ಲಖನೌ: ಸತತ ನಾಲ್ಕು ಬಾರಿ ಕರೊನಾ ಪಾಸಿಟಿವ್ ವರದಿಯಿಂದ ಕಂಗಾಲಾಗಿ 5ನೇ ವರದಿಯಲ್ಲಿ ನೆಗೆಟಿವ್ ಫಲಿತಾಂಶದಿಂದ ನಿರಾಳವಾಗಿದ್ದ ಬಾಬಿ ಡಾಲ್ ಸಿಂಗರ್ ಕನ್ನಿಕಾ ಕಪೂರ್ಗೆ ಮುಂದಿನ ದಿನಗಳಲ್ಲಿ ಮತ್ತೊಂದು ಆತಂಕ ಎದುರಾಗುವ ಸಾಧ್ಯತೆ ಇದೆ.
ಕರೊನಾದಿಂದ ಗುಣವಾಗಿ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ ಸಹ ಮುಂದಿನ 14 ದಿನಗಳ ಕಾಲ ಮತ್ತೆ ಕನ್ನಿಕಾ ಅವರು ಕ್ವಾರಂಟೈನ್ನಲ್ಲಿ ಇರಬೇಕಾಗಿದೆ. ಇದರ ನಡುವೆ ಲಖನೌ ಪೊಲೀಸರು ಯೋಜನೆಯೊಂದನ್ನು ರೂಪಿಸುತ್ತಿದ್ದಾರೆ. ಕನ್ನಿಕಾ ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ವಿಚಾರಣೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ.
ಕರೊನಾ ಭೀತಿಯ ನಡುವೆ ಲಂಡನ್ನಿಂದ ತವರಿಗೆ ಮರಳಿ ಟ್ರಾವೆಲ್ ಇತಿಹಾಸವನ್ನು ಮರೆಮಾಚಿ ಗಣ್ಯ ವ್ಯಕ್ತಿಗಳಿದ್ದ ಪಾರ್ಟಿಗಳಲ್ಲಿ ಭಾಗವಹಿಸಿದ್ದಕ್ಕೆ ಕನ್ನಿಕಾ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ದಂಡಸಂಹಿತೆ ಸೆಕ್ಷನ್ 269( ಜೀವಕ್ಕೆ ಮಾರಾಕವಾದ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವರ್ತನೆ) ಮತ್ತು ಸೆಕ್ಷನ್ 270(ಸೋಂಕು ಹರಡುವ ಸಾಧ್ಯತೆಯಿದ್ದರೂ ಕೇಡು ಬಗೆಯುವ ವರ್ತನೆ)ರ ಅಡಿಯಲ್ಲಿ ಕನ್ನಿಕಾ ವಿರುದ್ಧ ಪ್ರಕರಣ ದಾಖಲಾಗಿದೆ.
ಆರಂಭದಲ್ಲಿ ಕರೊನಾ ಸೋಂಕು ತಗುಲಿರುವುದನ್ನು ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಕನ್ನಿಕಾ ಹಂಚಿಕೊಂಡಿದ್ದರು. ಆದರೂ ಕ್ವಾರಂಟೈನ್ನಲ್ಲಿ ಇರದೇ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಕನ್ನಿಕಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ರಕರಣ ದಾಖಲಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸೂಚಿಸಿದ್ದರು. ಅಲ್ಲದೆ, ಆಸ್ಪತ್ರೆಯಲ್ಲೂ ಕನ್ನಿಕಾ ಕಿರಿಕ್ ಮಾಡಿಕೊಂಡು, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. (ಏಜೆನ್ಸೀಸ್)
ತಿಥಿ ಮಾಡಬೇಕಾಗಿರೋದು ಕರೊನಾಕ್ಕೆ … ಜನರಿಗೆ ಜಾಗೃತವಾಗಿರಲು ಕರೆ ನೀಡಿದ ಕ್ರೇಜಿ ಸ್ಟಾರ್
ಮಾಸ್ಕ್ ಲುಕ್! ಫೋಟೋದಲ್ಲಿರುವವರಾರು ಗೊತ್ತಾ?; ಕರೊನಾ ಬಗ್ಗೆ ಏನಂದ್ರು ಈ ಸೂಪರ್ಸ್ಟಾರ್..