವರು ವಿದಾಯ ಕೋರಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಫ್ಯಾಂಟಸಿ – ಅಗ್ನಿಸಾಕ್ಷಿ ಬೆಡಗಿಗೆ ಇಲ್ಲಿಯೂ ನೆಗೆಟಿವ್ ಶೇಡ್
‘ಮುಂಜ್ ಮುಂಜಾನೆ ರವಿ ಮುಳುಕಿದನು ಎಂಬ ಸುದ್ದಿ ಬೇಸರ ತರಿಸಿತು. ನಿರೂಪಣೆ, ವಾಚನ, ಬರಹ, ಮಾತು, ನಟನೆ ಎಲ್ಲದರಲ್ಲೂ ಬೆಳಗಿದ್ದ ರವಿ ಬೆಳಗೆರೆ ಅವರಿಗೆ ಅಂತಿಮ ನಮನಗಳು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ, ಆತ್ಮಕ್ಕೆ ಶಾಂತಿ ಲಭಿಸಲಿ’ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಜತೆ ಇದ್ದ ರವಿ ಬೆಳಗೆರೆನೇ ಬೇರೆ: ಬಿಗ್ಬಾಸ್ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟ ದೀಪಿಕಾ ದಾಸ್