More

    ಕರಣ್, ಕಂಗನಾ ಮತ್ತು ಕಸ!

    ಮುಂಬೈ: ಕರಣ್​ ಜೋಹರ್​ ವಿರುದ್ಧ ಕಂಗನಾ ರಣಾವತ್ ಮತ್ತೆ ಗರಂ ಆಗಿದ್ದಾರೆ. ಈ ಬಾರಿಯೂ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರಾ ಎಂದುಕೊಳ್ಳಬೇಡಿ. ಬದಲಿಗೆ ಕಸದ ವಿಚಾರವಾಗಿ ಅವರು ಕರಣ್​ ವಿರುದ್ಧ ತಿರುಗಿ ಬಿದ್ದಿದ್ದಾರೆ.
    ಹೌದು, ಧರ್ಮ ಪ್ರೊಡಕ್ಷನ್​ನಲ್ಲಿ ದೀಪಿಕಾ ಪಡುಕೋಣೆ ಸಿನಿಮಾ ಮಾಡುತ್ತಿದ್ದಾರೆ. ಶಕುನ್​ ಬಾತ್ರಾ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಈಗಾಗಲೇ ಗೋವಾದಲ್ಲಿ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಇದೇ ಚಿತ್ರದ ಶೂಟಿಂಗ್​ ವೇಳೆ ಬಳಸಿದ ಪಿಪಿಯ ಕಿಟ್​ ಅನ್ನು ಎಲ್ಲೆಂದರಲ್ಲಿ ಎಸೆಯಲಾಗಿದ್ದು, ಚಿತ್ರತಂಡದ ಈ ನಡೆ ಹಲವರ ಕಣ್ಣು ಕೆಂಪಾಗಿಸಿದೆ.

    ಇದನ್ನೂ ಓದಿ: ದೊಡ್ಮನೆ ಹುಡುಗನ ದೊಡ್ಮನ್ಸು; ಗಂಗಾವತಿಯ ಸರ್ಕಾರಿ ಶಾಲೆಗೆ ನೆರವು

    ಎಲ್ಲೆಂದರಲ್ಲಿ ಪಿಪಿಇ ಕಿಟ್​ ಎಸೆದ ಫೋಟೋ ಸಮೇತ ನೆಟ್ಟಿಗರೊಬ್ಬರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ದೀಪಿಕಾ ಅಥವಾ ಕರಣ್ ಜೋಹರ್ ಪರಿಸರ ಕಾಳಜಿ ಕುರಿತು ಮಾತನಾಡಿದರೆ ಅವರಿಗೆ ತಾವು ಗೋವಾದಲ್ಲಿ ಮಾಡಿರುವ ಈ ಘನಂಧಾರಿ ಕೆಲಸವನ್ನು ಜ್ಞಾಪಿಸಿ. ಬಯೋ ಮೆಡಿಕಲ್ ತ್ಯಾಜ್ಯಗಳನ್ನು ಪರಿಸರದ ನಡುವೆ ಎಲ್ಲೆಂದರಲ್ಲಿ ಎಸೆದಿದ್ದಾರೆ. ಅವರಿಗೆ ದೊಡ್ಡ ಮೊತ್ತದಲ್ಲಿ ದಂಡ ವಿಧಿಸಬೇಕು’ ಎಂದು ಬರೆದುಕೊಂಡಿದ್ದರು.

    ಇದನ್ನೂ ಓದಿ: ಮತ್ತೊಮ್ಮೆ ರಾಣಿಯಾಗಿ ಸುಮಲತಾ

    ಆ ಪೋಸ್ಟ್ ಶೇರ್​ ಮಾಡಿಕೊಂಡಿರುವ ಕಂಗನಾ, ‘ಸಿನಿಮಾ ಕ್ಷೇತ್ರ ಇದೀಗ ಪರಿಸರ ನಾಶ ಮಾಡುವ ಕೆಲಸಕ್ಕೆ ಕೈಹಾಕಿದೆ. ನೈತಿಕತೆ ಮತ್ತು ಸಂಸ್ಕೃತಿಯನ್ನು ಮರೆತು ವರ್ತಿಸುತ್ತಿದೆ. ಮಾನ್ಯ ಕೇಂದ್ರ ಪರಿಸರ ಸಚಿವ ಪ್ರಕಾಶ್ ಅವರೇ, ಬಾಲಿವುಡ್​ ಬಹುದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಉದ್ಧಟತನವಿದು, ಬೇಜವಾಬ್ದಾರಿಯ ಪರಮಾವಧಿ ಇದು. ದಯವಿಟ್ಟು ನಮ್ಮ ಪರಿಸರವನ್ನು ಕಾಪಾಡಿ’ ಎಂದು ಕೋರಿದ್ದಾರೆ. (ಏಜೆನ್ಸೀಸ್​)

    ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts